ಸಂಯುಕ್ತಾ ಹೆಗಡೆ 
ಸಿನಿಮಾ ಸುದ್ದಿ

'ಕಾಲೇಜ್ ಕುಮಾರ್' ವಿಲ್ಲನ್ ಗೆ ನಟಿ ಸಂಯುಕ್ತಾ ಹೆಗ್ಡೆ ಪಂಚ್!

ನಟಿ ಸಂಯುಕ್ತಾ ಹೆಗ್ಡೆ ಸವಾಲುಗಳನ್ನು ದಾಟಿ ಮುಂದೆ ಹೋಗಲು ಬಯಸುತ್ತಾರೆ. ಬೆಳ್ಳಿ ಪರದೆ ಮೇಲೆ ಆಕೆ ಟಿಪಿಕಲ್ ಹಿರೋಯಿನ್ ಆಗಿರಲು ಆಕೆ ಸಿದ್ಧವಿಲ್ಲ, ...

ಬೆಂಗಳೂರು:  ನಟಿ ಸಂಯುಕ್ತಾ ಹೆಗ್ಡೆ ಸವಾಲುಗಳನ್ನು ದಾಟಿ ಮುಂದೆ ಹೋಗಲು ಬಯಸುತ್ತಾರೆ. ಬೆಳ್ಳಿ ಪರದೆ ಮೇಲೆ ಆಕೆ ಟಿಪಿಕಲ್ ಹಿರೋಯಿನ್ ಆಗಿರಲು ಆಕೆ ಸಿದ್ಧವಿಲ್ಲ, ಉತ್ತಮ ಡ್ಯಾನ್ಸರ್ ಆಗಿರುವ ಸಂಯುಕ್ತಾ ತನ್ನ ಎರಡನೇ ಸಿನಿಮಾವಾದ ಸಂತೋಷ್ ನಿರ್ದೇಶನದ ಕಾಲೇಜ್ ಕುಮಾರ್ ನಲ್ಲಿ ಆಕ್ಷನ್ ಸನ್ನಿವೇಶಕ್ಕೆ ತಮ್ಮ ದೇಹವನ್ನು ದಂಡಿಸಿದ್ದಾರೆ.
ನಾಯಕಿ ಸಂಯುಕ್ತಾ ಹೆಗಡೆ ಜನ್ಮ ದಿನವಾದ ಇಂದು ಆಕೆ ಅಭಿನಯದ ಸ್ಟಂಟ್ ದಶ್ಯಗಳನ್ನು ರಿಲೀಸ್ ಮಾಡಲು ಚಿತ್ರ ತಂಡ ನಿರ್ಧರಿಸಿದೆ, ಕಾಲೇಜ್ ಕುಮಾರ್ ಸಿನಿಮಾದಲ್ಲಿ ಸಂಯುಕ್ತಾ ಹೆಗಡೆ ಸ್ಟಂಟ್ಸ್ ದೊಡ್ಡ ಸರ್ ಫ್ರೈಸ್ ಆಗಿದೆ ಎಂದು ಚಿತ್ರ ತಂಡ ತಿಳಿಸಿದೆ.
ಸಿನಿಮಾದಲ್ಲಿ ಫೈಟಿಂಗ್ ಸನ್ನಿವೇಶಗಳಲ್ಲಿ ಕಾಣಿಸಿಕೊಂಡಿರುವ ಸಂಯುಕ್ತಾ ಹೆಗಡೆ ನಿಜ ಜೀವನದಲ್ಲೂ ಕೂಡ ಅದೇ ರೀತಿ ಫೈಟಿಂಗ್ ಮಾಡಿದ್ದಾರಂತೆ, ತೆರೆಯ ಮೇಲೆ ಹೇಗೆ ನಾನು ಹೊಡೆದಿದ್ದೆನೋ ಹಾಗಯೇ ನಿಜ ಜೀವನದಲ್ಲೂ ಹೊಡೆದಿದ್ದೇನೆ, ಈ ಬಗ್ಗೆ ನನ್ನ ತಾಯಿ ನನ್ನನ್ನು ಹೊಗಳುತ್ತಿದ್ದರು, ನನ್ನನ್ನು ಜಗಳದ ಕೋಳಿ ಎಂದು ಕರೆಯುತ್ತಿದ್ದರು., ಆದರೆ ನಾನು  ನನ್ನನ್ನು ರಕ್ಷಿಸಿಕೊಳ್ಳಬಲ್ಲೆ ಎಂಬ ಆತ್ಮವಿಶ್ವಾಸವಿದೆ ಎಂದು ಹೇಳಿದ್ದಾರೆ.
ನಿಮ್ಮನ್ನು ನೀವು ರಕ್ಷಿಸಿಕೊಳ್ಳಲು ನಿಮಗೆ ನೀವೇ ಉತ್ತಮ ವ್ಯಕ್ತಿ, ಕೆಟ್ಟ ಸನ್ನಿವೇಶದಿಂದ ಹೇಗೆ ಪಾರಾಗಬೇಕು ಎಂಬುದನ್ನು ನೀವು ತಿಳಿದುಕೊಂಡಿರಬೇಕು. ನಿಮ್ಮನ್ನು ರಕ್ಷಿಸಲು ನಿಮಗಿಂತ ದೊಡ್ಡ ವ್ಯಕ್ತಿ ನಿಮಗಿಂತ ಬೇರೆ ಯಾರು ಇಲ್ಲ, ಸಿನಿಮಾ ರಂಗದಲ್ಲಿ ನೀವು ಯಾವುಗಲೂ ಒಂಟಿಯಾಗಿರುತ್ತೀರಿ, ಒಮ್ಮೊಮ್ಮೆ ವಿವಿಧ ಲೋಕೆಶನ್ ಗಳಿಗೆ ಒಬ್ಬೊಬ್ಬರೇ ಹೋಗಬೇಕಾಗುತ್ತದೆ ಎಂದು ಅವರು ಹೇಳಿದ್ದಾರೆ.
ಆತ್ಮರಕ್ಷಣೆಯೇ ಮೊದಲ ಪಾಠವಾಗಬೇಕು. ಇದರ ಮೇಲೆ ನಾನು ಯಾವಾಗಲು ನಂಬಿಕೆಯಿಡುತ್ತೇನೆ, ಸಿನಿಮಾ ರಂಗಕ್ಕೆ ಬರುವುದಕ್ಕಿಂತ ಮುಂಚಿನಿಂದಲೂ ನಾನು ಸ್ವಯಂ ರಕ್ಷಣೆ ಬಗ್ಗೆ ಹೆಚ್ಚು ಕಾಳಜಿ ವಹಿಸುತ್ತೇನೆ ಎಂದು ಹೇಳಿದ್ದಾರೆ.
ಎಂಆರ್ ಪಿಕ್ಚರ್ಸ್ ಬ್ಯಾನರ್ ಅಡಿಯಲ್ಲಿ ಎಲ್, ಪದ್ಮನಾಭ್ ಕಾಲೇಜ್ ಕುಮಾರ್ ಸಿನಿಮಾ ನಿರ್ಮಿಸುತ್ತಿದ್ದಾರೆ, ವಿಕ್ಕಿ, ರವಿಶಂಕರ್, ಶೃತಿ ಕೂಡ ಸಿನಿಮಾದಲ್ಲಿ ನಟಿಸಿದ್ದಾರೆ. ಸಿನಿಮಾದ 54 ದಿನಗಳ ಶೂಟಿಂಗ್ ಮುಗಿದಿದೆ. ಅರ್ಜುನ್ ಜನ್ಯ ಸಿನಿಮಾಗೆ ಸಂಗೀತ ನೀಡಿದ್ದಾರೆ. 

