ನಟ ಧ್ರುವ್ ಸರ್ಜಾ 
ಸಿನಿಮಾ ಸುದ್ದಿ

ಇಷ್ಟು ಕಾದಿದ್ದಕ್ಕೆ ಸಿನೆಮಾ 'ಭರ್ಜರಿ'ಯಾಗಿರಲಿದೆ ಎಂದ ಧ್ರುವ್

ನಟ ಧ್ರುವ್ ಸರ್ಜಾ ಅವರ ಮೂರನೇ ಸಿನೆಮಾ ೨೦ ತಿಂಗಳುಗಳಿಂದ ನಿರ್ಮಾಣದಲ್ಲಿದೆ. 'ಭರ್ಜರಿ' ಸಿನೆಮಾದ ಮುಹೂರ್ತ ೨೦೧೫ ರಲ್ಲಿ ಜರುಗಿತ್ತು.

ಬೆಂಗಳೂರು: ನಟ ಧ್ರುವ್ ಸರ್ಜಾ ಅವರ ಮೂರನೇ ಸಿನೆಮಾ ೨೦ ತಿಂಗಳುಗಳಿಂದ ನಿರ್ಮಾಣದಲ್ಲಿದೆ. 'ಭರ್ಜರಿ' ಸಿನೆಮಾದ ಮುಹೂರ್ತ ೨೦೧೫ ರಲ್ಲಿ ಜರುಗಿತ್ತು. 
ಕಳೆದ ಎರಡು ತಿಂಗಳುಗಳಿಂದ ಸಾಮಾಜಿಕ ಜಾಲತಾಣದಲ್ಲಿ 'ಭರ್ಜರಿ' ಸಿನೆಮಾ ತಡವಾಗಿರುವುದಕ್ಕೆ ಹಲವು ರೀತಿಯ ಊಹಾಪೋಹಗಳು ಮತ್ತು ಅನಪೇಕ್ಷಿತ ಪ್ರತಿಕ್ರಿಯೆಗಳು ಬಂದಿದ್ದವು. ಆಗ ನಾವು ಉತ್ತರಿಸುವ ಗೋಜಿಗೆ ಹೋಗಲಿಲ್ಲ ಎನ್ನುವ ನಟ ಧ್ರುವ್ ಮತ್ತು ನಿರ್ದೇಶಕ ಚೇತನ್ ಕುಮಾರ್ ಈಗ ಸಿನೆಮಾ ಡಬ್ಬಿಂಗ್ ಹಂತದಲ್ಲಿದೆ ಎಂದು ತಿಳಿಸುತ್ತಾರೆ. 
"ನನ್ನನ್ನು ಮಾತನಾಡಿಸಲು ಸಾಧ್ಯವಾಗುತ್ತಿಲ್ಲ ಎಂದು ಕೆಲವು ಜನ ನಂಬಿದ್ದಾರೆ. ಆದರೆ ನನ್ನ ದೃಷ್ಟಿಕೋನದಿಂದ ನೋಡಿದರೆ, ಸಿನೆಮಾ ಬಿಡುಗಡೆಯ ಬಗ್ಗೆ ನಾನು ಗಮನಾರ್ಹವಾದದ್ದನ್ನು ಹೇಳುವ ಸ್ಥಿತಿಯಲ್ಲಿಲ್ಲ. ಆದರೆ ಸಿನಿಮಾಮಂದಿರಗಳಲ್ಲಿ ಬಿಡುಗಡೆಯಾಗದ ಮೇಲೆ ಇದು ಒಳ್ಳೆಯ ಪರಿಣಾಮ ಬೀರಲಿದೆ ಎಂದಷ್ಟೇ ಹೇಳುತ್ತೇನೆ" ಎಂದಿದ್ದಾರೆ ಧ್ರುವ್, 
'ಅದ್ದೂರಿ' ಮತ್ತು 'ಬಹಾದ್ದೂರ್' ಎರಡು ಹಿಟ್ ಚಿತ್ರಗಳನ್ನು ನೀಡಿದ್ದ ಧ್ರುವ್ ಮೂರನೇ ಸಿನೆಮಾ ಬಿಡುಗಡೆಯಾಗುವುದಕ್ಕೆ ಇಷ್ಟು ತಡವಾದದ್ದಕ್ಕೆ ಅವರ ಅಭಿಮಾನಿಗಳ ನಡುವೆ ಅಪಾರ ಪ್ರಶ್ನೆಗಳೆದ್ದಿದ್ದವು. ನಾನು ಯಾವುದನ್ನು ಎದುರಿಸಲು ಸಿದ್ಧನಿದ್ದೇನೆ ಎನ್ನುವ ನಟ ನಿರ್ಮಾಪಕನ ಜೊತೆಯಾಗಿ ನಿಲ್ಲುವುದಾಗಿ ಹೇಳಿದ್ದಾರೆ. 
ಈಮಧ್ಯೆ ನಂದಕಿಶೋರ್ ನಿರ್ದೇಶನ ಮುಂದಿನ ಚಿತ್ರದಲ್ಲಿ ಧ್ರುವ್ ನಟಿಸಲಿದ್ದಾರೆ.  

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಅಮೆರಿಕ ನಿಯೋಜಿತ ರಾಯಭಾರಿ ಸೆರ್ಗಿಯೊ ಗೋರ್- ಮೋದಿ, ಜೈಶಂಕರ್ ಭೇಟಿ; Tariff ಒತ್ತಡದ ನಡುವೆ ಭಾರತ-ಅಮೆರಿಕ ಸಂಬಂಧ ಸುಧಾರಣೆಯ ಸೂಚನೆ?

ಅಫ್ಘಾನಿಸ್ತಾನ ನಮ್ಮೊಂದಿಗೆ ಗಡಿ ಹಂಚಿಕೊಂಡಿರುವ ನೆರೆ ರಾಷ್ಟ್ರ- S Jaishankar; ಭಾರತದೊಂದಿಗೆ POK ವಿಲೀನದ ಸುಳಿವು; ಚೀನಾಗೂ ಶಾಕ್!

ಅಬ್ಬಬ್ಬಾ ರೋಮಾಂಚನ: ಅದ್ಭುತ ಸೃಷ್ಟಿಸಿದ ರಿಷಬ್ ಶೆಟ್ಟಿಗೆ ರಾಷ್ಟ್ರಪ್ರಶಸ್ತಿ ಕೊಡಲೇಬೇಕು - ತಮಿಳು ನಿರ್ದೇಶಕ ಅಟ್ಲೀ

Pakistan: ಇಸ್ರೇಲ್ ವಿರೋಧಿ ಪ್ರತಿಭಟನಾ ಜಾಥಾ, ಪೋಲೀಸರ ಗುಂಡೇಟಿಗೆ 11 ಮಂದಿ ಬಲಿ! Video

ಉತ್ತರ ಪ್ರದೇಶಕ್ಕೆ ಭೇಟಿ ನೀಡಿದ ತಾಲಿಬಾನ್ ಸಚಿವನಿಗೆ ಅದ್ಧೂರಿ ಸ್ವಾಗತ, ಸರ್ಕಾರದ ಭದ್ರತೆ; ಯೋಗಿಗೆ ನಾಚಿಕೆಯಾಗಬೇಕು- SP ಸಂಸದ ಶಫೀಕರ್

SCROLL FOR NEXT