ರಚಿತಾ ರಾಮ್-ಶ್ರದ್ಧಾ ಶ್ರೀನಾಥ್ 
ಸಿನಿಮಾ ಸುದ್ದಿ

'ಜಾನಿ ಜಾನಿ ಯಸ್ ಪಾಪ' ಸಿನೆಮಾಗೆ ರಚಿತಾ ಬದಲು ಶ್ರದ್ಧಾ?

ನಟಿ ರಚಿತಾ ರಾಮ್ ಎರಡನೇ ಬಾರಿಗೆ ವಿಜಯ್ ಸಿನೆಮಾದಿಂದ ಹೊರಬಂದಿದ್ದಾರೆ ಎನ್ನುತ್ತವೆ ಮೂಲಗಳು. ಈ ಹಿಂದೆ ಅವರು ದುನಿಯಾ ವಿಜಯ್ ಅವರ 'ಕನಕ' ಸಿನೆಮಾದಲ್ಲಿ ನಟಿಸಬೇಕಿತ್ತು,

ಬೆಂಗಳೂರು: ನಟಿ ರಚಿತಾ ರಾಮ್ ಎರಡನೇ ಬಾರಿಗೆ ವಿಜಯ್ ಸಿನೆಮಾದಿಂದ ಹೊರಬಂದಿದ್ದಾರೆ ಎನ್ನುತ್ತವೆ ಮೂಲಗಳು. ಈ ಹಿಂದೆ ಅವರು ದುನಿಯಾ ವಿಜಯ್ ಅವರ 'ಕನಕ' ಸಿನೆಮಾದಲ್ಲಿ ನಟಿಸಬೇಕಿತ್ತು, ಆದರೆ ಕಾರಣಾಂತರಗಳಿಂದ ಅದರಿಂದ ಹೊರಬಿದ್ದಿದ್ದರು ಮತ್ತೀಗ  'ಜಾನಿ ಜಾನಿ ಯಸ್ ಪಾಪ' ಸಿನೆಮಾದಿಂದಲೂ ಹೊರಬಂದಿರುವ ಸುದ್ದಿ ಬೆಳಕಿಗೆ ಬಂದಿದೆ. 
ಪ್ರೀತಮ್ ಗುಬ್ಬಿ ತಮ್ಮ 'ಜಾನಿ ಜಾನಿ ಯಸ್ ಪಾಪ'ದಲ್ಲಿ ವಿಜಯ್ ಮತ್ತು ರಚಿತಾ ಜೋಡಿಯನ್ನು ಪರಿಚಯಿಸಲು ಮುಂದಾಗಿದ್ದಾಗ, ದಿನಾಂಕಗಳ ಕಲಹದಿಂದ ಆರ್ ಚಂದ್ರು ನಿರ್ದೇಶನದ 'ಕನಕ' ಸಿನೆಮಾದಲ್ಲಿ ನಟಿಸುವುದರಿಂದ ನಟಿ ದೂರವುಳಿದಿದ್ದರು. ಈಗ ರಚಿತಾ ಪೂರ್ವನಿಯೋಜಿತ ಸಿನೆಮಾಗಳ ಕೆಲಸದ ಮೇರೆಗೆ 'ಜಾನಿ ಜಾನಿ ಯಸ್ ಪಾಪ'ದಲ್ಲಿ ನಟಿಸುತ್ತಿಲ್ಲ ಎಂದು ತಿಳಿದುಬಂದೆ. 
ರಚಿತಾ ಬದಲಿಗೆ ಶ್ರದ್ಧಾ?
ಈಗ 'ಜಾನಿ ಜಾನಿ ಯಸ್ ಪಾಪ' ಚಿತ್ರತಂಡ ವಿಜಯ್ ಎದುರು ನಟಿಸಲು 'ಯು ಟರ್ನ್' ಬೆಡಗಿ ಶ್ರದ್ಧಾ ಶ್ರೀನಾಥ್ ಅವರ ಜೊತೆಗೆ ಚರ್ಚೆ ನಡೆಸಿದೆಯಂತೆ. ನಟಿ ಇದಕ್ಕೆ ಆಸಕ್ತಿ ತೋರಿದ್ದು, ಹಣಕಾಸಿನ ವಿಷಯವಷ್ಟೇ ಬಾಕಿ ಉಳಿದಿದೆ ಎನ್ನುತ್ತವೆ ಮೂಲಗಳು. 
'ಜಾನಿ ಜಾನಿ ಯಸ್ ಪಾಪ' ಸಿನೆಮಾ 'ಜಾನಿ ಮೇರಾ ನಾಮ್' ಸಿನೆಮಾದ ದ್ವಿತೀಯ ಭಾಗವಾಗಿದ್ದು, ಹಿಂದಿನ ಆವೃತ್ತಿಯಲ್ಲಿ ರಮ್ಯಾ ನಟಿಸಿದ್ದರು. 
ಈ ಸಿನೆಮಾವನ್ನು ವಿಜಯ್ ಒಡೆತನದ ದುನಿಯಾ ಟಾಕೀಸ್ ನಿರ್ಮಿಸುತ್ತಿದ್ದು, ವಿ ಹರಿಕೃಷ್ಣ ಸಂಗೀತ ನೀಡಿದ್ದಾರೆ. ರಂಗಾಯಣ ರಘು ಮತ್ತು ಸಾಧುಕೋಕಿಲ ಕೂಡ ತಾರಾಗಣದ ಭಾಗವಾಗಿದ್ದಾರೆ.
ಈಮಧ್ಯೆ ಶ್ರದ್ಧಾ ತಮ್ಮ ತಮಿಳು ಸಿನೆಮಾ 'ಇವನ್ ತಂತಿರನ್' ಬಿಡುಗಡೆಯನ್ನು ಎದುರು ನೋಡುತ್ತಿದ್ದಾರೆ. 

