ನೀನಾಸಂ ಸತೀಶ್ 
ಸಿನಿಮಾ ಸುದ್ದಿ

'ಬ್ಯೂಟಿಫುಲ್ ಮನಸುಗಳು' ಯಶಸ್ಸಿನ ನಿರೀಕ್ಷೆಯಲ್ಲಿ ನೀನಾಸಂ ಸತೀಶ್

'ಮಾದೇಶ' ಸಿನೆಮಾದ ಮೂಲಕ ೨೦೦೮ ರಲ್ಲಿಯೇ ಕನ್ನಡ ಚಿತ್ರರಂಗ ಪ್ರವೇಶಿಸಿದರು, ನೀನಾಸಂ ಸತೀಶ್ ಅವರಿಗೆ ದೊಡ್ಡ ಬ್ರೇಕ್ ಸಿಗಲು ೨೦೧೩ ರ 'ಲೂಸಿಯಾ' ಸಿನೆಮಾದವರೆಗೂ ಕಾಯಬೇಕಾಯಿತು.

ಬೆಂಗಳೂರು: 'ಮಾದೇಶ' ಸಿನೆಮಾದ ಮೂಲಕ ೨೦೦೮ ರಲ್ಲಿಯೇ ಕನ್ನಡ ಚಿತ್ರರಂಗ ಪ್ರವೇಶಿಸಿದರು, ನೀನಾಸಂ ಸತೀಶ್ ಅವರಿಗೆ ದೊಡ್ಡ ಬ್ರೇಕ್ ಸಿಗಲು ೨೦೧೩ ರ 'ಲೂಸಿಯಾ' ಸಿನೆಮಾದವರೆಗೂ ಕಾಯಬೇಕಾಯಿತು. ನಂತರ ತಮ್ಮದೇ ಛಾಪು ಮೂಡಿಸಿರುವ ನಟ ಈಗ ನೂತನ ಸಿನೆಮಾ 'ಬ್ಯೂಟಿಫುಲ್  ಮನಸುಗಳು' ಯಶಸ್ಸಿನ ನಿರೀಕ್ಷೆಯಲ್ಲಿದ್ದಾರೆ. 
ಅರಸು ಅಂತಾರೆ ನಿರ್ದೇಶನದಲ್ಲಿ 'ಲವ್ ಇನ್ ಮಂಡ್ಯ' ಸಿನೆಮಾದ ಯಶಸ್ಸಿನ ನಂತರ, ತಾವೇ ನಿರ್ಮಿಸಿದ್ದ 'ರಾಕೆಟ್' ನಿರೀಕ್ಷಿತ ಯಶಸ್ಸು ತಂದುಕೊಡಲಿಲ್ಲ. ಸಾಮಾನ್ಯ ಮನುಷ್ಯನ ಪಾತ್ರ ನಿರವಹಿಸಿರುವ ಸಿನೆಮಾಗಳೆಲ್ಲಾ ಅವರಿಗೆ ಹೆಸರು ತಂದುಕೊಟ್ಟಿರುವ ಹಿನ್ನಲೆಯಲ್ಲಿ, ಅಂತಹುದೇ ಪಾತ್ರವನ್ನು 'ಬ್ಯೂಟಿಫುಲ್  ಮನಸುಗಳು' ಚಿತ್ರದಲ್ಲಿ ಪೋಷಿಸಿರುವುದಕ್ಕೆ ಉತ್ಸುಕರಾಗಿದ್ದಾರೆ. 
"ನನ್ನ ವರ್ತನೆ ಮತ್ತು ವ್ಯಕ್ತಿತ್ವ, ಸಾಮಾನ್ಯ ಜನಕ್ಕೆ ರಿಲೇಟ್ ಮಾಡಿಕೊಳ್ಳಲು ಸಾಧ್ಯವಾಗುತ್ತಿರುವುದು ನನ್ನ ವರ. ಮಧ್ಯಮ ವರ್ಗಕ್ಕೆ ನನ್ನ ಪಾತ್ರಗಳು ಇಷ್ಟವಾಗುತ್ತಿರುವುದು ನನಗೆ ಸಂತಸ ತಂದಿದೆ" ಎನ್ನುವ ಅವರು 'ಬ್ಯೂಟಿಫುಲ್  ಮನಸುಗಳು' ಸಿನೆಮಾದಲ್ಲಿನ ನನ್ನ ಪಾತ್ರ ಪ್ರಜ್ಞಾವಂತ ಮತ್ತು ಜವಾಬ್ದಾರಿಯುತವಾದದ್ದು ಎನ್ನುತ್ತಾರೆ. 
"ನನ್ನ ಸಂಭಾಷಣೆಯ ಮೂಲಕ ಪ್ರೇಕ್ಷಕರೊಂದಿಗೆ ನಾನು ಯಾವಾಗಲೂ ಒಳ್ಳೆಯ ಸಂಪರ್ಕ ಸಾಧಿಸಿದ್ದೇನೆ, ಆದರೆ ಈ ಸಿನೆಮಾದಲ್ಲಿ ಮೌನದ ಮೂಲ ಅಭಿವ್ಯಕ್ತಿಪಡಿಸಲಿದ್ದೇನೆ ಮತ್ತು ಅದು ಜನರಲ್ಲಿ ನಗು ಉಕ್ಕಿಸುತ್ತದೆ ಮತ್ತು ಹತಾಶೆಯನ್ನು" ಎಂದು ವಿವರಿಸುವ ಸತೀಶ್, ನಿರ್ದೇಶಕ ಜಯತೀರ್ಥ 'ಮಹಿಳೆ'ಯನ್ನು ಕೇಂದ್ರ ವಸ್ತುವಾಗಿ ಆಯ್ಕೆ ಮಾಡಿಕೊಂಡಿರುವುದಾಗಿ ತಿಳಿಸುತ್ತಾರೆ. 
"ಮಹಿಳೆಯರು, ಪುರುಷರು ಎಲ್ಲರಿಗು 'ಬ್ಯೂಟಿಫುಲ್  ಮನಸುಗಳು' ಪ್ರತಿಬಿಂಬವಿದ್ದಂತೆ. ಈ ಸಿನೆಮಾ ಮಾಧ್ಯಮ, ಪ್ರೇಕ್ಷಕರು ಮತ್ತು ನಮ್ಮನ್ನು ಗುರಿಯಾಗಿಸಿಕೊಂಡಿದೆ ಹಾಗು ಇವೆಲ್ಲವನ್ನೂ ಮಿಳಿತವಾಗಿ ಮಿಶ್ರಣ ಮಾಡಿದೆ" ಎನ್ನುವ ಸತೀಶ್ ಮಂಗಳೂರಿನಲ್ಲಿ ನಡೆದ ಸತ್ಯ ಘಟನೆಯೊಂದನ್ನು ಆಧರಿಸಿದ ಸಿನೆಮಾ ಇದು ಎನ್ನುತ್ತಾರೆ. 
"ಈ ಸಿನೆಮಾದಲ್ಲಿ ೭೦% ನಿಜ ಘಟನೆ ಮತ್ತು ೩೦% ಕಾಲ್ಪನಿಕ ಆದುದರಿಂದ ಹೆಚ್ಚು ತಟ್ಟುತ್ತದೆ. ವಿಶ್ವ ಇರುವವರೆಗೂ ಒಳಿತು ಕೆಡುಕು ಇರುತ್ತವೆ. ಆದರೆ ಅರಿವನ್ನು ವಿಸ್ತರಿಸುವುದು ನಮ್ಮ ಕರ್ತವ್ಯ" ಎನ್ನುತ್ತಾರೆ ಸತೀಶ್. 

