ನಟಿ ರಾಧಿಕಾ ಪಂಡಿತ್ 
ಸಿನಿಮಾ ಸುದ್ದಿ

ಇಂದು ರಾಧಿಕಾ ಪಂಡಿತ್ ಹುಟ್ಟು ಹಬ್ಬ: ಸದ್ಯದಲ್ಲೆ ಮತ್ತೆ ಬರುವೆ ಎಂದ ನಟಿ

ವಿವಾಹದ ನಂತರ ನಟಿಯರಿಗೆ ವೃತ್ತಿ ಜೀವನದಲ್ಲಿ ಸಂಪೂರ್ಣವಾಗಿ ತೊಡಗಿಸಿಕೊಳ್ಳುವುದಕ್ಕೆ ತಡೆಯಾಗುತ್ತದೆ ಎಂಬ ನಂಬಿಕೆ ದಟ್ಟವಾಗಿದ್ದರು, ಮದುವೆಯಾದ ಮೇಲೆ ಸಿನೆಮಾರಂಗದಿಂದ

ಬೆಂಗಳೂರು: ವಿವಾಹದ ನಂತರ ನಟಿಯರಿಗೆ ವೃತ್ತಿ ಜೀವನದಲ್ಲಿ ಸಂಪೂರ್ಣವಾಗಿ ತೊಡಗಿಸಿಕೊಳ್ಳುವುದಕ್ಕೆ ತಡೆಯಾಗುತ್ತದೆ ಎಂಬ ನಂಬಿಕೆ ದಟ್ಟವಾಗಿದ್ದರು, ಮದುವೆಯಾದ ಮೇಲೆ ಸಿನೆಮಾರಂಗದಿಂದ ದೂರವುಳಿಯುವ ಪ್ರಶ್ನೆಯೇ ಇಲ್ಲ ಎಂದು ಘೋಷಿಸಿದ್ದವರು ನಟಿ ರಾಧಿಕಾ ಪಂಡಿತ್. ನನ್ನ ಮುಂದಿನ ಭವಿಷ್ಯದ ಬಗ್ಗೆ ಮುಕ್ತ ಮನಸ್ಸಿದೆ ಎನ್ನುವ ನಟಿ, ಪತಿ ಮತ್ತು ನಟ ಯಶ್ ಅವರ ಸಂಪೂರ್ಣ ಸಹಕಾರವಿದೆ ಎನ್ನುತ್ತಾರೆ. 
"ಮದುವೆಯಾದ ಮೇಲೆ ಮನೆಗೆಲಸಗಳನ್ನು ನೋಡಿಕೊಂಡು, ಕೆಲವೇ ಸಿನೆಮಾಗಳಲ್ಲಿ ಕೆಲಸ ಮಾಡಿಕೊಂಡು, ನಿರ್ಮಾಣ ಸಂಸ್ಥೆ ಪ್ರಾರಂಭಿಸಬೇಕು ಎಂದು ಜನರ ನಂಬಿಕೆ. ಅದು ನಿಜವಿರಬಹುದು. ಆದರೆ ನಾನು ಇನ್ನು ಚಟುವಟಿಕೆಯಿಂದ ಇದ್ದೇನೆ. ಯಶ್ ಮತ್ತು ನಾನು ಇಬ್ಬರು ಇನ್ನು ಅತ್ಯುತ್ತಮ ಗೆಳೆಯರು ಮತ್ತು ನಮ್ಮ ಈ ಹೊಂದಾಣಿಕೆಯ ನಡುವೆ ಕೆಲಸ ಹೊರಗೆ ಇರುತ್ತದೆ. ಹೀಗಿದ್ದೂ ನಾವಿಬ್ಬರು ಮತ್ತೊಬ್ಬರ ಸಲಹೆ ಪಡೆಯುತ್ತೇವೆ. 
"ನಾನು ಬೇರೆ ಯಾರಿಗೋ ನಟನೆ ಪ್ರಾರಂಭಿಸಿದ್ದಲ್ಲ. ನಾನು 'ಮೊಗ್ಗಿನ ಮನಸ್ಸು' ಪ್ರಾರಂಭಿಸಿದಾಗ ಯಾವ ಮನಸ್ಥಿತಿಯಿತ್ತೋ, ಅದೇ ಮನಸ್ಥಿತಿಯಲ್ಲಿ ಈಗಲೂ ಇದ್ದೇನೆ. ನನಗೆ ಯಾವುದೇ ರೀತಿಯ ನಿರ್ಬಂಧ ಕಾಣುತ್ತಿಲ್ಲ" ಎನ್ನುತ್ತಾರೆ ಇಂದು ಹುಟ್ಟುಹಬ್ಬ ಆಚರಿಸಿಕೊಳ್ಳುತ್ತಿರುವ ನಟಿ ರಾಧಿಕಾ. 
ನಟಿ ಈಗ ಮುಂದಿನ ಸಿನೆಮಾಗೆ ಸಹಿ ಹಾಕಿದ್ದು, ಹುಟ್ಟುಹಬ್ಬದ ಆಚರಣೆಯ ಸಮಯದಲ್ಲಿ ಅದರ ಅಧಿಕೃತ ಘೋಷಣೆ ಆಗಲಿದೆಯಂತೆ. "ನಾನು ಈಗ ಯಾವುದೇ ವಿವರಗಳನ್ನು ಬಹಿರಂಗಪಡಿಸಲು ಸಾಧ್ಯವಿಲ್ಲ. ನಾನು ತಂಡದ ಜೊತೆ ಸ್ಕ್ರಿಪ್ಟ್ ಬಗ್ಗೆ ಚರ್ಚಿಸಿದ್ದೇನೆ ಅದನ್ನು ಉತ್ತಮಪಡಿಸಲು ಈಗ ಕಾರ್ಯ ಪ್ರಗತಿಯಲ್ಲಿದೆ.
"ನಾನು ನಟನೆ ನಿಲ್ಲಿಸಿದ್ದೇನೆ ಎಂದು ತಿಳಿದುಕೊಂಡಿರುವವರಿಗೆ ಹೇಳುವುದೇನೆಂದರೆ ಶೀಘ್ರದಲ್ಲೇ ಹಿಂದಿರುಗಲಿದ್ದೇನೆ" ಎನ್ನುತ್ತಾರೆ ಎರಡು ತಿಂಗಳು ವಿರಾಮ ತೆಗೆದುಕೊಂಡಿದ್ದ ನಟಿ. ಈ ಸಮಯದಲ್ಲಿ ಅವರು ಯಶ್ ಅವರ ಸಾಮಾಜಿಕ ಚಟುವಟಿಕೆಯಾದ 'ಯಶೋಮಾರ್ಗ'ಕ್ಕೆ ಕೈಜೋಡಿಸಿದ್ದಾರೆ. ಉತ್ತರ ಕರ್ನಾಟಕದಲ್ಲಿ ಕೆರೆಗಳ ಪುನರುಜ್ಜೀವನ ಕಾರ್ಯ ಇದಾಗಿದೆ. "ಈ ಯೋಜನೆಯಲ್ಲಿ ನಾನು ತೊಡಗಿಸಿಕೊಂಡಿದ್ದೆ, ಈಗ ನಟನೆಗೆ ಹಿಂದಿರುಗುವ ಸಮಯ" ಎನ್ನುತ್ತಾರೆ. 
ಹುಟ್ಟುಹಬ್ಬ ಸಂಭ್ರಮ 
ಈ ವರ್ಷದ ಹುಟ್ಟುಹಬ್ಬ ರಾಧಿಕಾ ಅವರಿಗೆ ವಿಶೇಷ, ಏಕೆಂದರೆ ಯಶ್ ಅವರನ್ನು ವರಿಸಿದ ಮೇಲೆ ಬಂದಂತ ಮೊದಲ ಹುಟ್ಟುಹಬ್ಬ ಇದು. "ಕರ್ನಾಟಕದ ವಿವಿಧ ಬಾಗಗಳಿಂದ ನನಗೆ ಅಭಿನಂದಿಸಲು ಜನ ಬರಲಿದ್ದಾರೆ. ಈ ಸಮಯದಲ್ಲಿ ಯಶ್ ನನ್ನ ಜೊತೆಗೆ ಸದಾ ಇರುವುದರಿಂದ ನನ್ನ ಖುಷಿ ಇಮ್ಮಡಿಸಲಿದೆ" ಎನ್ನುತ್ತಾರೆ ರಾಧಿಕಾ. 

