ಬೆಂಗಳೂರು: ದಕ್ಷಿಣ ಭಾರತದ ಖ್ಯಾತ ನಟ ಅರ್ಜುನ್ ಸರ್ಜಾ ಏಳು ವರ್ಷಗಳ ನಂತರ ಮತ್ತೆ ಟಾಲಿವುಡ್ ಪ್ರವೇಶಿಸುತ್ತಿದ್ದಾರೆ. ನಿರ್ದೇಶಕ ಹನು ರಾಘವಪುಡಿ ನಿರ್ದೇಶನದ ಇನ್ನು ಹೆಸರಿಡದ ಈ ಚಿತ್ರದಲ್ಲಿ ಅರ್ಜುನ್ ನಿತಿನ್ ಜೊತೆಗೆ ನಟಿಸಲಿದ್ದಾರೆ.
"ಅವರು ವಿಶೇಷ ಖಳನಾಯಕನ ಪಾತ್ರದಲ್ಲಿ ನಟಿಸಲಿದ್ದಾರೆ ಮತ್ತು ಪಾತ್ರ ಕೇವಲ ಶೈಲಿಯದ್ದಲ್ಲ ಬದಲಾಗಿ ಒಳ್ಳೆಯ ವಿಷಯ ಇದೆ" ಎಂದು ನಿರ್ದೇಶಕ ಹೇಳಿದ್ದು, "ಅಮೆರಿಕಾದಲ್ಲಿ ನಡೆಯಲಿರುವ ಮುಂದಿನ ಹಂತದ ಚಿತ್ರೀಕರಣದಲ್ಲಿ ಅರ್ಜುನ್ ಸೆಟ್ ಸೇರಲಿದ್ದಾರೆ" ಎಂದಿದ್ದಾರೆ.
ಇತರ ನಟರ ಬದಲು ಆಕ್ಷನ್ ಕಿಂಗ್ ಅವರಣೆ ಆಯ್ಕೆ ಮಾಡಿದ್ದೇಕೆ ಎಂಬ ಪ್ರಶ್ನೆಗೆ, ಈ ಪಾತ್ರಕ್ಕೆ ಬೇರೆ ಯಾರ ಹೆಸರು ನನ್ನ ಮನಸ್ಸಿನಲ್ಲಿರಲಿಲ್ಲ ಎಂದಿದ್ದಾರೆ. ಮೊದಲಿಗೆ ಅವರನ್ನು ಕೇಳಲು ಆತಂಕಗೊಂಡಿದ್ದೆ ಎನ್ನುವ ಹನು "ನಾನು ಅವರಿಗೆ ಕಥೆ ಹೇಳುವ ಧೈರ್ಯ ಕೂಡ ಹೊಂದಿರಲಿಲ್ಲ. ಖಳನಾಯಕನ ಪಾತ್ರಕ್ಕೆ ಅವರು ಹೇಗೆ ಪ್ರತಿಕ್ರಿಯಿಸಬಹುದು ಎಂದು ಚಿಂತಿಸುತ್ತಾ ಕುಳಿತಿದ್ದೆ. ಆದರೆ ಅವರು ಕಥೆ ಕೇಳಿದ ತಕ್ಷಣ ಪಾತ್ರ ಇಷ್ಟಪಟ್ಟರು" ಎಂದು ತಿಳಿಸುತ್ತಾರೆ.
ಈಮಧ್ಯೆ ಅರುಣ್ ವೈದ್ಯನಾಥನ್ ನಿರ್ದೇಶನದ ಕನ್ನಡ ತಮಿಳು ದ್ವಿಭಾಷಾ ಚಿತ್ರ ವಿಸ್ಮಯ/ನಿಭುನನ್ ಬಿಡುಗಡೆಯನ್ನು ಅರ್ಜುನ್ ಸರ್ಜಾ ಎದುರು ನೋಡುತ್ತಿದ್ದಾರೆ.
Follow KannadaPrabha channel on WhatsApp
Download the KannadaPrabha News app to follow the latest news updates
Subscribe and Receive exclusive content and updates on your favorite topics
Subscribe to KannadaPrabha YouTube Channel and watch Videos