ನಟ ವಿದ್ಯುತ್ ಚಂದ್ರ 
ಸಿನಿಮಾ ಸುದ್ದಿ

ಸುನಿ ಅವರ ಹೊಸ ಶೋಧ ವಿದ್ಯುತ್ ಚಂದ್ರ

ಹೆಚ್ಚು ಸದ್ದಿಲ್ಲದ ಸಿನೆಮಾಗಳನ್ನು ನಿರ್ದೇಶಿಸಿ ಮುಗಿಸುವ ಸುನಿ, 'ಆಪರೇಷನ್ ಅಲಮೇಲಮ್ಮ' ಕೆಲಸಗಳನ್ನು ಬಹುತೇಕ ಮುಗಿಸಿದ್ದು, ಈಗ ಜೊತೆ ಜೊತೆಗೆ ಮತ್ತೊಂದು ಸಿನೆಮಾವನ್ನು ಕೂಡ ಕೈಗೆತ್ತಿಕೊಂಡಿದ್ದಾರೆ.

ಬೆಂಗಳೂರು: ಹೆಚ್ಚು ಸದ್ದಿಲ್ಲದ ಸಿನೆಮಾಗಳನ್ನು ನಿರ್ದೇಶಿಸಿ ಮುಗಿಸುವ ಸುನಿ, 'ಆಪರೇಷನ್ ಅಲಮೇಲಮ್ಮ' ಕೆಲಸಗಳನ್ನು ಬಹುತೇಕ ಮುಗಿಸಿದ್ದು, ಈಗ ಜೊತೆ ಜೊತೆಗೆ ಮತ್ತೊಂದು ಸಿನೆಮಾವನ್ನು ಕೂಡ ಕೈಗೆತ್ತಿಕೊಂಡಿದ್ದಾರೆ. ಈ ಹೊಸ ಸಿನೆಮಾದ ಚಿತ್ರೀಕರಣ ಕೂಡ ೬೦% ಮುಗಿದಿದೆ ಎಂದು ತಿಳಿದುಬಂದಿದೆ. 
'ಜಾನ್ ಸೀನ' ಎಂಬ ಶೀರ್ಷಿಕೆ ಹೊತ್ತ ಈ ಸಿನೆಮಾದಲ್ಲಿ ನಟ ವಿದ್ಯುತ್ ಚಂದ್ರ ವಿದ್ಯುಕ್ತವಾಗಿ ಕನ್ನಡ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಲಿದ್ದಾರೆ. ನಿರ್ದೇಶಕ ಹೇಳುವಂತೆ ನಟನ ಆಕರ್ಷಣೆ ಅವರ ಎತ್ತರ: ಆರು ಅಡಿ ಮೂರೂ ಇಂಚಿನ ಆಳು ಎನ್ನುತ್ತಾರೆ. "ಅವರಿಗೆ ಕ್ಲಾಸ್ ಮತ್ತು ಮಾಸ್ ಲುಕ್ ಎರಡು ಇದೆ" ಎನ್ನುತ್ತಾರೆ ಸುನಿ. 
ಇದು ಥ್ರಿಲ್ಲರ್ ಸಿನೆಮಾ ಎನ್ನುವ ನಿರ್ದೇಶಕ, ಹಬ್ಬದ ಸಮಯದಲ್ಲಿ ಚಂದ ಎತ್ತುವ ಯುವಕನೊಬ್ಬ ರಾಜಕೀಯ ನಾಯಕನ ವ್ಯೂಹದಲ್ಲಿ ಸಿಕ್ಕಿಹಾಕಿಕೊಳ್ಳುವ ಕಥೆ ಎನ್ನುತ್ತಾರೆ. "ಇದು ಮೂರು ದಿನಗಳಲ್ಲಿ ನಡೆಯುವ ಕಥೆ" ಎನ್ನುವ ಸುನಿ "ಜಾನ್ ಜೀವನ, ಪ್ರೇಮ ಕಥೆಯಲ್ಲಿ ಹಾಸ್ಯ ಮತ್ತು ಆಕ್ಷನ್ ಕೂಡ ಇರಲಿದೆ" ಎನ್ನುತ್ತಾರೆ. 
ಶುಭ್ರ ಅಯ್ಯಪ್ಪ ಈ ಸಿನೆಮಾದ ನಾಯಕನಟಿ. ಕ್ರಿಸ್ಟಲ್ ಪಾರ್ಕ್ ಸಿನೆಮಾದ ಚಂದ್ರಶೇಖರ್ ಈ ಸಿನೆಮಾವನ್ನು ನಿರ್ಮಿಸುತ್ತಿದ್ದಾರೆ. ಸುನಿ ಅವರ ಮತ್ತೊಂದು ಯೋಜನೆ 'ಚಮಕ್'ಗೆ ಕೂಡ ಇವರೇ ನಿರ್ಮಾಪಕ. "ನಾನು ಚಂದ್ರಶೇಖರ್ ಬಳಿ ಎರಡು ಸ್ಕ್ರಿಪ್ಟ್ ಕೊಂಡೊಯ್ದಿದ್ದೆ ಅವುಗಳಲ್ಲಿ ಅವರು ಎರಡನ್ನು ಆಯ್ಕೆ ಮಾಡಿಕೊಂಡರು" ಎನ್ನುವ ಸುನಿ "ಗಣೇಶ್ ಅಭಿನಯದ 'ಚಮಕ್'ಗೆ ಇನ್ನಷ್ಟು ಸಮಯ ಹಿಡಿಯಲಿದೆ. ಆದುದರಿಂದ ಸಮಯ ವ್ಯರ್ಥ ಮಾಡದೆ ಇರಲು 'ಜಾನ್ ಸೀನ' ಪ್ರಾರಂಭಿಸಿದೆ. ಇನ್ನು ಕೇವಲ ೪೦% ಚಿತ್ರೀಕರಣವಷ್ಟೇ ಬಾಕಿಯುಳಿದಿದೆ ಎಂಬುದು ಸಂತಸದ ವಿಷಯ" ಎನ್ನುತ್ತಾರೆ. 

