ಗಣೇಶ್ 
ಸಿನಿಮಾ ಸುದ್ದಿ

'ಆರೆಂಜ್' ಮೂಲಕ ಹಿಂದಿರುಗಿದ ಗಣೇಶ್-ಪ್ರಶಾಂತ್ ರಾಜ್ ಜೋಡಿ

ಮತ್ತೊಂದು ಸಿನೆಮಾ 'ಆರೆಂಜ್'ಗೆ ನಟ-ನಿರ್ದೇಶಕ ಹಿಟ್ ಜೋಡಿ ಗಣೇಶ್ ಮತ್ತು ಪ್ರಶಾಂತ್ ರಾಜ್ ಹಿಂದಿರುಗಿದ್ದಾರೆ.

ಬೆಂಗಳೂರು: ಮತ್ತೊಂದು ಸಿನೆಮಾ 'ಆರೆಂಜ್'ಗೆ ನಟ-ನಿರ್ದೇಶಕ ಹಿಟ್ ಜೋಡಿ ಗಣೇಶ್ ಮತ್ತು ಪ್ರಶಾಂತ್ ರಾಜ್ ಹಿಂದಿರುಗಿದ್ದಾರೆ. 
೨೦೧೬ ರಲ್ಲಿ ಬಿಡುಗಡೆಯಾಗಿದ್ದ ಈ ಜೋಡಿಯ ಹಿಂದಿನ ಚಿತ್ರ 'ಜೂಮ್' ಶತ ದಿನ ಪೂರೈಸಿ ಯಶಸ್ವಿ ಚಿತ್ರ ಎನಿಸಿಕೊಂಡಿತ್ತು. ಈಗ ಶಿರಡಿಯಲ್ಲಿ ಶ್ರೀ ಸಾಯಿಬಾಬಾ ಆಶೀರ್ವಾದದೊಂದಿಗೆ  ಹೊಸ ಸಿನೆಮಾಗೆ ಮುಹೂರ್ತವನ್ನು ಸದ್ದಿಲ್ಲದೇ ನೆರವೇರಿಸಿದ್ದಾರೆ. 
ಗಣೇಶ್ ಪತ್ನಿ ಶಿಲ್ಪಾ, ನಟ ಮತ್ತು ನಿರ್ದೇಶಕರ ಕೆಲವು ಗೆಳೆಯರಷ್ಟೇ ಮುಹೂರ್ತದಲ್ಲಿ ಭಾಗಿಯಾಗಿದ್ದರು ಎಂದು ತಿಳಿದುಬಂದಿದೆ.
"ಗಣೇಶ್ ಅವರ ಹುಟ್ಟುಹಬ್ಬವಾದ ಜುಲೈ ೨ ರಿಂದ ಈ ಸಿನೆಮಾ ಪ್ರಾರಂಭಿಸಲು ಯೋಜಿಸಿಕೊಂಡಿದ್ದೇನೆ" ಎನ್ನುತ್ತಾರೆ ನಿರ್ದೇಶಕ ಪ್ರಶಾಂತ್. 
ಬಣ್ಣವೊಂದರ ಹೆಸರಿನ ಶೀರ್ಷಿಕೆಯ ಈ ಚಿತ್ರದ ಬಗ್ಗೆ ಕುತೂಹಲ ಮೂಡಿದ್ದು, ಪ್ರೀತಿಯ ಹೊಸ ಬಣ್ಣ ಕಿತ್ತಳೆ ಆಗಲಿದೆ ಎನ್ನುತ್ತಾರೆ ನಿರ್ದೇಶಕ. "ಇಂದಿನ ದಿನಗಳ ರೋಮ್ಯಾನ್ಸ್ ಬಗ್ಗೆ ನನ್ನ ಚಿತ್ರ" ಎನ್ನುತ್ತಾರೆ. 
ಪ್ರಶಾಂತ್ ಅವರೇ ಈ ಸಿನೆಮಾ ನಿರ್ಮಿಸಲಿದ್ದು, 'ಜೂಮ್' ನಲ್ಲಿ ದುಡಿದ ತಂತ್ರಜ್ಞರನ್ನು ಈ ಯೋಜನೆಗೂ ತೊಡಗಿಸಿಕೊಳ್ಳಲಿದ್ದಾರಂತೆ. "ಪ್ರೇಮ್ ನಟನೆಯ 'ದಳಪತಿ' ಬಿಡುಗಡೆ ಕೆಲಸದಿಂದ ಸ್ವಲ್ಪ ಬಿಡುವು ಪಡೆದು 'ಆರೆಂಜ್' ಸ್ಕ್ರಿಪ್ಟ್ ಮೇಲೆ ಕೆಲಸ ಮಾಡಿದೆ. ಶೀಘ್ರದಲ್ಲೇ ತಾರಾಗಣವನ್ನು ಅಂತಿಮಗೊಳಿಸಲಿದ್ದೇವೆ" ಎನ್ನುತ್ತಾರೆ ಪ್ರಶಾಂತ್. 

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಇಬ್ಬರು ಕೇಂದ್ರ ಸಚಿವರು ಸೇರಿದಂತೆ 75 ಸದಸ್ಯರ GBA ಸೆ. 2 ರಿಂದ ಅಸ್ತಿತ್ವಕ್ಕೆ: ಯತೀಂದ್ರ ಸಿದ್ದರಾಮಯ್ಯಗೂ ಸ್ಥಾನ!

ಜಮ್ಮುವಿನಾದ್ಯಂತ ಭಾರಿ ಮಳೆ: ಅಪಾರ ಪ್ರಮಾಣದ ಹಾನಿ, 10 ಮಂದಿ ಸಾವು: ಕೊಚ್ಚಿ ಹೋದ ರಸ್ತೆ, ಸೇತುವೆಗಳು!

ಫೈಟರ್ ಜೆಟ್‌ ಇಂಜಿನ್ ಖರೀದಿ: ಅಮೆರಿಕಾದ GE ಸಂಸ್ಥೆಯೊಂದಿಗೆ $1 ಬಿಲಿಯನ್ ಮೊತ್ತದ ಒಪ್ಪಂದಕ್ಕೆ ಭಾರತ ಸಿದ್ಧತೆ!

ಡಿಕೆಶಿ ಕ್ಷಮೆ ಕೇಳಬಾರದಿತ್ತು; ಮುಲಾಜಿಲ್ಲದೆ ಕಾಂಗ್ರೆಸ್ ಪಕ್ಷದ ಸದಸ್ಯತ್ವಕ್ಕೆ ರಾಜೀನಾಮೆ ಬಿಸಾಕಬೇಕಿತ್ತು- ಆರ್. ಅಶೋಕ್

ಸುಂಕ ಸಮರ: Trump 4 ಬಾರಿ ಕರೆ ಮಾಡಿದರೂ ಉತ್ತರಿಸದ PM Modi; ಅಮೆರಿಕ ನಿಯೋಗಕ್ಕೂ No Entry!

SCROLL FOR NEXT