ತಮಿಳು ಸೂಪರ್ಸ್ಟಾರ್ ರಜನಿಕಾಂತ್ 
ಸಿನಿಮಾ ಸುದ್ದಿ

ಆಧ್ಯಾತ್ಮ ನನಗೆ ಶಕ್ತಿ ತುಂಬುತ್ತದೆ: ಸೂಪರ್ಸ್ಟಾರ್ ರಜನಿ

ಪರಮಹಂಸ ಯೋಗಾನಂದ ಅವರ 'ಡಿವೈನ್ ರೋಮ್ಯಾನ್ಸ್' ಪುಸ್ತಕದ ತಮಿಳು ಅನುವಾದವನ್ನು ಶ್ರೀ ರಾಘವೇಂದ್ರ ಕಲ್ಯಾಣ ಮಂಟಪದಲ್ಲಿ ತಮಿಳು ಸೂಪರ್ಸ್ಟಾರ್ ರಜನಿಕಾಂತ್ ಅನಾವರಣ ಮಾಡಿದ್ದಾರೆ.

ಚೆನೈ: ಪರಮಹಂಸ ಯೋಗಾನಂದ ಅವರ 'ಡಿವೈನ್ ರೋಮ್ಯಾನ್ಸ್' ಪುಸ್ತಕದ ತಮಿಳು ಅನುವಾದವನ್ನು ಶ್ರೀ ರಾಘವೇಂದ್ರ ಕಲ್ಯಾಣ ಮಂಟಪದಲ್ಲಿ ತಮಿಳು ಸೂಪರ್ಸ್ಟಾರ್ ರಜನಿಕಾಂತ್ ಅನಾವರಣ ಮಾಡಿದ್ದಾರೆ. ಇದು ಯೋಗೋದ ಸತ್ಸಾನ ಸಂಘ ಭಾರತದ ಶತಾಬ್ದಿ ಕಾರ್ಯಕ್ರಮವಾಗಿತ್ತು. 
ಈ ಸಂದರ್ಭದಲ್ಲಿ ತಮ್ಮ ಜೀವನದಲ್ಲಿ ಆಧ್ಯಾತ್ಮ ಹಾಸುಹೊಕ್ಕಾಗಿರುವ ಬಗ್ಗೆ ಮಾತನಾಡಿದ ರಜನಿ "ಆಧ್ಯಾತ್ಮ ನನಗೆ ಬಹಳ ಬಲ ನೀಡುತ್ತದೆ. ಹೆಸರು, ಕೀರ್ತಿ ಮತ್ತು ಹಣಕ್ಕಾಗಿ ನಾನು ಆಧ್ಯಾತ್ಮದ ಮೊರೆ ಹೋಗುತ್ತೇನೆ ಮತ್ತು ಅದರಿಂದ ಶಕ್ತಿ ಪಡೆಯುತ್ತೇನೆ" ಎಂದಿದ್ದಾರೆ. 
ತಮ್ಮ ಇಂದಿನ ಈ ಅತ್ಯುತ್ತಮ ಸ್ಥಿತಿಗೆ ಆಧ್ಯಾತ್ಮವೇ ಕಾರಣ ಎಂದಿರುವ ರಜನಿ ಮೊದಲಿಗೆ ತಾವು ಗುರು ಸಚ್ಚಿದಾನಂದ ಅವರನ್ನು ಅನುಸರಿಸುತ್ತಿದ್ದನ್ನು ಮತ್ತು ನಂತರ ರಾಮಕೃಷ್ಣ ಪರಮಹಂಸರ ಅನುಯಾಯಿ ಆಗಿದ್ದನ್ನು ಮೆಲುಕು ಹಾಕಿದ್ದಾರೆ. "ಆನು ಹಲವು ಗುರುಗಳನ್ನು ಅನುಸರಿಸುತ್ತೇನೆ. ರಾಘವೇಂದ್ರ ಸ್ವಾಮಿಗಳಿಂದ ನಾನು ಭಕ್ತಿ ಕಲಿತೆ ಮತ್ತು ರಮಣ ಮಹರ್ಷಿಗಳಿಂದ ಆತ್ಮಶೋಧನೆಯ ಪಾಠ ಕಲಿತೆ" ಎಂದಿದ್ದಾರೆ. 

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಅಮೆರಿಕ ನಿಯೋಜಿತ ರಾಯಭಾರಿ ಸೆರ್ಗಿಯೊ ಗೋರ್- ಮೋದಿ, ಜೈಶಂಕರ್ ಭೇಟಿ; Tariff ಒತ್ತಡದ ನಡುವೆ ಭಾರತ-ಅಮೆರಿಕ ಸಂಬಂಧ ಸುಧಾರಣೆಯ ಸೂಚನೆ?

ಅಫ್ಘಾನಿಸ್ತಾನ ನಮ್ಮೊಂದಿಗೆ ಗಡಿ ಹಂಚಿಕೊಂಡಿರುವ ನೆರೆ ರಾಷ್ಟ್ರ- S Jaishankar; ಭಾರತದೊಂದಿಗೆ POK ವಿಲೀನದ ಸುಳಿವು; ಚೀನಾಗೂ ಶಾಕ್!

ಅಬ್ಬಬ್ಬಾ ರೋಮಾಂಚನ: ಅದ್ಭುತ ಸೃಷ್ಟಿಸಿದ ರಿಷಬ್ ಶೆಟ್ಟಿಗೆ ರಾಷ್ಟ್ರಪ್ರಶಸ್ತಿ ಕೊಡಲೇಬೇಕು - ತಮಿಳು ನಿರ್ದೇಶಕ ಅಟ್ಲೀ

Pakistan: ಇಸ್ರೇಲ್ ವಿರೋಧಿ ಪ್ರತಿಭಟನಾ ಜಾಥಾ, ಪೋಲೀಸರ ಗುಂಡೇಟಿಗೆ 11 ಮಂದಿ ಬಲಿ! Video

ಉತ್ತರ ಪ್ರದೇಶಕ್ಕೆ ಭೇಟಿ ನೀಡಿದ ತಾಲಿಬಾನ್ ಸಚಿವನಿಗೆ ಅದ್ಧೂರಿ ಸ್ವಾಗತ, ಸರ್ಕಾರದ ಭದ್ರತೆ; ಯೋಗಿಗೆ ನಾಚಿಕೆಯಾಗಬೇಕು- SP ಸಂಸದ ಶಫೀಕರ್

SCROLL FOR NEXT