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ನೀವು ಇಲ್ಲಿ ಹುಟ್ಟೋದು ಬೇಡ ನಿಮ್ಮ ಕ್ಷೇತ್ರದ ಶೇ. 75 ರಷ್ಟಾದರೂ ಇಲ್ಲಿ ಅಭಿವೃದ್ಧಿ ಮಾಡಿ: ಡಿಕೆಶಿಗೆ ಖರ್ಗೆ ಟಾಂಗ್; Video

ಸ್ವಾತಂತ್ರ್ಯ ಬಳಿಕ ಇದೇ ಮೊದಲು: ಮಕರ ಸಂಕ್ರಾಂತಿಗೆ ಮತ್ತೊಂದು ಹೊಸ 'ದಾಖಲೆ'ಗೆ ಸಜ್ಜಾದ ಪ್ರಧಾನಿ ಮೋದಿ!

ಡೆಂಟಲ್ ಕಾಲೇಜು ವಿದ್ಯಾರ್ಥಿನಿ ಆತ್ಮಹತ್ಯೆ ಕೇಸ್: ಕೆಲಸದಿಂದ 6 ಪ್ರಾಧ್ಯಾಪಕರ ವಜಾ

ಯಶ್ 'ಟಾಕ್ಸಿಕ್' ಟೀಸರ್ ವಿರುದ್ಧ ಮಹಿಳಾ ಆಯೋಗಕ್ಕೆ ಎಎಪಿ ದೂರು; 'ಆ' ದೃಶ್ಯಕ್ಕೆ ಆಕ್ಷೇಪ!

ಟ್ರಂಪ್ ಗೆ 'ಮರೆಯಲಾಗದ ಪಾಠ' ಕಲಿಸುತ್ತೇವೆ: ಇರಾನ್ ಸಂಸತ್ ಸ್ಪೀಕರ್ ಖಡಕ್ ವಾರ್ನಿಂಗ್!

SCROLL FOR NEXT