ರಚಿತಾ ರಾಮ್-ಶ್ರದ್ಧಾ ಶ್ರೀನಾಥ್ 
ಸಿನಿಮಾ ಸುದ್ದಿ

'ಜಾನಿ ಜಾನಿ ಯಸ್ ಪಾಪ' ಸಿನೆಮಾಗೆ ರಚಿತಾ ಬದಲು ಶ್ರದ್ಧಾ?

ನಟಿ ರಚಿತಾ ರಾಮ್ ಎರಡನೇ ಬಾರಿಗೆ ವಿಜಯ್ ಸಿನೆಮಾದಿಂದ ಹೊರಬಂದಿದ್ದಾರೆ ಎನ್ನುತ್ತವೆ ಮೂಲಗಳು. ಈ ಹಿಂದೆ ಅವರು ದುನಿಯಾ ವಿಜಯ್ ಅವರ 'ಕನಕ' ಸಿನೆಮಾದಲ್ಲಿ ನಟಿಸಬೇಕಿತ್ತು,

ಬೆಂಗಳೂರು: ನಟಿ ರಚಿತಾ ರಾಮ್ ಎರಡನೇ ಬಾರಿಗೆ ವಿಜಯ್ ಸಿನೆಮಾದಿಂದ ಹೊರಬಂದಿದ್ದಾರೆ ಎನ್ನುತ್ತವೆ ಮೂಲಗಳು. ಈ ಹಿಂದೆ ಅವರು ದುನಿಯಾ ವಿಜಯ್ ಅವರ 'ಕನಕ' ಸಿನೆಮಾದಲ್ಲಿ ನಟಿಸಬೇಕಿತ್ತು, ಆದರೆ ಕಾರಣಾಂತರಗಳಿಂದ ಅದರಿಂದ ಹೊರಬಿದ್ದಿದ್ದರು ಮತ್ತೀಗ  'ಜಾನಿ ಜಾನಿ ಯಸ್ ಪಾಪ' ಸಿನೆಮಾದಿಂದಲೂ ಹೊರಬಂದಿರುವ ಸುದ್ದಿ ಬೆಳಕಿಗೆ ಬಂದಿದೆ. 
ಪ್ರೀತಮ್ ಗುಬ್ಬಿ ತಮ್ಮ 'ಜಾನಿ ಜಾನಿ ಯಸ್ ಪಾಪ'ದಲ್ಲಿ ವಿಜಯ್ ಮತ್ತು ರಚಿತಾ ಜೋಡಿಯನ್ನು ಪರಿಚಯಿಸಲು ಮುಂದಾಗಿದ್ದಾಗ, ದಿನಾಂಕಗಳ ಕಲಹದಿಂದ ಆರ್ ಚಂದ್ರು ನಿರ್ದೇಶನದ 'ಕನಕ' ಸಿನೆಮಾದಲ್ಲಿ ನಟಿಸುವುದರಿಂದ ನಟಿ ದೂರವುಳಿದಿದ್ದರು. ಈಗ ರಚಿತಾ ಪೂರ್ವನಿಯೋಜಿತ ಸಿನೆಮಾಗಳ ಕೆಲಸದ ಮೇರೆಗೆ 'ಜಾನಿ ಜಾನಿ ಯಸ್ ಪಾಪ'ದಲ್ಲಿ ನಟಿಸುತ್ತಿಲ್ಲ ಎಂದು ತಿಳಿದುಬಂದೆ. 
ರಚಿತಾ ಬದಲಿಗೆ ಶ್ರದ್ಧಾ?
ಈಗ 'ಜಾನಿ ಜಾನಿ ಯಸ್ ಪಾಪ' ಚಿತ್ರತಂಡ ವಿಜಯ್ ಎದುರು ನಟಿಸಲು 'ಯು ಟರ್ನ್' ಬೆಡಗಿ ಶ್ರದ್ಧಾ ಶ್ರೀನಾಥ್ ಅವರ ಜೊತೆಗೆ ಚರ್ಚೆ ನಡೆಸಿದೆಯಂತೆ. ನಟಿ ಇದಕ್ಕೆ ಆಸಕ್ತಿ ತೋರಿದ್ದು, ಹಣಕಾಸಿನ ವಿಷಯವಷ್ಟೇ ಬಾಕಿ ಉಳಿದಿದೆ ಎನ್ನುತ್ತವೆ ಮೂಲಗಳು. 
'ಜಾನಿ ಜಾನಿ ಯಸ್ ಪಾಪ' ಸಿನೆಮಾ 'ಜಾನಿ ಮೇರಾ ನಾಮ್' ಸಿನೆಮಾದ ದ್ವಿತೀಯ ಭಾಗವಾಗಿದ್ದು, ಹಿಂದಿನ ಆವೃತ್ತಿಯಲ್ಲಿ ರಮ್ಯಾ ನಟಿಸಿದ್ದರು. 
ಈ ಸಿನೆಮಾವನ್ನು ವಿಜಯ್ ಒಡೆತನದ ದುನಿಯಾ ಟಾಕೀಸ್ ನಿರ್ಮಿಸುತ್ತಿದ್ದು, ವಿ ಹರಿಕೃಷ್ಣ ಸಂಗೀತ ನೀಡಿದ್ದಾರೆ. ರಂಗಾಯಣ ರಘು ಮತ್ತು ಸಾಧುಕೋಕಿಲ ಕೂಡ ತಾರಾಗಣದ ಭಾಗವಾಗಿದ್ದಾರೆ.
ಈಮಧ್ಯೆ ಶ್ರದ್ಧಾ ತಮ್ಮ ತಮಿಳು ಸಿನೆಮಾ 'ಇವನ್ ತಂತಿರನ್' ಬಿಡುಗಡೆಯನ್ನು ಎದುರು ನೋಡುತ್ತಿದ್ದಾರೆ. 

