ನಟ ದಿಗಂತ್ 
ಸಿನಿಮಾ ಸುದ್ದಿ

ಮಲಯಾಳಂ ಸೂಪರ್ ಹಿಟ್ ಸಿನೆಮಾ 'ಚಾರ್ಲಿ' ರಿಮೇಕ್ ನಲ್ಲಿ ದಿಗಂತ್

ಹಿಂದಿ ಸಿನೆಮಾ 'ಟಿಕೆಟ್ ಟು ಬಾಲಿವುಡ್' ಚಿತ್ರೀಕರಣದ ವೇಳೆ ಗಾಯಗೊಂಡ ಕನ್ನಡ ನಟ ದಿಗಂತ್ ಸ್ವಲ್ಪ ಸಮಯದ ಕಾಲ ನಟನೆಯಿಂದ ದೂರವುಳಿದಿದ್ದರು. ಈಗ 'ಚೌಕ' ಸಿನೆಮಾ ಈ ವಾರ ಬಿಡುಗಡೆಯಾಗುವ

ಬೆಂಗಳೂರು: ಹಿಂದಿ ಸಿನೆಮಾ 'ಟಿಕೆಟ್ ಟು ಬಾಲಿವುಡ್' ಚಿತ್ರೀಕರಣದ ವೇಳೆ ಗಾಯಗೊಂಡ ಕನ್ನಡ ನಟ ದಿಗಂತ್ ಸ್ವಲ್ಪ ಸಮಯದ ಕಾಲ ನಟನೆಯಿಂದ ದೂರವುಳಿದಿದ್ದರು. ಈಗ 'ಚೌಕ' ಸಿನೆಮಾ ಈ ವಾರ ಬಿಡುಗಡೆಯಾಗುವ ಮೂಲಕ ಹಿಂದಿರುಗಿದ್ದಾರೆ. ಒಂದು ವರ್ಷದ ಹಿಂದೆ ಅಮ್ಯಾರ ದಸ್ತೂರ್ ನಿರ್ದೇಶನ ಚಿತ್ರದ ಚಿತ್ರೀಕರಣದ ವೇಳೆ ದಿಗಂತ್ ಕಣ್ಣಿಗೆ ಗಾಯವಾಗಿತ್ತು. ಈಗ ಅವರ ಹೊಸ ಕನ್ನಡ ಚಿತ್ರದಲ್ಲಿ ನಟಿಸುವುದಕ್ಕೆ ಸಹಿ ಮಾಡಿದ್ದಾರೆ ಎಂದು ತಿಳಿದುಬಂದಿದೆ. 
ಮಲಯಾಳಂ ಸೂಪರ್ ಹಿಟ್ ಸಿನೆಮಾ 'ಚಾರ್ಲಿ' ಕನ್ನಡ ರಿಮೇಕ್ ಅನ್ನು ನಿರ್ಮಿಸುತ್ತಿರುವ ಹರ್ಷ ಎಂಟರ್ಟೈನ್ಮೆಂಟ್ಸ್ ನಿರ್ಮಾಣ ಸಂಸ್ಥೆ, ಈ ಸಿನೆಮಾದಲ್ಲಿ ದಿಗಂತ್ ಮುಖ್ಯ ಪಾತ್ರದಲ್ಲಿ ನಟಿಸುತ್ತಿರುವುದಾಗಿ ಧೃಢೀಕರಿಸಿದೆ. ಇದು ತಮ್ಮ ಮುಂದಿನ ಚಿತ್ರ ಎಂದು ನಟ ಕೂಡ ತಿಳಿಸಿದ್ದಾರೆ. ಈ ಮಧ್ಯೆ ೧೯೯೫ ರ ಕಥೆ ಹೊಂದಿರುವ 'ಚೌಕ' ಸಿನೆಮಾದಲ್ಲಿ ದಿಗಂತ್, ಪ್ರಿಯಾಮಣಿ ಎದುರು ನಟಿಸುತ್ತಿದ್ದಾರೆ. 
'ಚಾರ್ಲಿ' ಕನ್ನಡ ರಿಮೇಕ್ ಸಿನೆಮಾದ ನಿರ್ದೇಶಕ ಜಿ ಎನ್ ರುದ್ರೇಶ್. ಇವರ ಚೊಚ್ಚಲ ನಿರ್ದೇಶನದ 'ಹಾಯ್' ಈ ವಾರ ಬಿಡುಗಡೆಯಾಗಲಿದೆ. ಈ ಸಿನೆಮಾದ ನಾಯಕನಟಿಗಾಗಿ ಹುಡುಕಾಟ ಪ್ರಾರಂಭವಾಗಿದ್ದು, ನಂತರ ಮುಹೂರ್ತ ನಡೆಯಲಿದೆ. 
ಮಾರ್ಟಿನ್ ಪ್ರಾಕ್ಕತ್ ನಿರ್ದೇಶನದ ಮಲಯಾಳಂ ಸಿನೆಮಾ 'ಚಾರ್ಲಿ'ಯಲ್ಲಿ ಡಲ್ಕೆರ್ ಸಲ್ಮಾನ್ ಮತ್ತು ಪಾರ್ವತಿ ನಟಿಸಿದ್ದರು. ೨೦೧೫ ರಲ್ಲಿ ಬಿಡುಗಡೆಯಾದ ಈ ಸಿನೆಮಾ ಅತ್ಯುತ್ತಮವಾಗಿ ಪ್ರದರ್ಶನ ಕಂಡಿತ್ತು. 

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಇಬ್ಬರು ಕೇಂದ್ರ ಸಚಿವರು ಸೇರಿದಂತೆ 75 ಸದಸ್ಯರ GBA ಸೆ. 2 ರಿಂದ ಅಸ್ತಿತ್ವಕ್ಕೆ: ಯತೀಂದ್ರ ಸಿದ್ದರಾಮಯ್ಯಗೂ ಸ್ಥಾನ!

ಜಮ್ಮುವಿನಾದ್ಯಂತ ಭಾರಿ ಮಳೆ: ಅಪಾರ ಪ್ರಮಾಣದ ಹಾನಿ, 10 ಮಂದಿ ಸಾವು: ಕೊಚ್ಚಿ ಹೋದ ರಸ್ತೆ, ಸೇತುವೆಗಳು!

ಫೈಟರ್ ಜೆಟ್‌ ಇಂಜಿನ್ ಖರೀದಿ: ಅಮೆರಿಕಾದ GE ಸಂಸ್ಥೆಯೊಂದಿಗೆ $1 ಬಿಲಿಯನ್ ಮೊತ್ತದ ಒಪ್ಪಂದಕ್ಕೆ ಭಾರತ ಸಿದ್ಧತೆ!

ಡಿಕೆಶಿ ಕ್ಷಮೆ ಕೇಳಬಾರದಿತ್ತು; ಮುಲಾಜಿಲ್ಲದೆ ಕಾಂಗ್ರೆಸ್ ಪಕ್ಷದ ಸದಸ್ಯತ್ವಕ್ಕೆ ರಾಜೀನಾಮೆ ಬಿಸಾಕಬೇಕಿತ್ತು- ಆರ್. ಅಶೋಕ್

ಸುಂಕ ಸಮರ: Trump 4 ಬಾರಿ ಕರೆ ಮಾಡಿದರೂ ಉತ್ತರಿಸದ PM Modi; ಅಮೆರಿಕ ನಿಯೋಗಕ್ಕೂ No Entry!

SCROLL FOR NEXT