ಸಂಗ್ರಹ ಚಿತ್ರ 
ಸಿನಿಮಾ ಸುದ್ದಿ

ಬಾಹುಬಲಿ-2 ಚಿತ್ರದ ನಿರ್ದೇಶಕ ರಾಜಮೌಳಿ ಸಂಭಾವನೆ ಎಷ್ಟು ಗೊತ್ತಾ?

ಭಾರತೀಯ ಚಿತ್ರರಂಗದ ಬಾಕ್ಸ್ ಆಫೀಸ್ ಇತಿಹಾಸದಲ್ಲೇ ಗರಿಷ್ಠ ಗಳಿಕೆ ಕಂಡ ಚಿತ್ರ ಎಂಬ ದಾಖಲೆ ನಿರ್ಮಾಣದತ್ತ ಮುಖ ಮಾಡಿರುವ ಚಿತ್ರ ಬಾಹುಬಲಿ-2. ಇಂತಹ ಚಿತ್ರದ ನಿರ್ದೇಶಕ ಎಸ್ ಎಸ್ ರಾಜಮೌಳಿ ಅವರ ಸಂಭಾವನೆ ಕೇಳಿದರೆ ಬೆಚ್ಚಿ ಬೀಳುತ್ತೀರಾ...

ನವದೆಹಲಿ: ಭಾರತೀಯ ಚಿತ್ರರಂಗದ ಬಾಕ್ಸ್ ಆಫೀಸ್ ಇತಿಹಾಸದಲ್ಲೇ ಗರಿಷ್ಠ ಗಳಿಕೆ ಕಂಡ ಚಿತ್ರ ಎಂಬ ದಾಖಲೆ ನಿರ್ಮಾಣದತ್ತ ಮುಖ ಮಾಡಿರುವ ಚಿತ್ರ ಬಾಹುಬಲಿ-2. ಇಂತಹ ಚಿತ್ರದ ನಿರ್ದೇಶಕ ಎಸ್ ಎಸ್ ರಾಜಮೌಳಿ ಅವರ  ಸಂಭಾವನೆ ಕೇಳಿದರೆ ಬೆಚ್ಚಿ ಬೀಳುತ್ತೀರಾ...

ಹೌದು..ಭಾರತೀಯ ಚಿತ್ರರಂಗ ಮಾತ್ರವಲ್ಲದೇ ಹಾಲಿವುಡ್ ಮಂದಿ ಕೂಡ ಒಂದು ಕ್ಷಣ ಭಾರತದತ್ತ ತಿರುಗಿ ನೋಡುವಂತೆ ಮಾಡಿದ ಚಿತ್ರ ಬಾಹುಬಲಿ. ಚಿತ್ರ ಬಿಡುಗಡೆಯಾದ ದಿನದಿಂದ ಈ ವರೆಗೂ ಅಂದರೆ ನಾಲ್ಕು ದಿನಗಳ  ಅಂತ್ಯಕ್ಕೆ ಬಾಹುಬಲಿ-2 ಚಿತ್ರ ವಿವಿಧ ಭಾಷೆಗಳಲ್ಲಿ ಸುಮಾರು 650 ಕೋಟಿಗೂ ಅಧಿಕ ಸಂಗ್ರಹ ಮಾಡಿದೆ. ಖ್ಯಾತ ಆರ್ಥಿಕ ವಿಶ್ಲೇಷಕ ರಮೇಶ್‌ ಬಾಲಾ ಅವರು ಈ ಬಗ್ಗೆ ಮಂಗಳವಾರ ಟ್ವೀಟ್‌ ಮಾಡಿದ್ದು, ಬಾಹುಬಲಿ-2 ಕೇವಲ 4  ದಿನಗಳಲ್ಲಿ .625 ಕೋಟಿ ಗಳಿಸಿದೆ. ಭಾರತದಲ್ಲಿ ರು.490 ಕೋಟಿ, ಸಾಗರೋತ್ತರ ರಾಷ್ಟ್ರಗಳಲ್ಲಿ ರು.135 ಕೋಟಿ ಸೇರಿ ಒಟ್ಟು ರು.625 ಕೋಟಿಯನ್ನು ಬಾಹುಬಲಿ-2 ತನ್ನ ತೆಕ್ಕೆಗೆ ಬಾಚಿಕೊಂಡಿದೆ ಎಂದಿದ್ದಾರೆ.

ಇನ್ನು ಈ ಸೂಪರ್ ಹಿಟ್‌ ಚಿತ್ರದಲ್ಲಿ ನಟಿಸಿದ ನಟ-ನಟಿಯರ ಗಳಿಕೆ ಎಷ್ಟುಎಂಬ ಕುತೂಹಲದ ಮಾಹಿತಿ ಇದೀಗ ಬಹಿರಂಗವಾಗಿದ್ದು, ಸಿನೆಮಾ ಸುದ್ದಿಯ ವೆಬ್ ಸೈಟ್ ವೊಂದರ ವರದಿಯ ಪ್ರಕಾರ, ಚಿತ್ರದ ನಾಯಕ ನಟ, ಬಾಹುಬಲಿ  ಪಾತ್ರಧಾರಿ ಪ್ರಭಾಸ್‌ ಗೆ ಈ ಚಿತ್ರಕ್ಕಾಗಿ ರು.25 ಕೋಟಿ ಸಂಭಾವನೆ ಪಾವತಿಸಲಾಗಿದೆಯಂತೆ. ಅಂತೆಯೇ ಚಿತ್ರದ ವಿಲನ್, ಬಲ್ಲಾಳ ದೇವ ಪಾತ್ರಧಾರಿ ರಾಣಾ ದಗ್ಗುಬಾಟಿ ಅವರಿಗೆ ರು.15 ಕೋಟಿ, ಕಟ್ಟಪ್ಪ ಖ್ಯಾತಿಯ ಸತ್ಯರಾಜ್‌ಗೆ .  2 ಕೋಟಿ, ಶಿವಗಾಮಿ ಪಾತ್ರಕ್ಕಾಗಿ ರಮ್ಯಕೃಷ್ಣಾ ಅವರಿಗೆ ರು. 2.5 ಕೋಟಿ, ದೇವಸೇನಾ ಪಾತ್ರಧಾರಿ ಅನುಷ್ಕಾ ಶೆಟ್ಟಿಗೆ ಹಾಗೂ ಆವಂತಿಕಾ ಪಾತ್ರಧಾರಿ ತಮನ್ನಾ ಭಾಟಿಯಾಗೆ ತಲಾ ರು. 5 ಕೋಟಿ ಸಂಭಾವನೆ ಪಾವತಿಸಲಾಗಿದೆ  ಎಂದು ವರದಿ ತಿಳಿಸಿದೆ.

