ಮೈಸೂರು: ಬಿಡುಗಡೆಗೂ ಮುನ್ನವೇ ಬಹುನಿರೀಕ್ಷಿತ ಚಿತ್ರ ಬಾಹುಬಲಿ-2ಗೆ ಕಂಟಕ ಎದುರಾಗಿದೆ. ರಾಜ್ಯದ ಹಲವೆಡೆ ಬಾಹುಬಲಿ ಚಿತ್ರ ಬಿಡುಗಡೆಗೆ ವಿರೋಧಿಸಿ ಪ್ರತಿಭಟನೆಗಳು ನಡೆಯುತ್ತಿವೆ.
ಬಾಹುಬಲಿ-2 ಚಿತ್ರ ವಿರೋಧಕ್ಕೆ ಚಿತ್ರದಲ್ಲಿ ನಟಿಸಿರುವ 'ಕಟ್ಟಪ್ಪ' ಸತ್ಯರಾಜ್ ಅವರೇ ಕಾರಣ ಎಂದು ಹೇಳಲಾಗುತ್ತಿದೆ. ಈ ಹಿಂದೆ ಕಾವೇರಿ ವಿವಾದ ಸಂಬಂಧ ಈ ಹಿಂದೆ ಅವಹೇಳನಕಾರಿಯಾಗಿ ಹೇಳಿಕೆ ನೀಡಿದ್ದರು. ಈ ಹಿನ್ನಲೆಯಲ್ಲಿ ಕನ್ನಡ ಪರ ಸಂಘಟನೆಗಳು ಚಿತ್ರ ಬಿಡುಗಡೆಗೆ ವಿರೋಧಗಳನ್ನು ವ್ಯಕ್ತಪಡಿಸುತ್ತಿದ್ದಾರೆ. ಅಲ್ಲದೆ, ಹೇಳಿಕೆ ಸಂಬಂಧ ಸತ್ಯರಾಜ್ ಅವರು ಕೂಡಲೇ ಕ್ಷಮೆಯಾಚಿಸಬೇಕೆಂದು ಆಗ್ರಹಿಸಿದ್ದಾರೆ.
ಬಾಹುಬಲಿ ಚಿತ್ರದಲ್ಲಿ ಕಟ್ಟಪ್ಪ ಎಂಬ ಪಾತ್ರಧಾರಿಯಾಗಿ ಸತ್ಯರಾಜು ಅವುರ ಅಭಿನಯಿಸಿದ್ದಾರೆ. ಕನ್ನಡ ಹೋರಾಟಗಾರರು ಹಾಗೂ ಕಾವೇರಿ ನೀರಿನ ಬಗ್ಗೆ ಅಪಮಾನ ಮಾಡುವ ಹಾಗೆ ಈ ಹಿಂದೆ ಸತ್ಯರಾಜು ಅವರು ಹೇಳಿಕೆ ನೀಡಿದ್ದರು. ಈ ಮೂಲಕ ಕನ್ನಡಿಗರ ಸಹನೆಯನ್ನು ಕೆಣಕಿದ್ದಾರೆ. ಇಂತಹ ಚಿತ್ರವನ್ನು ರಾಜ್ಯಾದ್ಯಂತ ಯಾವ ಚಿತ್ರಮಂದಿಗಳಲ್ಲೂ ಪ್ರದರ್ಶನ ಮಾಡಬಾರದು ಎಂದು ಹೋರಾಟಗಾರರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.