ರಾಜ್ ಬಿ ಶೆಟ್ಟಿ-ಪವನ್ ಕುಮಾರ್ 
ಸಿನಿಮಾ ಸುದ್ದಿ

ಮೊಟ್ಟೆ ತಲೆ ಜೊತೆಗೊಂದು ಸೆಲ್ಫಿ ಪ್ರಚಾರಕ್ಕೆ ಮೊರೆಹೋದ ಪವನ್ ಕುಮಾರ್

ನಿರ್ದೇಶಕ ಪವನ್ ಕುಮಾರ್ ಅರ್ಪಿಸುತ್ತಿರುವ 'ಒಂದು ಮೊಟ್ಟೆಯ ಕಥೆ' ಸಿನೆಮಾದ ಪ್ರಚಾರಕ್ಕೆ ಹಲವು ತಂತ್ರಗಳನ್ನು ರೂಪಿಸಿದ್ದಾರೆ. ಅವುಗಳಲ್ಲಿ ಒಂದು ಮೊಟ್ಟೆ ತಲೆಯ ಜೊತೆಗೊಂದು ಸೆಲ್ಫಿ.

ಬೆಂಗಳೂರು: ನಿರ್ದೇಶಕ ಪವನ್ ಕುಮಾರ್ ಅರ್ಪಿಸುತ್ತಿರುವ 'ಒಂದು ಮೊಟ್ಟೆಯ ಕಥೆ' ಸಿನೆಮಾದ ಪ್ರಚಾರಕ್ಕೆ ಹಲವು ತಂತ್ರಗಳನ್ನು ರೂಪಿಸಿದ್ದಾರೆ. ಅವುಗಳಲ್ಲಿ ಒಂದು ಮೊಟ್ಟೆ ತಲೆಯ ಜೊತೆಗೊಂದು ಸೆಲ್ಫಿ. ಯಾವುದಾದರೂ ಮಾಲ್ ನೊಳಗೆ ಹೊಕ್ಕಿ, ಅಲ್ಲಿರುವ ಕಟ್ ಔಟ್ ಗೆ ನಿಮ್ಮ ಮೊಟ್ಟೆ ತಲೆ ಸಿಕ್ಕಿಸಿ ಸೆಲ್ಫಿ ತೆಗೆದು ಕಳುಹಿಸಬೇಕಂತೆ! 
'ಒಂದು ಮೊಟ್ಟೆಯ ಕಥೆ'ಯ ನಿರ್ಮಾಪಕರೂ ಆಗಿರುವ ಪವನ್, ಈ ಅಭಿಯಾನ ಕೇವಲ ಪ್ರಚಾರ ಮಾತ್ರವಷ್ಟೇ ಅಲ್ಲ ಬದಲಾಗಿ ಬೋಳು ತಲೆಯ ಜನಗಳ ಜೊತೆಗೆ ನಾವಿದ್ದೇವೆ ಎಂದು ತೋರಿಸುವುದಕ್ಕೂ ಎನ್ನುತ್ತಾರೆ. "ಈ ಪ್ರಕ್ರಿಯೆಯಲ್ಲಿ ನನಗೆ ತಿಳಿದದ್ದೇನೆಂದರೆ ಬೋಳು ತಲೆಯವರನ್ನು ನಮ್ಮ ಹಾಗೆ ಹೆಚ್ಚು ಕೂದಲಿರುವ ಜನ ಪರಿಹಾಸ್ಯ ಮಾಡುತ್ತಾರೆ. ಇದರಿಂದ ಅಂತಹ ವ್ಯಕ್ತಿಗಳಿಗೆ ನೋವಾಗಬಹುದು" ಎನ್ನುತ್ತಾರೆ. 
ಇದರ ಸುತ್ತ ಹಾಸ್ಯ ಚರ್ಚೆಯನ್ನು ಮಾಡುವ ಇರಾದೆ ಹೊಂದಿದ್ದರೂ, ಬೋಳು ತಲೆಯ ಯಾವ ವ್ಯಕ್ತಿಯು ಇದಕ್ಕೆ ಮುಂದಾಗದೆ ಇದ್ದಿದ್ದರಿಂದ ಕೈಬಿಟ್ಟೆ ಎನ್ನುತ್ತಾರೆ. 
"ಆದುದರಿಂದ ತಲೆಯಲ್ಲಿ ಹೆಚ್ಚು ಕೂದಲಿರುವ ಜನ, ಮೊಟ್ಟೆ ತಲೆ ಜೊತೆಗೊಂದು ಸೆಲ್ಫಿಯಲ್ಲಿ ಭಾಗಿಯಾಗಿ, ಬೋಳು ತಲೆಯವರ ಅನುಭವ ಪಡೆಯಬೇಕು.  ನಂತರ ಬೋಳು ತಲೆ ಹೊಂದಿರುವುದು ಹೊಸ ಶೈಲಿಯಾಗುತ್ತದೆ ಎಂದು ನಂಬಿದ್ದೇನೆ" ಎನ್ನುತ್ತಾರೆ ಪವನ್. 
ಚೊಚ್ಚಲ ನಿರ್ದೇಶಕ ರಾಜ್ ಬಿ ಶೆಟ್ಟಿ ನಿರ್ದೇಶಿಸಿ ಅವರೇ ಮುಖ್ಯ ಭೂಮಿಕೆಯಲ್ಲಿ ನಟಿಸಿರುವ 'ಒಂದು ಮೊಟ್ಟೆಯ ಕಥೆ' ಜುಲೈ ೭ಕ್ಕೆ ಬಿಡುಗಡೆಯಾಗಲಿದೆ. ಈ ಸಿನೆಮಾಗೆ ಮಿಧುನ್ ಮುಕುಂದನ್ ಸಂಗೀತ ನೀಡಿದ್ದಾರೆ. 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ಬಿಜೆಪಿ ಸಂಸದೀಯ ಮಂಡಳಿಯಲ್ಲಿ ಮಹತ್ತರ ಬದಲಾವಣೆ ಸಾಧ್ಯತೆ; ನಾಲ್ವರು ಮುಖ್ಯಮಂತ್ರಿಗಳಿಗೆ ಸ್ಥಾನ?