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ದೆಹಲಿ ಸ್ಫೋಟ ಪ್ರಕರಣದಲ್ಲಿ ಮೊದಲ ಬಂಧನ: i20 ಕಾರಿನ ಮಾಲೀಕ ಆಮಿರ್ Arrest; ಡಾ. ಉಮರ್ ಜೊತೆ ಸೇರಿ ದಾಳಿಗೆ ಸಂಚು!

KPCC ಅಧ್ಯಕ್ಷ ಸ್ಥಾನಕ್ಕೆ ರಾಜಿನಾಮೆ?: ದೆಹಲಿಯಲ್ಲಿ ಸಿಡಿದೆದ್ದ ಡಿಸಿಎಂ ಡಿ.ಕೆ ಶಿವಕುಮಾರ್!

ಹೂಕೋಸು ಫೋಟೋ ಹಾಕಿ ಬಿಹಾರದ NDA ಗೆಲುವು ಸಂಭ್ರಮಿಸಿದ ಅಸ್ಸಾಂ ಬಿಜೆಪಿ ಸಚಿವ!: ಮುಸ್ಲಿಮ್ ನರಮೇಧ ನೆನಪಿಸಿದ್ದಕ್ಕೆ ಕಾಂಗ್ರೆಸ್ ಕೆಂಡ!

ಕುಟುಂಬದ ಮೇಲೆ ದಾಳಿ ಮಾಡುವವರನ್ನು...: ಸಹೋದರಿ ರೋಹಿಣಿಗೆ ಆದ ಅಪಮಾನಕ್ಕೆ ಸಿಡಿದ ತೇಜ್ ಪ್ರತಾಪ್ ಯಾದವ್; ತಂದೆ ಲಾಲು ಪ್ರಸಾದ್ ಗೆ ಹೇಳಿದ್ದೇನು?

ಬೆಂಗಳೂರಿನಲ್ಲಿ ಲೈವ್ ಕಾರ್ಯಕ್ರಮದ ವೇಳೆ ಗಾಯಕನ ಪ್ಯಾಂಟ್ ಎಳೆದು ಅವಮಾನ, Video Viral!

SCROLL FOR NEXT