ಚಿಕ್ಕಣ್ಣ-ಶರಣ್ 
ಸಿನಿಮಾ ಸುದ್ದಿ

ಇನ್ನೆರಡು ಸಿನೆಮಾಗಳಲ್ಲಿ ಮುಂದುವರೆಯಲಿದೆ ಶರಣ್-ಚಿಕ್ಕಣ್ಣ ಕೆಮಿಸ್ಟ್ರಿ

ತೆರೆಯ ಮೇಲಿನ ಕೆಮಿಸ್ಟ್ರಿ ಕೇವಲ ಹೀರೊ ಮತ್ತು ಹೀರೋಯಿನ್ ಗಳಿಗೆ ಸೀಮಿತವಾಗಬೇಕಿಲ್ಲ ಮತ್ತು ಸಿನೆಮಾದ ಯಶಸ್ಸಿಗೆ ವಿವಿಧ ನಟರ ನಡುವಿನ ತೆರೆಯ ಮೇಲಿನ ಬಾಂಧವ್ಯ ಕೂಡ ಅಷ್ಟೇ

ಬೆಂಗಳೂರು: ತೆರೆಯ ಮೇಲಿನ ಕೆಮಿಸ್ಟ್ರಿ ಕೇವಲ ಹೀರೊ ಮತ್ತು ಹೀರೋಯಿನ್ ಗಳಿಗೆ ಸೀಮಿತವಾಗಬೇಕಿಲ್ಲ ಮತ್ತು ಸಿನೆಮಾದ ಯಶಸ್ಸಿಗೆ ವಿವಿಧ ನಟರ ನಡುವಿನ ತೆರೆಯ ಮೇಲಿನ ಬಾಂಧವ್ಯ ಕೂಡ ಅಷ್ಟೇ ಪ್ರಮುಖ ಪಾತ್ರ ವಹಿಸುತ್ತದೆ. ಕನ್ನಡ ಚಿತ್ರರಂಗದಲ್ಲಿ ಅಂತಹ ಒಂದು ಉತ್ತಮ ಉದಾಹರಣೆ ನಟ ಶರಣ್ ಮತ್ತು ಚಿಕ್ಕಣ್ಣನವರದ್ದು.
ನಂದಕಿಶೋರ್ ನಿರ್ದೇಶನದ 'ಅಧ್ಯಕ್ಷ' ಸಿನೆಮಾದಲ್ಲಿ ಇವರಿಬ್ಬರು ಒಟ್ಟಿಗೆ ನಟಿಸಿದ್ದು ಜನಕ್ಕೆ ಬಹಳ ಮೆಚ್ಚುಗೆಯಾಗಿತ್ತು ಮತ್ತು ಈಗ ಅದೇ ಮಾಂತ್ರಿಕತೆಯನ್ನು ಈ ಇಬ್ಬರೂ ನಟಿಸಿರುವ 'ರಾಜ್-ವಿಷ್ಣು'ವಿನಲ್ಲಿ ಕಾಣಲು ಕಾತರಿಸುತ್ತಿದ್ದಾರೆ. 
ಮತ್ತೊಂದು ಆಸಕ್ತಿದಾಯಕ ವಿಷಯದಲ್ಲಿ ಈ ಇಬ್ಬರ ಜೋಡಿ ಮುಂದಿನ ಎರಡು ಸಿನೆಮಾಗಳಿಗೆ ಮುಂದುವರೆಯಲಿದೆ. ಈ ಸಿನೆಮಾಗಳನ್ನು ಅನಿಲ್ ಮತ್ತು ಯೋಗಾನಂದ್ ಮುದ್ದಣ್ಣ ನಿರ್ದೇಶಿಸಲಿದ್ದಾರೆ. 
ಈಮಧ್ಯೆ 'ರಾಜ್-ವಿಷ್ಣು' ನಿರ್ಮಾಪಕರು ಚಿತ್ರದ ಆಡಿಯೋವನ್ನು ಚಿಕ್ಕಣ್ಣನವರ ಹುಟ್ಟುಹಬ್ಬದ ದಿನವಾದ ಇಂದು ಬಿಡುಗಡೆ ಮಾಡಲು ಮುಂದಾಗಿದ್ದಾರೆ. ರಾಮು ನಿರ್ಮಿಸಿರುವ ಮತ್ತು ಕೆ ಮಾದೇಶ್ ನಿರ್ದೇಶನದ ಈ ಚಿತ್ರ ತಮಿಳು ಸಿನೆಮಾ 'ರಜನಿ ಮುರುಗನ್'ನಿಂದ ಸ್ಫೂರ್ತಿ ಪಡೆದಿದೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಅಮೆರಿಕ ನಿಯೋಜಿತ ರಾಯಭಾರಿ ಸೆರ್ಗಿಯೊ ಗೋರ್- ಮೋದಿ, ಜೈಶಂಕರ್ ಭೇಟಿ; Tariff ಒತ್ತಡದ ನಡುವೆ ಭಾರತ-ಅಮೆರಿಕ ಸಂಬಂಧ ಸುಧಾರಣೆಯ ಸೂಚನೆ?

ಅಫ್ಘಾನಿಸ್ತಾನ ನಮ್ಮೊಂದಿಗೆ ಗಡಿ ಹಂಚಿಕೊಂಡಿರುವ ನೆರೆ ರಾಷ್ಟ್ರ- S Jaishankar; ಭಾರತದೊಂದಿಗೆ POK ವಿಲೀನದ ಸುಳಿವು; ಚೀನಾಗೂ ಶಾಕ್!

ಅಬ್ಬಬ್ಬಾ ರೋಮಾಂಚನ: ಅದ್ಭುತ ಸೃಷ್ಟಿಸಿದ ರಿಷಬ್ ಶೆಟ್ಟಿಗೆ ರಾಷ್ಟ್ರಪ್ರಶಸ್ತಿ ಕೊಡಲೇಬೇಕು - ತಮಿಳು ನಿರ್ದೇಶಕ ಅಟ್ಲೀ

Pakistan: ಇಸ್ರೇಲ್ ವಿರೋಧಿ ಪ್ರತಿಭಟನಾ ಜಾಥಾ, ಪೋಲೀಸರ ಗುಂಡೇಟಿಗೆ 11 ಮಂದಿ ಬಲಿ! Video

ಉತ್ತರ ಪ್ರದೇಶಕ್ಕೆ ಭೇಟಿ ನೀಡಿದ ತಾಲಿಬಾನ್ ಸಚಿವನಿಗೆ ಅದ್ಧೂರಿ ಸ್ವಾಗತ, ಸರ್ಕಾರದ ಭದ್ರತೆ; ಯೋಗಿಗೆ ನಾಚಿಕೆಯಾಗಬೇಕು- SP ಸಂಸದ ಶಫೀಕರ್

SCROLL FOR NEXT