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಭಾರತದ ಮೇಲೆ ಶೇ.50 ರಷ್ಟು ಸುಂಕಾಸ್ತ್ರ ಜಾರಿ: ಕೊನೆಗೆ ಒಟ್ಟಿಗೆ ಸೇರ್ತಿವಿ! US ಖಜಾನೆ ಮುಖ್ಯಸ್ಥ ಹಿಂಗ್ಯಾಕಂದ್ರು?

ಸಶಸ್ತ್ರ ಪಡೆಗಳು ಮುಂದಿನ ಭದ್ರತಾ ಸವಾಲುಗಳಿಗೆ ಸಿದ್ಧರಾಗಿರಬೇಕು: ರಾಜನಾಥ್ ಸಿಂಗ್

ಹಿಂದೂ ನಂಬಿಕೆ ಒಡೆಯುತ್ತಿರುವ ಬಾನು ಮುಷ್ತಾಕ್: ಶಿವನ ಬೆಟ್ಟವನ್ನೇ 'ಯೇಸು ಬೆಟ್ಟ' ಮಾಡಲು ಹೊರಟವರಿಂದ ಧರ್ಮದ ಪಾಠ ಬೇಡ- ಪ್ರತಾಪ್ ಸಿಂಹ

2030 Commonwealth Games: ಭಾರತದ ಬಿಡ್‌ಗೆ ಕೇಂದ್ರ ಸಂಪುಟ ಅನುಮೋದನೆ! ಅಹಮದಾಬಾದ್ ನಲ್ಲಿ ಆಯೋಜಿಸುವ ಪ್ರಸ್ತಾಪ!

'ಡೆವಿಲ್‌' ಸಿನಿಮಾದ '‘ಇದ್ರೆ ನೆಮ್ಮದಿಯಾಗ್ ಇರ್ಬೇಕ್' ಹಾಡಿಗೆ ಭರ್ಜರಿ ಸ್ಟೆಪ್ ಹಾಕಿದ ವಿನೋದ್ ರಾಜ್! Video

SCROLL FOR NEXT