ಸ್ಯಾಂಡಲ್ವುಡ್ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ 50ನೇ ಚಿತ್ರ ಬಹುಕೋಟಿ ವೆಚ್ಚದ ಕುರುಕ್ಷೇತ್ರಕ್ಕಾಗಿ ಕಲಾವಿದರ ಆಯ್ಕೆ ಇನ್ನು ಮುಂದುವರೆದಿದೆ.
ಮೆಗಾ ಪ್ರಾಜೆಕ್ಟ್ ಆಗಿರುವ ಕುರುಕ್ಷೇತ್ರವನ್ನು ತ್ರಿಡಿ ಎಫೆಕ್ಟ್ ನಲ್ಲಿ ನಿರ್ದೇಶಕ ನಾಗಣ್ಣ ತಯಾರಿಸುತ್ತಿದ್ದು ಅಂಬರೀಷ್, ರವಿಚಂದ್ರನ್, ಸ್ನೇಹ, ಹರಿಪ್ರಿಯಾ, ರೆಜಿನಾ ಕಾಸ್ಸಂದ್ರ, ಶಶಿಕುಮಾರ್, ಲಕ್ಷ್ಮಿ, ಸಾಯಿ ಕುಮಾರ್, ದ್ಯಾನಿಶ್ ಅಖ್ತರ್ ಸೈಫಿ ಸೇರಿದಂತೆ ಹಲವು ಪಾತ್ರದಾರಿಗಳ ಆಯ್ಕೆ ಈಗಾಗಲೇ ಅಂತಿಮವಾಗಿದೆ. ಇದೀಗ ಚಿತ್ರಕ್ಕೆ ಇನ್ನೊಬ್ಬ ನಟಿ ಆಯ್ಕೆಯಾಗಿದ್ದಾರೆ. ಅದಿತಿ ಆರ್ಯ ಉತ್ತರೆಯಾಗಿ ಆಯ್ಕೆಯಾಗಿದ್ದಾರೆ.
ಕುರುಕ್ಷೇತ್ರದಲ್ಲಿ ನಿಖಿಲ್ ಕುಮಾರ್ ಅಭಿಮನ್ಯು ಪಾತ್ರದಲ್ಲಿ ನಟಿಸುತ್ತಿದ್ದು ಅಭಿಮನ್ಯುವಿನು ಪತ್ನಿ ಉತ್ತರೆಯಾಗಿ ಅದಿತಿ ಆರ್ಯ ನಟಿಸುತ್ತಿದ್ದಾರೆ.
ಅದಿತಿ ಆರ್ಯ 2015ರಲ್ಲಿ ಮಿಸ್ ಇಂಡಿಯಾ ಚಾಂಪಿಯನ್ ಆಗಿದ್ದರು. ನಂತರ ತೆಲುಗಿನ ನಿರ್ದೇಶಕ ಪೂರಿ ಜಗನಾಥ್ ನಿರ್ದೇಶನದ ಇಜಂ ಚಿತ್ರದಲ್ಲಿ ನಂದಮೂರಿ ಕಲ್ಯಾಣ್ ರಾಮ್ ಜತೆಯಾಗಿ ನಟಿಸಿದ್ದರು.
ಬಹುಕೋಟಿ ವೆಚ್ಚದಲ್ಲಿ ನಿರ್ಮಾಣವಾಗುತ್ತಿರುವ ಕುರುಕ್ಷೇತ್ರ ಚಿತ್ರದ ಶೂಟಿಂಗ್ ಹೈದರಾಬಾದ್ ನಲ್ಲಿ ನಡೆಯುತ್ತಿದ್ದು ಚಿತ್ರವನ್ನು ಮುನಿರತ್ನ ನಿರ್ಮಾಣ ಮಾಡುತ್ತಿದ್ದು ವಿ.ಹರಿಕೃಷ್ಣ ಸಂಗೀತ ಸಂಯೋಜಿಸಲಿದ್ದಾರೆ.