ನಿರ್ದೇಶಕ ರಾಜಮೌಳಿ ಸಂಭಾವನೆ ಎಷ್ಟು ಗೊತ್ತಾ?
ಇನ್ನು ಇಡೀ ಚಿತ್ರದ ಸೂತ್ರಧಾರಿ ಅಂದರೆ ನಿರ್ದೇಶಕ ರಾಜಮೌಳಿ ಅವರಿಗೆ ರು.28 ಕೋಟಿ ಪಾವತಿಸಲಾಗಿದ್ದು, ಇದಲ್ಲದೆ ಚಿತ್ರದ ಲಾಭಾಂಶ ಅಂದರೆ ಚಿತ್ರದ ಗಳಿಕೆಯಲ್ಲಿ ಶೇಕಡಾವಾರು ಲಾಭಾಂಶವನ್ನು ನಿರ್ದೇಶಕರಿಗೆ ನೀಡುವ  ಕುರಿತು ಒಪ್ಪಂದವಾಗಿದೆಯಂತೆ. ಅಂದರೆ 1/3 ಅನುಪಾತದಲ್ಲಿ ಒಪ್ಪಂದವಾಗಿದ್ದು, ಅದರಂತೆ ಚಿತ್ರಗಳಿಸುವ ಲಾಭಾಂಶದ ಹಣದಲ್ಲಿ ನಿರ್ದೇಶಕ ರಾಜಮೌಳಿ ಅವರಿಗೆ 1/3 ಪ್ರಮಾಣದ ಹಣವನ್ನು ನೀಡಲಾಗುತ್ತದೆಯಂತೆ. ಒಂದು  ಅಂದಾಜಿನ ಪ್ರಕಾರ ಈ ಹಣ 100 ಕೋಟಿ ದಾಟುತ್ತದೆ ಎಂದು ವರದಿಯಲ್ಲಿ ಹೇಳಲಾಗಿದೆ.

ಆ ಮೂಲಕ ಇಡೀ ಭಾರತೀಯ ಚಿತ್ರರಂಗದ ಇತಿಹಾಸದಲ್ಲೇ ನಿರ್ದೇಶಕ ಎಸ್ ಎಸ್ ರಾಜಮೌಳಿ ಅತೀ ಹೆಚ್ಚು ಸಂಭಾವನೆ ಪಡೆಯುವ ನಿರ್ದೇಶಕ ಎಂಬ ಖ್ಯಾತಿಗೆ ಪಾತ್ರರಾಗಲಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಬ್ಯಾಂಕ್‌ಗೆ ನಕಲಿ ಗ್ಯಾರಂಟಿ: ರಿಲಯನ್ಸ್‌ ಪವರ್‌ನ ಮುಖ್ಯ ಹಣಕಾಸು ಅಧಿಕಾರಿ ಅಶೋಕ್ ಪಾಲ್ ಬಂಧನ

ಸಮಸ್ತ ಜನರಿಗೆ ಸುಗಮ ಆಡಳಿತ, ಶುದ್ಧ ನೀರಿನ ಪೂರೈಕೆ: ಸ್ವಚ್ಚತೆ- ಸಂಚಾರ ವ್ಯವಸ್ಥೆಗೆ ಸಿಎಂ ಸಿದ್ದರಾಮಯ್ಯ ಕಟ್ಟಪ್ಪಣೆ

ಸಿದ್ದರಾಮಯ್ಯ ಮೇಲೆ ತೂಗುಗತ್ತಿ: ಅಧಿಕಾರದಲ್ಲಿ ಉಳಿಯಲು ಸಂಪುಟ ಪುನಾರಚನೆ ಕಸರತ್ತು; ಬಿಹಾರ-ಕೇರಳ ಚುನಾವಣೆಯತ್ತ ಡಿಕೆಶಿ ಚಿತ್ತ!

ವೀರೇಂದ್ರ ಪಪ್ಪಿ ಕರ್ಮಕಾಂಡ ನೋಡುತ್ತಿದ್ದರೆ CM- DCM ಇನ್ಯಾವ ಪರಿ ಲೂಟಿ ಮಾಡಿ ಹೈಕಮಾಂಡ್ ಗೆ ಕಪ್ಪ ನೀಡುತ್ತಿರಬೇಡಾ?

ಈ ಬಾರಿ ನಾನು ಸಚಿವನಾಗುವ ಭರವಸೆ ಇದೆ: ಸಂಪುಟ ವಿಸ್ತರಣೆಯೇ ನವೆಂಬರ್ ಕ್ರಾಂತಿಯಿರಬಹುದು; ಸಲೀಂ ಅಹ್ಮದ್

SCROLL FOR NEXT