ನಟಿ ಮಾನ್ವಿತಾ 
ಸಿನಿಮಾ ಸುದ್ದಿ

ಮಾನ್ವಿತಾಗೆ ಸಿನೆಮಾಗಳ ಸುರಿಮಳೆ

ಕೆಂಡಸಂಪಿಗೆ ಹುಡುಗಿಗೆ ವರ್ಷ ೨೦೧೭ ಫಲಪ್ರದವಾಗಿತ್ತು. ಸೂರಿಯವರ 'ಟಗರು' ಸಿನೆಮಾದ ಚಿತ್ರೀಕರಣದಲ್ಲಿ ಭಾಗಿಯಾಗಿರುವ ನಟಿ ಮಾನ್ವಿತಾ ಈಗ ನವೀನ್ ರೆಡ್ಡಿ ನಿರ್ದೇಶನದ 'ರಿಲ್ಯಾಕ್ಸ್ ಸತ್ಯ'

ಬೆಂಗಳೂರು: ಕೆಂಡಸಂಪಿಗೆ ಹುಡುಗಿಗೆ ವರ್ಷ ೨೦೧೭ ಫಲಪ್ರದವಾಗಿತ್ತು. ಸೂರಿಯವರ 'ಟಗರು' ಸಿನೆಮಾದ ಚಿತ್ರೀಕರಣದಲ್ಲಿ ಭಾಗಿಯಾಗಿರುವ ನಟಿ ಮಾನ್ವಿತಾ ಹರೀಶ್ ಈಗ ನವೀನ್ ರೆಡ್ಡಿ ನಿರ್ದೇಶನದ 'ರಿಲ್ಯಾಕ್ಸ್ ಸತ್ಯ' ಸಿನೆಮಾದಲ್ಲಿ ಕೂಡ ನಟಿಸುತ್ತಿದ್ದು ಮತ್ತೊಂದು ದೊಡ್ಡ ಯೋಜನೆಯನ್ನು ತಮ್ಮ ತೆಕ್ಕೆಗೆ ತೆಗೆದುಕೊಂಡಿದ್ದಾರೆ. 
ಆರ್ ಚಂದ್ರು ಅವರ 'ಕನಕ' ಸಿನೆಮಾಗೆ ಮಾನ್ವಿತಾ ಆಯ್ಕೆಯಾಗಿದ್ದಾರೆ. ಇದರಲ್ಲಿ ಅವರು ದುನಿಯಾ ವಿಜಯ್ ಎದುರು ನಟಿಸಲಿದ್ದಾರೆ. ಇದನ್ನು ಧೃಢೀಕರಿಸುವ ನಟಿ "ವಿಜಯ್ ಅವರಿಗೆ ಒರಟ ಮತ್ತು ಮುಗ್ಧತೆಯ ನೋಟವಿದೆ. ಇದು ಎಲ್ಲಾ ಹಿರೊಗಳಿಗೂ ಇರುವುದಿಲ್ಲ. ಅಲ್ಲದೆ ನನಗೆ ಸತ್ಯ ಹೆಗಡೆ ಅವರ ಜೊತೆಗೆ ಕೆಲಸ ಮಾಡುವ ಅವಕಾಶ ಸಿಕ್ಕಿದೆ. ನಾನು ಅವರನ್ನು ಕನ್ನಡ ಚಿತ್ರರಂಗದ ಅತ್ಯದ್ಭುತ ಸಿನೆಮ್ಯಾಟೋಗ್ರಾಫರ್ ಗಳಲ್ಲಿ ಒಬ್ಬರು ಎಂದು ನಂಬುತ್ತೇನೆ. 'ಕೆಂಡಸಂಪಿಗೆ' ಯಸ್ಸಿಗೆ ಅವರು ಕೂಡ ಒಬ್ಬ ಕಾರಣಕರ್ತರು" ಎನ್ನುತ್ತಾರೆ ನಟಿ. 
ಒಬ್ಬ ನಾಯಕನಟಿಯನ್ನು ಅಂತಿಮಗೊಳಿಸಿರುವ ನಿರ್ದೇಶಕ ಚಂದ್ರು ಈಗ 'ಕನಕ' ಚಿತ್ರೀಕರಣಕ್ಕೆ ಸಜ್ಜಾಗಿದ್ದಾರೆ. ಮೊದಲಾರ್ಧ ಚಿತ್ರೀಕರಣ ಸಂಪೂರ್ಣಗೊಂಡ ಮೇಲೆ ಮತ್ತೊಬ್ಬ ಹೀರೋಯಿನ್ ಹೆಸರನ್ನು ನಿರ್ದೇಶಕ ಧೃಢೀಕರಿಸಲಿದ್ದಾರಂತೆ.  
'ಕನಕ'ದಲ್ಲಿ ವಿಜಯ್ ಆಟೋ ಚಾಲಕನ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದು, ನವೀನ್ ಸಜ್ಜು ಸಂಗೀತ ನೀಡಲಿದ್ದಾರೆ. 

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಅಮೆರಿಕ ನಿಯೋಜಿತ ರಾಯಭಾರಿ ಸೆರ್ಗಿಯೊ ಗೋರ್- ಮೋದಿ, ಜೈಶಂಕರ್ ಭೇಟಿ; Tariff ಒತ್ತಡದ ನಡುವೆ ಭಾರತ-ಅಮೆರಿಕ ಸಂಬಂಧ ಸುಧಾರಣೆಯ ಸೂಚನೆ?

ಅಫ್ಘಾನಿಸ್ತಾನ ನಮ್ಮೊಂದಿಗೆ ಗಡಿ ಹಂಚಿಕೊಂಡಿರುವ ನೆರೆ ರಾಷ್ಟ್ರ- S Jaishankar; ಭಾರತದೊಂದಿಗೆ POK ವಿಲೀನದ ಸುಳಿವು; ಚೀನಾಗೂ ಶಾಕ್!

ಅಬ್ಬಬ್ಬಾ ರೋಮಾಂಚನ: ಅದ್ಭುತ ಸೃಷ್ಟಿಸಿದ ರಿಷಬ್ ಶೆಟ್ಟಿಗೆ ರಾಷ್ಟ್ರಪ್ರಶಸ್ತಿ ಕೊಡಲೇಬೇಕು - ತಮಿಳು ನಿರ್ದೇಶಕ ಅಟ್ಲೀ

Pakistan: ಇಸ್ರೇಲ್ ವಿರೋಧಿ ಪ್ರತಿಭಟನಾ ಜಾಥಾ, ಪೋಲೀಸರ ಗುಂಡೇಟಿಗೆ 11 ಮಂದಿ ಬಲಿ! Video

ಉತ್ತರ ಪ್ರದೇಶಕ್ಕೆ ಭೇಟಿ ನೀಡಿದ ತಾಲಿಬಾನ್ ಸಚಿವನಿಗೆ ಅದ್ಧೂರಿ ಸ್ವಾಗತ, ಸರ್ಕಾರದ ಭದ್ರತೆ; ಯೋಗಿಗೆ ನಾಚಿಕೆಯಾಗಬೇಕು- SP ಸಂಸದ ಶಫೀಕರ್

SCROLL FOR NEXT