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

'ಇಸ್ರೇಲ್‌ ಜೊತೆ ನಮ್ಮ ಸಂಬಂಧ 'ರಕ್ತ ಮತ್ತು ತ್ಯಾಗ'ದಲ್ಲಿ ಬರೆಯಲ್ಪಟ್ಟಿದೆ, ನಾನು ಹುಟ್ಟಿದ ವರ್ಷ ಭಾರತ ಇಸ್ರೇಲ್ ಗೆ ಮಾನ್ಯತೆ ನೀಡಿತು': ಪ್ರಧಾನಿ ಮೋದಿ-Video

ಹಗರಣ ರಹಿತ ಹುದ್ದೆ ಭರ್ತಿಗೆ ಕ್ರಮ: ಯುವಕರು ಧೈರ್ಯವಾಗಿರಿ, ನಿಮ್ಮ ಸಮಸ್ಯೆ ಬಗೆಹರಿಸುತ್ತೇವೆ, ಸದ್ಯದಲ್ಲೇ ಸಂದೇಶ ನೀಡುತ್ತೇವೆ; ಡಿ ಕೆ ಶಿವಕುಮಾರ್

ದಲಿತಾಸ್ತ್ರದ ಮೂಲಕ ಕಟ್ಟಿಹಾಕಲು ಸಿದ್ದು ಬಣ ಕಸರತ್ತು: ತೆರಮರೆಯಲ್ಲಿ ಡಿಕೆಶಿ ಬೆಂಬಲಿಗರ ಮಸಲತ್ತು; ಅಂತರ್ಯುದ್ಧದಲ್ಲಿ ಯಾರಿಗಿದೆ ಗೆಲ್ಲುವ ತಾಕತ್ತು?

Gold Rate Today: ಬೆಂಗಳೂರಿನಲ್ಲಿ ಇಂದಿನ ಚಿನ್ನ, ಬೆಳ್ಳಿ ದರ ಎಷ್ಟಿದೆ? ಇಲ್ಲಿದೆ ವಿವರ...

ಆರೋಗ್ಯ ಇಲಾಖೆಯಿಂದ ಉರ್ದು ಭಾಷೆ ಆಹ್ವಾನ ಪತ್ರಿಕೆ: ಜನರನ್ನು ದಾರಿ ತಪ್ಪಿಸಲೇಬೇಕು ಎಂಬ ಹಠಕ್ಕೆ ಬಿದ್ದಿದ್ದೀರಾ?

SCROLL FOR NEXT