ನಿರೂಪ್ ಭಂಡಾರಿ ಮತ್ತು ರಾಧಿಕಾ ಪಂಡಿತ್ 
ಸಿನಿಮಾ ಸುದ್ದಿ

ರಾಕ್ ಲೈನ್ ವೆಂಕಟೇಶ್ ನಿರ್ಮಾಣದ ಸಿನಿಮಾದಲ್ಲಿ ನಿರೂಪ್ ಭಂಡಾರಿಗೆ ರಾಧಿಕಾ ಪಂಡಿತ್ ನಾಯಕಿ

ರಂಗಿತರಂಗ ಸಿನಿಮಾ ಮೂಲಕ ಸಾವಿರಾರು ಪ್ರೇಕ್ಷಕರ ಮೆಚ್ಚುಗೆ ಗಳಿಸಿರುವ ನಾಯಕ ನಿರೂಪ್ ಭಂಡಾರಿ ತಮ್ಮ ಸಹೋದರ ಅನೂಪ್ ಭಂಡಾರಿ ನಿರ್ದೇಶನ ...

ಬೆಂಗಳೂರು: ರಂಗಿತರಂಗ ಸಿನಿಮಾ ಮೂಲಕ ಸಾವಿರಾರು ಪ್ರೇಕ್ಷಕರ ಮೆಚ್ಚುಗೆ ಗಳಿಸಿರುವ ನಾಯಕ ನಿರೂಪ್ ಭಂಡಾರಿ ತಮ್ಮ ಸಹೋದರ ಅನೂಪ್ ಭಂಡಾರಿ ನಿರ್ದೇಶನ ರಾಜರಥ ಚಿತ್ರದಲ್ಲಿ ನಟಿಸುತ್ತಿದ್ದಾರೆ.
ರಾಕ್ ಲೈನ್ ವೆಂಕಟೇಶ್ ನಿರ್ಮಾಣದ ಮುಂದಿನ ಸಿನಿಮಾದಲ್ಲಿ ನಿರೂಪ್ ಭಂಢಾರಿಗೆ ರಾಧಿಕಾ ಪಂಡಿತ್ ನಾಯಕಿಯಾಗಿ ನಟಿಸಲಿದ್ದಾರೆ,
ನಾನು ನನ್ನ ಮೂರನೇ ಸಿನಿಮಾವನ್ನು ರಿಶಬ್ ಶೆಟ್ಟಿ ಜೊತೆ ಮಾಡಲು ಯೋಜಿಸಿದ್ದೆ, ಆದರೆ ರಿಶಬ್ ಶೆಟ್ಟಿ ಅವರ ಹಲವು ಸಿನಿಮಾಗಳು ಇನ್ನೂ ಪೂರ್ಣಗೊಂಡಿರದ ಕಾರಣ ನಮ್ಮ ಪ್ರಾಜೆಕ್ಟ್ ಮುಂದೂಡಲಾಯಿತು.
ರಾಕ್ ಲೈನ್ ನಿರ್ಮಾಣ ಸಂಸ್ಥೆಯ ಈ ಚಿತ್ರಕ್ಕೆ ವಿ. ಪ್ರಿಯಾ ನಿರ್ದೇಶನ ಮಾಡಲಿದ್ದಾರೆ. ಪ್ರಿಯಾ ಕಥೆ ಹೇಳಿದ ಶೈಲಿ ನನಗೆ ತುಂಬಾ ಹಿಡಿಸಿದೆ. ಪಾತ್ರ ಹಾಗೂ ಕಥೆಯ ಬಗ್ಗೆ ಆಕೆಗೆ ಆತ್ಮ ವಿಶ್ವಾಸವಿದೆ, ಈ ಸಿನಿಮಾದಲ್ಲಿ ನನ್ನ ಪಾತ್ರ ಹಾಸ್ಯಭರಿತವಾಗಿದೆ ಎಂದು ನನಗನಿಸುತ್ತದೆ ಎಂದು ನಿರೂಪ್ ಹೇಳಿದ್ದಾರೆ.
ನಿರ್ದೇಶಕಿ ಪ್ರಿಯಾ ಅವರ ಮನಸಲ್ಲಿ ಪಾತ್ರದ ಬಗ್ಗೆ  ಒಂದು ನಿಖರ ಐಡಿಯಾ ಇತ್ತು, ಹೀಗಾಗಿ ಆ ಪಾತ್ರಕ್ಕೆ ನಾನೇ ಸೂಕ್ತ ಎಂದು ಅವರಿಗೆ ಅನಿಸಿದೆ. ಪ್ರಿಯಾ ಮಣಿರತ್ನಂ ಅವರ ಬಳಿ ಸಹಾಯಕ ನಿರ್ದೇಶಕಿಯಾಗಿ ಕೆಲಸ ಮಾಡಿದ್ದಾರೆ, ಅದು ನನಗೆ ಮತ್ತಿ ಅನೂಪ್ ನನ್ನು ಮತ್ತಷ್ಟು ಇಂಪ್ರೆಸ್ ಮಾಡಿದೆ. ತಮಿಳಿನಲ್ಲಿ ಆಕೆ ಮೂರು ಸಿನಿಮಾ ನಿರ್ದೇಶಿಸಿದ್ದಾರೆ. ಹಲವು ಸುತ್ತಿನ ಮಾತುಕತೆಗಳ ನಂತರ ಈ ಪ್ರಾಜೆಕ್ಟ್ ನಲ್ಲಿ ನಟಿಸಲು ನಾನು ಒಪ್ಪಿದೆ ಎಂದು ನಿರೂಪ್ ಭಂಡಾರಿ ವಿವರಿಸಿದ್ದಾರೆ.
ಒಂದೇ ಒಂದು ಸಿನಿಮಾದಲ್ಲಿ ಅಭಿನಯಿಸಿರುವ ನಿರೂಪ್ ಬಿಗ್ ಬ್ಯಾನರ್ ಸಿನಿಮಾದಲ್ಲಿ ಪ್ರಸಿದ್ಧ ನಟಿ ರಾಧಿಕಾ ಪಂಡಿತ್ ಜೊತೆ ಅಭಿನಯಿಸಲು ಅವಕಾಶ ಸಿಕ್ಕಿದೆ.  ರಾಕ್ ಲೈನ್ ವೆಂಕಟೇಶ್ ಅವರ ಜೊತೆ ಮೊದಲ ಸಿನಿಮಾವಾಗಿದೆ. ರಂಗಿತರಂಗ ಸಿನಿಮಾ ತಯಾರಿ ವೇಳೆಯಿಂದಲೂ ನಾನು ಅವರನ್ನು ಬಲ್ಲೆ, ಅವರೊಬ್ಬ ಒಳ್ಳೆಯ ಮನಸ್ಸಿರುವ ವ್ಯಕ್ತಿ ಎಂದು ನಿರೂಪ್ ಹೊಗಳಿದ್ದಾರೆ. 
ಕೃಷ್ಣನ್ ಲವ್ ಸ್ಚೋರಿ ಸಿನಿಮಾದಲ್ಲಿ ರಾಧಿಕಾ ಅವರ ಅಭಿನಯ ನನಗೆ ಬಹಳ ಇಷ್ಟ.  ಅವರಿಂದ ನಾನು ಸಾಕಷ್ಟು ಕಲಿಯಲು ಸಹಾಯವಾಗುತ್ತದೆ. ಪ್ರಿಯಾ ನಿರ್ದೇಶನದಲ್ಲಿ ಭಾರತೀಯ ಸಿನಿಮಾ ರಂಗಕ್ಕೆ ಇದೊಂದು ಉತ್ತಮ ಚಿತ್ರವಾಗಲಿದೆ, ನನಗೂ ಕೂಡ ಉತ್ತಮ ಅನುಭವವಾಗಲಿದೆ ಎಂದು ತಿಳಿಸಿದ್ದಾರೆ. ಇನ್ನೂ ಹೆಸರಿಡದ ಈ ಸಿನಿಮಾ ಸೆಪ್ಟಂಬರ್ ನಲ್ಲಿ ಸೆಟ್ಟೇರಲಿದೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಇಬ್ಬರು ಕೇಂದ್ರ ಸಚಿವರು ಸೇರಿದಂತೆ 75 ಸದಸ್ಯರ GBA ಸೆ. 2 ರಿಂದ ಅಸ್ತಿತ್ವಕ್ಕೆ: ಯತೀಂದ್ರ ಸಿದ್ದರಾಮಯ್ಯಗೂ ಸ್ಥಾನ!

