ನಂದ ಕಿಶೋರ್ ಮತ್ತು ತರುಣ್ ಸುಧೀರ್
ಬೆಂಗಳೂರು: ಬಾಲಿವುಡ್ ನಲ್ಲಿ ದಶಕಗಳಿಂದ ವಿಭಿನ್ನ ಶೈಲಿಯ ಸಿನಿಮಾ ನೀಡುತ್ತಿರುವ ಅಬ್ಬಾಸ್-ಮಸ್ತಾನ್, ಹಾಲಿವುಡ್ ನ ಕೊಯಾನ್ ಸಹೋದರರ ಜೋಡಿಯಂತೆ ಸ್ಯಾಂಡಲ್ ವುಡ್ ನಲ್ಲೂ ಸಹೋದರರ ಜೋಡಿಯೊಂದು ಸಿನಿಮಾಗಾಗಿ ಒಬ್ಬರಿಗೊಬ್ಬರು ಬೆನ್ನು ಕೊಟ್ಟು ನಿಂತಿದ್ದಾರೆ.
ಹಿರಿಯ ನಟ ದಿವಂಗತ ಸುದೀರ್ ಅವರ ಪುತ್ರರಾದ ನಂದ ಕಿಶೋರ್ ಮತ್ತು ತರುಣ್ ಸುಧೀರ್, ತಮ್ಮ ತಾಯಿ ಸ್ಥಾಪಿಸಿದ ನಾಟಕ ಕಂಪನಿಯನ್ನು ಬೆಳೆಸಿಕೊಂಡು ಬಂದವರು. ಕಳೆದ 23 ವರ್ಷಗಳಿಂದ ಕರ್ನಾಟಕ ಕಲಾ ವೈಭವ ಸಂಘ ಎಂಬ ನಾಟಕ ಕಂಪನಿಯನ್ನು ಬೆಳೆಸಿ ಪೋಷಿಸುತ್ತಿದ್ದಾರೆ.
ಸಿನಿಮಾದಲ್ಲಿ ನಂದ ಕಿಶೋರ್ ಅವರಿಗೆ ತರುಣ್ ಎಲ್ಲಾ ರೀತಿಯಲ್ಲೂ ಸಹಾಯ ಮಾಡುತ್ತಿದ್ದಾರೆ. 2013 ರಲ್ಲಿ ಬಿಡುಗಡೆಯಾದ ವಿಕ್ಟರಿ ಚಿತ್ರಕ್ಕೆ ನಂದ ಕಿಶೋರ್ ನಿರ್ದೇಶಕರಾಗಿ ಪಾದಾರ್ಪಣೆ ಮಾಡಿದರು.ಅದಾದ ನಂತರ, ಅಧ್ಯಕ್ಷ, ರನ್ನ, ಮುಕುಂದ ಮುರಾರಿ, ನಂತರ ಈಗ ಟೈಗರ್ ಸಿನಿಮಾ ನಿರ್ದೇಶನ ಮಾಡುತ್ತಿದ್ದಾರೆ.
ಪ್ರದೀಪ್ ನಾಯಕರಾಗಿರುವ ಟೈಗರ್ ಚಿತ್ರಕ್ಕೆ ತರುಣ್ ಚಿತ್ರಕಥೆ ಬರೆದಿದ್ದು, ನಂದ ಕಿಶೋರ್ ನಿರ್ದೇಶನ ಮಾಡುತ್ತಿದ್ದಾರೆ.
ಉತ್ತಮ ಚಿತ್ರಕಥೆಯಿಂದ ಪ್ರೇಕ್ಷಕರಿಗೆ ಒಳ್ಳೆಯ ಸಿನಿಮಾ ನೀಡುವುದು ನಮ್ಮ ಉದ್ದೇಶವಾಗಿದೆ. ನಮಗೆ ಸರಿ ಹೊಂದುವಂತಹ ನಮ್ಮ ಇಷ್ಟಾನಿಷ್ಟಗಳನ್ನು ಅರ್ಥ ಮಾಡಿಕೊಳ್ಳುವವರು ಒಟ್ಟಿಗೆ ಇದ್ದಾಗ ಸಿನಿಮಾ ಮತ್ತಷ್ಟು ಉತ್ತಮವಾಗಿ ಮೂಡಿಬರಲು ಸಾಧ್ಯವಾಗುತ್ತದೆ ಎಂದು ನಿರ್ದೇಶಕ ನಂದ ಕಿಶೋರ್ ಹೇಳಿದ್ದಾರೆ.
ತಮ್ಮ ಸಿನಿಮಾಗಳಲ್ಲಿ ತರುಣ್ ಭಾಗಿಯಾಗುವುದರಿಂದ ನಮ್ಮ ಚಿಂತನೆ ಸ್ಷಷ್ಟವಾಗಿರುತ್ತದೆ. ನಾವಿಬ್ಬರು ನಮಗೆ ಉತ್ತಮ ವಿಮರ್ಶಕರಾಗಿದ್ದೇವೆ ಎಂಬುದು ಕಿಶೋರ್ ಅಭಿಪ್ರಾಯ.
ಕೆಲಸದ ವಿಚಾರದಲ್ಲಿ ನಾವು ಪರಸ್ಪರ, ದೂರು, ಜಗಳ, ವಾದ ಮಾಡುತ್ತೇವೆ. ನಮ್ಮಿಬ್ಬರ ನಡುವೆ ಒಂದು ಆರೋಗ್ಯಕರವಾದ ಪೈಪೋಟಿಯಿದೆ. ಆದರೆ ಸಿನಿಮಾ ಮಾಡುವಾಗ ನಮ್ಮಿಬ್ಬರ ಗುರಿ ಒಂದೇ ಆಗಿರುತ್ತದೆ. ಎಲ್ಲಾ ಯಶಸ್ಸುಗಳು ನಮ್ಮನ್ನು ದೊಡ್ಡ ಮಟ್ಟದಲ್ಲಿ ಯೋಜನೆ ಮಾಡಿ ಮತ್ತೊಂದು ಹಂತಕ್ಕೆ ತಲುಪುವಂತೆ ಮಾಡುತ್ತದೆ, ನಾವಿಬ್ಬರೂ ಯಾವಾಗಲೂ ಒಬ್ಬರಿಗೊಬ್ಬರು ಬೆಂಬಲವಾಗಿರುತ್ತೇವೆ ಎಂದು ತಿಳಿಸಿದ್ದಾರೆ.
Follow KannadaPrabha channel on WhatsApp
Download the KannadaPrabha News app to follow the latest news updates
Subscribe and Receive exclusive content and updates on your favorite topics
Subscribe to KannadaPrabha YouTube Channel and watch Videos