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಇಬ್ಬರು ಕೇಂದ್ರ ಸಚಿವರು ಸೇರಿದಂತೆ 75 ಸದಸ್ಯರ GBA ಸೆ. 2 ರಿಂದ ಅಸ್ತಿತ್ವಕ್ಕೆ: ಯತೀಂದ್ರ ಸಿದ್ದರಾಮಯ್ಯಗೂ ಸ್ಥಾನ!

ಜಮ್ಮುವಿನಾದ್ಯಂತ ಭಾರಿ ಮಳೆ: ಅಪಾರ ಪ್ರಮಾಣದ ಹಾನಿ, 10 ಮಂದಿ ಸಾವು: ಕೊಚ್ಚಿ ಹೋದ ರಸ್ತೆ, ಸೇತುವೆಗಳು!

ಫೈಟರ್ ಜೆಟ್‌ ಇಂಜಿನ್ ಖರೀದಿ: ಅಮೆರಿಕಾದ GE ಸಂಸ್ಥೆಯೊಂದಿಗೆ $1 ಬಿಲಿಯನ್ ಮೊತ್ತದ ಒಪ್ಪಂದಕ್ಕೆ ಭಾರತ ಸಿದ್ಧತೆ!

ಡಿಕೆಶಿ ಕ್ಷಮೆ ಕೇಳಬಾರದಿತ್ತು; ಮುಲಾಜಿಲ್ಲದೆ ಕಾಂಗ್ರೆಸ್ ಪಕ್ಷದ ಸದಸ್ಯತ್ವಕ್ಕೆ ರಾಜೀನಾಮೆ ಬಿಸಾಕಬೇಕಿತ್ತು- ಆರ್. ಅಶೋಕ್

ಸುಂಕ ಸಮರ: Trump 4 ಬಾರಿ ಕರೆ ಮಾಡಿದರೂ ಉತ್ತರಿಸದ PM Modi; ಅಮೆರಿಕ ನಿಯೋಗಕ್ಕೂ No Entry!

SCROLL FOR NEXT