ಜಮ್ಮುವಿನಾದ್ಯಂತ ಭಾರಿ ಮಳೆ: ಅಪಾರ ಪ್ರಮಾಣದ ಹಾನಿ, 10 ಮಂದಿ ಸಾವು: ಕೊಚ್ಚಿ ಹೋದ ರಸ್ತೆ, ಸೇತುವೆಗಳು!

ಫೈಟರ್ ಜೆಟ್‌ ಇಂಜಿನ್ ಖರೀದಿ: ಅಮೆರಿಕಾದ GE ಸಂಸ್ಥೆಯೊಂದಿಗೆ $1 ಬಿಲಿಯನ್ ಮೊತ್ತದ ಒಪ್ಪಂದಕ್ಕೆ ಭಾರತ ಸಿದ್ಧತೆ!

ಡಿಕೆಶಿ ಕ್ಷಮೆ ಕೇಳಬಾರದಿತ್ತು; ಮುಲಾಜಿಲ್ಲದೆ ಕಾಂಗ್ರೆಸ್ ಪಕ್ಷದ ಸದಸ್ಯತ್ವಕ್ಕೆ ರಾಜೀನಾಮೆ ಬಿಸಾಕಬೇಕಿತ್ತು- ಆರ್. ಅಶೋಕ್

ಸುಂಕ ಸಮರ: Trump 4 ಬಾರಿ ಕರೆ ಮಾಡಿದರೂ ಉತ್ತರಿಸದ PM Modi; ಅಮೆರಿಕ ನಿಯೋಗಕ್ಕೂ No Entry!

SCROLL FOR NEXT