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಇಬ್ಬರು ಕೇಂದ್ರ ಸಚಿವರು ಸೇರಿದಂತೆ 75 ಸದಸ್ಯರ GBA ಸೆ. 2 ರಿಂದ ಅಸ್ತಿತ್ವಕ್ಕೆ: ಯತೀಂದ್ರ ಸಿದ್ದರಾಮಯ್ಯಗೂ ಸ್ಥಾನ!

ಜಮ್ಮುವಿನಾದ್ಯಂತ ಭಾರಿ ಮಳೆ: ಅಪಾರ ಪ್ರಮಾಣದ ಹಾನಿ, 10 ಮಂದಿ ಸಾವು: ಕೊಚ್ಚಿ ಹೋದ ರಸ್ತೆ, ಸೇತುವೆಗಳು!

ಫೈಟರ್ ಜೆಟ್‌ ಇಂಜಿನ್ ಖರೀದಿ: ಅಮೆರಿಕಾದ GE ಸಂಸ್ಥೆಯೊಂದಿಗೆ $1 ಬಿಲಿಯನ್ ಮೊತ್ತದ ಒಪ್ಪಂದಕ್ಕೆ ಭಾರತ ಸಿದ್ಧತೆ!

ಡಿಕೆಶಿ ಕ್ಷಮೆ ಕೇಳಬಾರದಿತ್ತು; ಮುಲಾಜಿಲ್ಲದೆ ಕಾಂಗ್ರೆಸ್ ಪಕ್ಷದ ಸದಸ್ಯತ್ವಕ್ಕೆ ರಾಜೀನಾಮೆ ಬಿಸಾಕಬೇಕಿತ್ತು- ಆರ್. ಅಶೋಕ್

ಸುಂಕ ಸಮರ: Trump 4 ಬಾರಿ ಕರೆ ಮಾಡಿದರೂ ಉತ್ತರಿಸದ PM Modi; ಅಮೆರಿಕ ನಿಯೋಗಕ್ಕೂ No Entry!

SCROLL FOR NEXT