ಇರಾನ್‌ ತೈಲ ವಹಿವಾಟಿಗೆ ಅಮೆರಿಕಾ ಬ್ರೇಕ್: ಭಾರತದ 4 ಕಂಪನಿಗಳು ಕಪ್ಪುಪಟ್ಟಿಗೆ, 3 ಪ್ರಜೆಗಳ ಮೇಲೂ ನಿರ್ಬಂಧ..!

"ಮದುವೆ ಅಂದ್ರೆ ಗುಲಾಮಗಿರಿಯಲ್ಲ, ಮನೆಗೆಲಸ ಮಾಡು-ಅತ್ತೆ-ಮಾವನ ನೋಡ್ಕೋ ಅನ್ನೋಕೆ ಗಂಡನಿಗೆ ಹಕ್ಕಿಲ್ಲ": ಹೈಕೋರ್ಟ್ ಮಹತ್ವದ ತೀರ್ಪು..!

ಬಿಡದಿ ಟೌನ್‌ಶಿಪ್‌ ಯೋಜನೆ: ರೈತರ ಭೂಮಿ ಕಸಿಯಲ್ಲ, denotification ಮಾಡಲ್ಲ- ಸಿಎಂ ಡಿಕೆ. ಶಿವಕುಮಾರ್ ಸ್ಪಷ್ಟನೆ

Operation Sindoor; Kirana Hills ಪರಮಾಣು ನೆಲೆಗೆ ಅಪ್ಪಳಿಸಿದ ಭಾರತದ ಡ್ರೋನ್? ಬೆಚ್ಚಿಬಿದ್ದ ಪಾಕಿಸ್ತಾನ..! Indian Army ಹೇಳಿದ್ದೇನು?