'ಹುಲಿರಾಯ' ಸಿನೆಮಾದ ಪೋಸ್ಟರ್ 
ಸಿನಿಮಾ ಸುದ್ದಿ

ಘರ್ಜಿಸಲು ಬರುತ್ತಿದ್ದಾನೆ 'ಹುಲಿರಾಯ'

'ನಮ್ ಏರಿಯಾದಲ್ಲಿ ಒಂದಿನ', 'ತುಘಲಕ್' ಸಿನೆಮಾಗಳ ನಂತರ ವಿರಾಮ ತೆಗೆದುಕೊಂಡಿದ್ದ ನಿರ್ದೇಶಕ ಅರವಿಂದ್ ಕೌಶಿಕ್ ಈಗ 'ಹುಲಿರಾಯ'ನ ಮೂಲಕ ಹಿಂದಿರುಗಿದ್ದಾರೆ.

ಬೆಂಗಳೂರು: 'ನಮ್ ಏರಿಯಾದಲ್ಲಿ ಒಂದಿನ', 'ತುಘಲಕ್' ಸಿನೆಮಾಗಳ ನಂತರ ವಿರಾಮ ತೆಗೆದುಕೊಂಡಿದ್ದ ನಿರ್ದೇಶಕ ಅರವಿಂದ್ ಕೌಶಿಕ್ ಈಗ 'ಹುಲಿರಾಯ'ನ ಮೂಲಕ ಹಿಂದಿರುಗಿದ್ದಾರೆ. 
ನೆನಪಿನಲ್ಲುಳಿಯುವ ಸಿನೆಮಾ ಮಾಡಿದ್ದೇನೆ ಎಂದು ಆತ್ಮವಿಶ್ವಾಸ ವ್ಯಕ್ತಪಡಿಸುವ ಅರವಿಂದ್ "ನನ್ನ ಕಥೆ ಹಿಡಿದು ಎಲ್ಲ ನಿರ್ಮಾಪಕರಿಗೂ ಒಪ್ಪಿಸುವ ಬದಲು, ಟೀಸರ್ ಅನ್ನು ಸಾಮಾಜಿಕ ಜಾಲತಾಣದಲ್ಲಿ ಹಾಕಿದ್ದೆ. ಇದಕ್ಕೆ ಬಂದ ಅಭೂತಪೂರ್ವ ಪ್ರತಿಕ್ರಿಯೆ ನನಗೆ ನಿರ್ಮಾಪಕನನ್ನು ದೊರಕಿಸಿಕೊಟ್ಟಿತು ಮತ್ತು ಅವರು ನನ್ನ ಗೆಳೆಯ ಕೂಡ" ಎನ್ನುತ್ತಾರೆ.
"ಈ ಸಿನೆಮಾ ಕೇಂದ್ರದಲ್ಲಿ ಮನರಂಜನೆಯಿಂದ ಕೂಡಿರುವಂತಾದ್ದು. ನನ್ನ ಗೆಳೆಯನ ಜೊತೆಗೆ ಕಾಡಿಗೆ ಹೋದಾಗ ಈ ಕಥೆ ಹೊಳೆದದ್ದು. ಹುಲಿಯ ಕಥೆ ಮೂಲಕ ನನ್ನ ಕಥೆ ಹೇಳುವುದು ಸುಲಭ ಎಂದೆನಿಸಿತು. ಆದರೆ ನನ್ನ ಸಿನೆಮಾದಲ್ಲಿ ಹುಲಿ ಎಲ್ಲಿಯೂ ಬರುವುದಿಲ್ಲ" ಎನ್ನುತ್ತಾರೆ ಅರವಿಂದ್. 
"ಈ ಸಿನೆಮಾದಲ್ಲಿ ಪ್ರೇಮಕಥೆಯಿದೆ, ಭಾವನಾತ್ಮಕ ಪಯಣ ಇದೆ, ಆಕ್ಷನ್ ಇದೆ ಮತ್ತು ಥ್ರಿಲ್ಲರ್ ಇದೆ" ಎನ್ನುತ್ತಾರೆ. 
ಸಿನೆಮಾದಲ್ಲಿ ಬಾಲು ನಾಗೇಂದ್ರ, ದಿವ್ಯ, ಚಿರಶ್ರೀ ಮುಂತಾದವರು ನಟಿಸಿದ್ದು ಆಗಸ್ಟ್ ನಲ್ಲಿ ಬಿಡುಗಡೆಯಾಗುವ ಸಾಧ್ಯತೆಯಿದೆ. ಅರ್ಜುನ್ ರಾಮು ಸಂಗೀತ ನೀಡಿರುವ ಈ ಸಿನೆಮಾವನ್ನು ಪುಷ್ಕರ್ ಫಿಲಂಸ್ ವಿತರಣೆ ಮಾಡುವ ಸಾಧ್ಯತೆ ಇದೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಭಾರತದ ಮೇಲೆ ಶೇ.50 ರಷ್ಟು ಸುಂಕಾಸ್ತ್ರ ಜಾರಿ: ದಿನದ ಕೊನೆಗೆ ಒಟ್ಟಿಗೆ ಸೇರ್ತಿವಿ! US ಖಜಾನೆ ಮುಖ್ಯಸ್ಥರು ಹಿಂಗ್ಯಾಕಂದ್ರು?

ಸಶಸ್ತ್ರ ಪಡೆಗಳು ಮುಂದಿನ ಭದ್ರತಾ ಸವಾಲುಗಳಿಗೆ ಸಿದ್ಧರಾಗಿರಬೇಕು: ರಾಜನಾಥ್ ಸಿಂಗ್

ಹಿಂದೂ ನಂಬಿಕೆ ಒಡೆಯುತ್ತಿರುವ ಬಾನು ಮುಷ್ತಾಕ್: ಶಿವನ ಬೆಟ್ಟವನ್ನೇ 'ಯೇಸು ಬೆಟ್ಟ' ಮಾಡಲು ಹೊರಟವರಿಂದ ಧರ್ಮದ ಪಾಠ ಬೇಡ- ಪ್ರತಾಪ್ ಸಿಂಹ

2030 Commonwealth Games: ಭಾರತದ ಬಿಡ್‌ಗೆ ಕೇಂದ್ರ ಸಂಪುಟದ ಅನುಮೋದನೆ! ಅಹಮದಾಬಾದ್ ನಲ್ಲಿ ಆಯೋಜಿಸುವ ಪ್ರಸ್ತಾಪ!

Theaterisation: 'ಥಿಯೇಟರ್ ಕಮಾಂಡ್‌' ರಚನೆ: ಪ್ರಯತ್ನದಲ್ಲಿ ಪ್ರಗತಿ ಸಾಧಿಸಲಾಗುತ್ತಿದೆಯೇ? ಆಡ್ಮಿರಲ್ ಡಿಕೆ ತ್ರಿಪಾಠಿ ಹೇಳಿದ್ದು ಹೀಗೆ...

SCROLL FOR NEXT