ಬ್ರಿಟಿಷ್ ನಟ ಡ್ಯಾನಿ ಸಪಾನಿ 
ಸಿನಿಮಾ ಸುದ್ದಿ

'ತಾರಕಾಸುರ' ಸಿನೆಮಾದಲ್ಲಿ ಖಳನಾಯಕನಾಗಿ ಬ್ರಿಟಿಷ್ ನಟ

ಸಿನೆಮಾದ ಬಜೆಟ್ ನ ಬಹುತೇಕ ಭಾಗವನ್ನು ಹೀರೋಗಳಿಗೆ ವಿನಿಯೋಗಿಸುವ ಚಿತ್ರರಂಗದಲ್ಲಿ, ಈಗ ಖಳನಾಯಕನಿಗೆ ಭಾರಿ ಹೂಡಿಕೆ ಮಾಡಿರುವ ಪ್ರಯತ್ನ ಕನ್ನಡ ಚಿತ್ರರಂಗದಲ್ಲಿ ಜರುಗಿದೆ.

ಬೆಂಗಳೂರು: ಸಿನೆಮಾದ ಬಜೆಟ್ ನ ಬಹುತೇಕ ಭಾಗವನ್ನು ಹೀರೋಗಳಿಗೆ ವಿನಿಯೋಗಿಸುವ ಚಿತ್ರರಂಗದಲ್ಲಿ, ಈಗ ಖಳನಾಯಕನಿಗೆ ಭಾರಿ ಹೂಡಿಕೆ ಮಾಡಿರುವ ಪ್ರಯತ್ನ ಕನ್ನಡ ಚಿತ್ರರಂಗದಲ್ಲಿ ಜರುಗಿದೆ. 
ನಿರ್ದೇಶಕ ಚಂದ್ರಶೇಖರ್ ಬಂಡಿಯಪ್ಪ ತಮ್ಮ ಮುಂದಿನ ಚಿತ್ರಕ್ಕೆ ಹಾಲಿವುಡ್ ನಟನನ್ನು ಕರೆತಂದಿದ್ದಾರೆ. ಈ ಸಿನೆಮಾದಲ್ಲಿ ಖಳನಾಯಕನಾಗಿ ಕಾಣಿಸಿಕೊಳ್ಳಲಿರುವ ಬ್ರಿಟಿಷ್ ನಟ ಡ್ಯಾನಿ ಸಪಾನಿ ಅವರಿಗೆ ನೀಡಲಿರುವ ಹಣ ಬರ್ರೋಬರ್ರಿ ೧ ಕೋಟಿ!
ಹಲವು ಸಿನೆಮಾಗಳಲ್ಲಿ, ಟೆಲಿ ಧಾರಾವಾಹಿಗಳಲ್ಲಿ ನಟಿಸಿರುವ ಈ ನಟ ಈ ಹಿಂದೆ ತಮಿಳು ಸಿನೆಮಾ 'ಸಿಂಗಂ ೨' ಮೂಲಕ ಭಾರತೀಯ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದ್ದರು. ಈಗ ಸ್ಯಾಂಡಲ್ ವುಡ್ ನಲ್ಲಿ ಅವರು ಚೊಚ್ಚಲ ನಟ ವೈಭವ್ ಎದುರು ಸೆಣಸಲಿದ್ದಾರೆ. 
ಜೂನ್ ೫ ರಂದು ಚಿತ್ರೀಕರಣ ಪ್ರಾರಂಭವಾಗಲಿದ್ದು, ಡ್ಯಾನಿ ಅಂದೇ ಸೆಟ್ ಸೇರಲಿದ್ದಾರೆ. "ನಮಗೆ ರಾಕ್ಷಸನ ಕಳೆ ಹೊಂದಿರುವ ನಟನ ಅವಶ್ಯಕತೆ ಇತ್ತು. ಇದಕ್ಕೆ ಡ್ಯಾನಿ ಬಹಳವಾಗಿ ಹೊಂದಿಕೊಳ್ಳುತ್ತಾರೆ. ಅಲ್ಲದೆ ನಮಗೆ ತಾಜಾ ಮುಖವೊಂದನ್ನು ತೊಡಗಿಸಿಕೊಳ್ಳಬೇಕಿತ್ತು. ಅವರಿಗೆ ಕೊಟ್ಟಿರುವ ಪ್ರತಿ ಪೈಸೆಗೂ ಅವರು ಅರ್ಹ" ಎನ್ನುತ್ತಾರೆ ಈ ಆಯ್ಕೆಯ ಬಗ್ಗೆ ಭರವಸೆ ಹೊಂದಿರುವ ಬಂಡಿಯಪ್ಪ. 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

KPSC ಪಶುವೈದ್ಯಾಧಿಕಾರಿ ನೇಮಕಾತಿ ಹಗರಣ: ಎಲ್ಲಾ 329 ಅಭ್ಯರ್ಥಿಗಳಿಗೆ CID ಶಾಕ್, ಇಂದೇ ವಿಚಾರಣೆಗೆ ಹಾಜರಾಗುವಂತೆ ನೋಟಿಸ್!

ನಮ್ಮಲ್ಲೂ ಅಸ್ತ್ರಗಳಿವೆ, ದಾಳಿಗೆ ಸಂಪೂರ್ಣ ಸಿದ್ಧ: ಅಮೆರಿಕಾ ಆರ್ಥಿಕ ದಿಗ್ಬಂಧನಕ್ಕೆ ಇರಾನ್‌ ಪ್ರತಿರೋಧ, ಭಾರೀ ಪ್ರತೀಕಾರದ ಎಚ್ಚರಿಕೆ

‘Iran ನನ್ನ ಪುತ್ರನನ್ನು ಹತ್ಯೆ ಮಾಡಲು ಯತ್ನಿಸಿತ್ತು’: ಟೆಹ್ರಾನ್‌ ವಿರುದ್ಧ ನೆತನ್ಯಾಹು ಗಂಭೀರ ಆರೋಪ

ಭಾರತ-ರಷ್ಯಾ ಆರ್ಥಿಕ ಬಾಂಧವ್ಯಕ್ಕೆ ಹೊಸ ಬಲ; ಪುಟಿನ್ ಭೇಟಿಯಾದ ಜೈಶಂಕರ್, ಪರಮಾಣು ಸಹಕಾರ ಸೇರಿ ಹಲವು ಅಂಶಗಳ ಕುರಿತು ಚರ್ಚೆ!

3 ದಿನ ಮೊದಲೇ ಮುಂಗಾರು ಅಧಿವೇಶನಕ್ಕೆ ತೆರೆ: 'ವಿರೋಧ ಪಕ್ಷಕ್ಕೆ ಹೆದರಿ ಅಧಿವೇಶನ ರದ್ದು'; ರಾಜ್ಯಪಾಲರಿಗೆ BJP ದೂರು!