'ನಿಬುಣನ್' ಸಿನೆಮಾದ ಸ್ಟಿಲ್ 
ಸಿನಿಮಾ ಸುದ್ದಿ

ರಜನಿಕಾಂತ್ ಗಮನ ಸೆಳೆದ 'ನಿಬುಣನ್' ಟೀಸರ್

ಅರ್ಜುನ್ ಸರ್ಜಾ ಅವರ ೧೫೦ನೆಯ ಸಿನೆಮಾ 'ನಿಬುಣನ್' ಟೀಸರ್ ಅನಾವರಣ ಮಾಡಿದ ರಜನಿಕಾಂತ್, ಅದನ್ನು ಪ್ರಶಂಸಿಸಿರುವುದಕ್ಕೆ ಚಿತ್ರ ತಂಡ ಥ್ರಿಲ್ ಆಗಿದೆ.

ಬೆಂಗಳೂರು: ಅರ್ಜುನ್ ಸರ್ಜಾ ಅವರ ೧೫೦ನೆಯ ಸಿನೆಮಾ  'ನಿಬುಣನ್' ಟೀಸರ್ ಅನಾವರಣ ಮಾಡಿದ ರಜನಿಕಾಂತ್, ಅದನ್ನು ಪ್ರಶಂಸಿಸಿರುವುದಕ್ಕೆ ಚಿತ್ರ ತಂಡ ಥ್ರಿಲ್ ಆಗಿದೆ. 
ಇದರ ಬಗ್ಗೆ ಪ್ರತಿಕ್ರಿಯಿಸಿರುವ ನಿರ್ದೇಶಕ ಅರುಣ್ ವೈದ್ಯನಾಥನ್ "ಟೀಸರ್ ನೋಡಿ ಅವರು (ರಜನೀಕಾಂತ್) ಬಹಳ ಖುಷಿ ಪಟ್ಟರು ಮತ್ತು ಎರಡನೇ ಬಾರಿ ನೋಡುವ ಆಸೆ ವ್ಯಕ್ತಪಡಿಸಿದರು. ಟೀಸರ್ ನೋಡಿ ಅವರು ಕೇಳಿದ ಮೊದಲ ಪ್ರಶ್ನೆ - ಸಂಗೀತ ನೀಡಿರುವವರು ಯಾರೆಂದು. ಸಿನೆಮಾವನ್ನು ಸರಿಯಾಗಿ ಪ್ರಚಾರ ಮಾಡಲು ಸಲಹೆ ನೀಡಿದರು" ಎನ್ನುತ್ತಾರೆ. 
ಕನ್ನಡ ಟ್ರೇಲರ್ ಅನ್ನು ಕೂಡ ಪ್ರಚಾರ ಮಾಡುವ ಯೋಜನೆಗಳಿವೆ ಎನ್ನುವ ಅವರು "ದೇಶದಾದ್ಯಂತ ರಜನಿಕಾಂತ್ ಅವರಿಗೆ ಅಭಿಮಾನಿಗಳಿದ್ದಾರೆ. ಕನ್ನಡ ಸಿನೆಮಾರಂಗದ ಇತರ ತಾರೆಯರನ್ನು ಕೂಡ ನಾವು ಪ್ರಚಾರಕ್ಕೆ ಪರಿಗಣಿಸುತ್ತಿದ್ದೇವೆ. ಕಿಚ್ಚ ಸುದೀಪ್ ಕೂಡ ನಮ್ಮ ಟ್ರೇಲರ್ ನೋಡಿದ್ದಾರೆ. ಅದಿನ್ನೂ ಅಂತಿಮಗೊಂಡಿಲ್ಲವಾದರೂ ಅವರಿಗೆ ಇಷ್ಟವಾಯಿತು. ಅದನ್ನು ಇನ್ನಷ್ಟು ಸರಿಪಡಿಸಿ ಅವರಿಗೆ ಮತ್ತೆ ತೋರಿಸಲಿದ್ದೇವೆ" ಎನ್ನುತ್ತಾರೆ ಅರುಣ್. 
ಈ ಸಿನೆಮಾ ಕನ್ನಡದಲ್ಲಿ 'ವಿಸ್ಮಯ' ಎಂಬ ಹೆಸರಿನಲ್ಲಿ ಮೂಡಿಬರುತ್ತಿದ್ದು, ಅದರ ಟೀಸರ್ ಕೂಡ ನೆನ್ನೆ ಬಿಡುಗಡೆಯಾಗಿದೆ. 

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

26/11 ಮುಂಬೈ ದಾಳಿಗೆ 17 ವರ್ಷ: ಕರಾಳ ದಿನ ನೆನೆದ ದೇಶದ ಜನತೆ, ಹುತಾತ್ಮರಿಗೆ ಭಾವಪೂರ್ಣ ಶ್ರದ್ಧಾಂಜಲಿ

ಸಿಎಂ ಹುದ್ದೆ ಗುದ್ದಾಟ: ಸಿದ್ದರಾಮಯ್ಯ-ಡಿ ಕೆ ಶಿವಕುಮಾರ್ ಗೆ ಹೈಕಮಾಂಡ್ ದೆಹಲಿಗೆ ಬುಲಾವ್ ಸಾಧ್ಯತೆ

ನವೆಂಬರ್ 28ರಂದು ಉಡುಪಿಗೆ ಪ್ರಧಾನಿ ಮೋದಿ: ಬನ್ನಂಜೆಯಿಂದ ಕಲ್ಸಂಕ ಜಂಕ್ಷನ್‌ವರೆಗೆ ರೋಡ್ ಶೋ

ವಿದೇಶದಲ್ಲೂ ನಂದಿನಿ ತುಪ್ಪಕ್ಕೆ ಹೆಚ್ಚಿದ ಬೇಡಿಕೆ; ಅಮೆರಿಕಾ ಸೇರಿದಂತೆ ಮೂರು ರಾಷ್ಟ್ರಗಳಿಗೆ ರಫ್ತು..!

CLP ಸಭೆಯಲ್ಲಿ ಸರ್ವಾನುಮತದಿಂದ ಸಿದ್ದರಾಮಯ್ಯ ಅವರನ್ನು ಆಯ್ಕೆ ಮಾಡಲಾಗಿತ್ತು, 50:50 ಒಪ್ಪಂದವಾಗಿಲ್ಲ: ಕೆ.ಜೆ. ಜಾರ್ಜ್ ಸ್ಪಷ್ಟನೆ

SCROLL FOR NEXT