ತೆಲುಗು ಚಿತ್ರರಂಗದ ಖ್ಯಾತ ನಟ ರವಿತೇಜ ಅವರ ಸಹೋದರ ಭೂಪತಿರಾಜು ಭರತ್ ರಾಜು
ಹೈದರಾಬಾದ್: ತೆಲುಗು ಚಿತ್ರರಂಗದ ಖ್ಯಾತ ನಟ ರವಿತೇಜ ಅವರ ಸಹೋದರ ಭೂಪತಿರಾಜು ಭರತ್ ರಾಜು ಅವರು ಅಪಘಾತವೊಂದರಲ್ಲಿ ದುರ್ಮರಣವನ್ನಪ್ಪಿರುವ ಘಟನೆ ತೆಲಂಗಾಣ ರಾಜ್ಯದ ಶಂಷಾಬಾದ್'ನಲ್ಲಿ ಶನಿವಾರ ರಾತ್ರಿ ನಡೆದಿದೆ.
ಕಳೆದ ರಾತ್ರಿ 10 ಗಂಟೆ ಸುಮಾರಿಗ ಶಂಷಾಬಾದ್ ನಿಂದ ಗಚಿಬೌಲಿ ಎಂಬ ಪ್ರದೇಶಕ್ಕೆ ಕಾರಿನಲ್ಲಿ ಭರತ್ ರಾಜು ಅವರು ತೆರಳುತ್ತಿದ್ದರು. ಈ ವೇಳೆ ಹಿಂದಿನಿಂದ ವೇಗವಾಗಿ ಬಂದಿರುವ ಲಾರಿಯೊಂದು ರಭಸದಿಂದ ಡಿಕ್ಕಿ ಹೊಡೆದಿದೆ.
ದುರ್ಘಟನೆಯಲ್ಲಿ ಭರತ್ ರಾಜು ಅವರ ಮುಖ ಛಿದ್ರಗೊಂಡಿತ್ತು. ನಟನನ್ನು ಗುರ್ತಿಸಲು ಸಾಧ್ಯವಾಗಿರಲಿಲ್ಲ. ನಂತರ ಕಾರಿನ ಸಂಖ್ಯೆ ಮೂಲಕ ಕುಟುಂಬಸ್ಥರನ್ನು ಸಂಪರ್ಕ ಮಾಡಲಾಗಿತ್ತು. ನಂತರವಷ್ಟೇ ವ್ಯಕ್ತಿ ರವಿತೇಜ ಅವರ ಸಹೋದರ ಎಂಬ ವಿಚಾರ ತಿಳಿದುಬಂದಿತ್ತು ಎಂದು ಪೊಲೀಸರು ಹೇಳಿದ್ದಾರೆ.
ಘಟನೆ ವೇಳೆ ಕಾರಿನಲ್ಲಿ ಭರತ್ ರಾಜು ಒಬ್ಬರೇ ಇದ್ದರು. ಭರತ್ ಅವರು ರವಿತೇಜ ಅವರ ಮೊದಲನೇ ಸಹೋದರನಾಗಿದ್ದು, ರಘು ಎರಡನೇ ಸಹೋದರನಾಗಿದ್ದಾನೆ. ಮೃತಪಟ್ಟಿರುವ ಭರತ್ ಕೂಡ ನಟರಾಗಿದ್ದು, ಸಾಕಷ್ಟು ಸಿನಿಮಾಗಳಲ್ಲಿ ನಟಿಸಿದ್ದಾರೆ. ರೆಡಿ, ಆ ಮುಗ್ಗುರು, ರಾಮ ರಾಮ ಕೃಷ್ಣ ಕೃಷ್ಣ, ದೂಕುಡು, ಅತಡೆ ಒಕ ಸೈನ್ಯಂ ಸೇರಿದಂತೆ ಹಲವು ಚಿತ್ರಗಳಲ್ಲಿ ನಟಿಸಿ ತೆಲುಗು ಚಿತ್ರರಂಗದಲ್ಲಿ ಹೆಸರು ಮಾಡಿದ್ದಾರೆ
Follow KannadaPrabha channel on WhatsApp
Download the KannadaPrabha News app to follow the latest news updates
Subscribe and Receive exclusive content and updates on your favorite topics
Subscribe to KannadaPrabha YouTube Channel and watch Videos