'ಸಾಹೇಬ' ಸಿನೆಮಾದ ಸ್ಟಿಲ್ 
ಸಿನಿಮಾ ಸುದ್ದಿ

ಪ್ರಾಣಿ ದಯಾ ಸಂಘದ ಸುಳಿಯಲ್ಲಿ 'ಸಾಹೇಬ'; ಬಿಡುಗಡೆ ಮತ್ತೆ ವಿಳಂಬ?

ನಟ ಮನೋರಂಜನ್ ಅವರ ಚೊಚ್ಚಲ ಚಿತ್ರ 'ಸಾಹೇಬ' ಬಿಡುಗಡೆ ಇನ್ನಷ್ಟು ವಿಳಂಬವಾಗುವ ಸಾಧ್ಯತೆ ಇದೆ. ಈಗ ಸಿನೆಮಾ ಪ್ರಾಣಿ ದಯಾ ಸಂಘದ ಒಪ್ಪಿಗೆಗೆ ಕಾಯುತ್ತಿದೆ.

ಬೆಂಗಳೂರು: ನಟ ಮನೋರಂಜನ್ ಅವರ ಚೊಚ್ಚಲ ಚಿತ್ರ 'ಸಾಹೇಬ' ಬಿಡುಗಡೆ ಇನ್ನಷ್ಟು ವಿಳಂಬವಾಗುವ ಸಾಧ್ಯತೆ ಇದೆ. ಈಗ ಸಿನೆಮಾ ಪ್ರಾಣಿ ದಯಾ ಸಂಘದ ಒಪ್ಪಿಗೆಗೆ ಕಾಯುತ್ತಿದೆ. 
ಸಿನೆಮಾದಲ್ಲಿ ಆನೆಯೊಂದು ನಟ ಮನೋರಂಜನ್ ಜೊತೆಗೆ ಎರಡು-ಮೂರು ದೃಶ್ಯಗಳಲ್ಲಿ ಕಾಣಿಸಿಕೊಳ್ಳುತ್ತದೆ. ಇದಕ್ಕಾಗಿ ನಿರ್ಮಾಪಕರು ಪರವಾನಗಿ ಕೇಳಿದ್ದರು, ಇನ್ನು ಅದಕ್ಕೆ ಉತ್ತರ ಬಂದಿಲ್ಲ. ಈಮಧ್ಯೆ ಸಿನೆಮಾ ಸೆನ್ಸಾರ್ ಮಂಡಳಿ ಎದುರು ಕೂಡ ಇದೆ. ಹೀಗಾಗಿ ಸಿನೆಮಾ ಜೂನ್ ೧೬ ರಂದು ಬಿಡುಗಡೆಯಾಗುವ ಸಾಧ್ಯತೆ ಕ್ಷೀಣಿಸಿದೆ. 
"ಸಿನೆಮಾ ನಿರ್ದೇಶನದಿಂದ ಕಲಿತಿದ್ದು ಏನೆಂದರೆ, ಸಿನೆಮಾ ನಿರ್ದೇಶನ ಕಷ್ಟವಾದರೂ ಅದನ್ನು ಬಿಡುಗಡೆ ಮಾಡುವುದು ಇನ್ನಷ್ಟು ಸವಾಲು. ಅದು ನನ್ನ ಕೈನಲ್ಲಿ ಇರುವುದಿಲ್ಲ ಕೂಡ. ಸಿನೆಮಾವನ್ನು ಥಿಯೇಟರ್ ಗೆ ತರಲು ಮುಂಚಿತವಾಗಿ ಹಲವು ನಿಯಮಗಳನ್ನು ಪಾಲಿಸಬೇಕಾಗುತ್ತದೆ" ಎನ್ನುತ್ತಾರೆ 'ಸಾಹೇಬ' ಸಿನೆಮಾದ ನಿರ್ದೇಶಕ ಭರತ್. 
ಮನೋರಂಜನ್ ಮುಖ್ಯಭೂಮಿಕೆಯಲ್ಲಿ ನಟಿಸಿರುವ 'ಸಾಹೇಬ'ದಲ್ಲಿ ಶಾನ್ವಿ ಶ್ರೀವಾಸ್ತವ್ ನಾಯಕನಟಿ. ವಿ ಹರಿಕೃಷ್ಣ ಸಂಗೀತ ನೀಡಿದ್ದು, ಜಿ ಎಸ್ ವಿ ಸೀತಾರಾಮ್ ಅವರ ಸಿನೆಮ್ಯಾಟೋಗ್ರಫಿ ಚಿತ್ರಕ್ಕಿದೆ. 

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಇಬ್ಬರು ಕೇಂದ್ರ ಸಚಿವರು ಸೇರಿದಂತೆ 75 ಸದಸ್ಯರ GBA ಸೆ. 2 ರಿಂದ ಅಸ್ತಿತ್ವಕ್ಕೆ: ಯತೀಂದ್ರ ಸಿದ್ದರಾಮಯ್ಯಗೂ ಸ್ಥಾನ!

ಜಮ್ಮುವಿನಾದ್ಯಂತ ಭಾರಿ ಮಳೆ: ಅಪಾರ ಪ್ರಮಾಣದ ಹಾನಿ, 10 ಮಂದಿ ಸಾವು: ಕೊಚ್ಚಿ ಹೋದ ರಸ್ತೆ, ಸೇತುವೆಗಳು!

ಫೈಟರ್ ಜೆಟ್‌ ಇಂಜಿನ್ ಖರೀದಿ: ಅಮೆರಿಕಾದ GE ಸಂಸ್ಥೆಯೊಂದಿಗೆ $1 ಬಿಲಿಯನ್ ಮೊತ್ತದ ಒಪ್ಪಂದಕ್ಕೆ ಭಾರತ ಸಿದ್ಧತೆ!

ಡಿಕೆಶಿ ಕ್ಷಮೆ ಕೇಳಬಾರದಿತ್ತು; ಮುಲಾಜಿಲ್ಲದೆ ಕಾಂಗ್ರೆಸ್ ಪಕ್ಷದ ಸದಸ್ಯತ್ವಕ್ಕೆ ರಾಜೀನಾಮೆ ಬಿಸಾಕಬೇಕಿತ್ತು- ಆರ್. ಅಶೋಕ್

ಸುಂಕ ಸಮರ: Trump 4 ಬಾರಿ ಕರೆ ಮಾಡಿದರೂ ಉತ್ತರಿಸದ PM Modi; ಅಮೆರಿಕ ನಿಯೋಗಕ್ಕೂ No Entry!

SCROLL FOR NEXT