ರನ್ಯ ರಾವ್ 
ಸಿನಿಮಾ ಸುದ್ದಿ

ಮುಂದಿನ ಯೋಜನೆಯ ಬಗ್ಗೆ ಗುಟ್ಟು ಬಿಚ್ಚಿಡದ ರನ್ಯ ರಾವ್

ಸುದೀಪ್ ನಟನೆಯ 'ಮಾಣಿಕ್ಯ' ಸಿನೆಮಾದಲ್ಲಿ ತಮ್ಮ ವೃತ್ತಿ ಜೀವನ ಆರಂಭಿಸಿದ ರನ್ಯ ರಾವ್, ತಮ್ಮ ಕೌಶಲ್ಯವನ್ನು ವೃದ್ಧಿಸಿಕೊಳ್ಳಲು ನಟಿ ಈಗಿನ ತಮ್ಮ ವಿರಾಮವನ್ನು

ಬೆಂಗಳೂರು: ಸುದೀಪ್ ನಟನೆಯ 'ಮಾಣಿಕ್ಯ' ಸಿನೆಮಾದಲ್ಲಿ ತಮ್ಮ ವೃತ್ತಿ ಜೀವನ ಆರಂಭಿಸಿದ ರನ್ಯ ರಾವ್, ತಮ್ಮ ಕೌಶಲ್ಯವನ್ನು ವೃದ್ಧಿಸಿಕೊಳ್ಳಲು ನಟಿ ಈಗಿನ ತಮ್ಮ ವಿರಾಮವನ್ನು ವಿನಿಯೋಗಿಸಿಕೊಳ್ಳುತ್ತಿದ್ದಾರಂತೆ.
'ಪಟಾಕಿ' ಸಿನೆಮಾ ಬಿಡುಗಡೆ ಸನಿಹವಾಗುತ್ತಿರುವ ಸಮಯದಲ್ಲಿ ಮಾತಿಗೆ ಸಿಕ್ಕ ನಟಿ "'ಪಟಾಕಿ' ಸಿನೆಮಾದೊಂದಿಗೆ ನಾನು ಕೇವಲ ಮೂರೂ ಸಿನೆಮಾಗಳಲ್ಲಿ ನಟಿಸಿದಂತಾಯಿತು. ಕೆಲಸದ ವಿಷಯದಲ್ಲಿ ಹಲವು ಸಂಗತಿಗಳು ಇದ್ದರೂ ಸದ್ಯಕ್ಕೆ ಅವುಗಳ ಬಗ್ಗೆ ಹೇಳಲು ಸಾಧ್ಯವಿಲ್ಲ" ಎನ್ನುತ್ತಾರೆ ರನ್ಯ. 
"ನನ್ನ ಪ್ಯಾಷನ್ ಇನ್ನು ಜೀವಂತವಾಗಿದೆ ಮತ್ತು ನನ್ನ ಗುರಿ ಇನ್ನು ಗಟ್ಟಿಯಾಗಿದೆ. ನಾನು ಇನ್ನು ಉತ್ತಮ ನಟಿಯಾಗಬೇಕು ಅಷ್ಟೆ" ಎನ್ನುವ ರನ್ಯ, ನಾನು ಸಿನೆಮಾ ರಂಗದಲ್ಲಿ ಇರುವುದು ಅತಿ ಹೆಚ್ಚು ಸಿನೆಮಾಗಳಲ್ಲಿ ನಟಿಸಬೇಕು ಎಂಬ ಆಸೆಯಿಂದಲ್ಲ ಎನ್ನುತ್ತಾರೆ. ಭಾಷೆ ಕೂಡ ನನಗೆ ತಡೆಯಾಗಿಲ್ಲ ಎನ್ನುವ ನಟಿ "ಕನ್ನಡ ಮತ್ತು ತಮಿಳಿನಲ್ಲಿ ಪಾದಾರ್ಪಣೆ ಮಾಡಲು ಎರಡು ಒಳ್ಳೆಯ ಸಿನೆಮಾಗಳು ಸಿಕ್ಕವು. ನಾನು ನಿಧಾನವಾಗಿ ಮುಂದುವರೆಯುತ್ತಿದ್ದೇನೆ ಮತ್ತು ಸಾಕಷ್ಟು ಉತ್ತಮಗೊಳ್ಳಬೇಕಿದೆ" ಎನ್ನುತ್ತಾರೆ. 
'ಪಟಾಕಿ'ಗಾಗಿ ಎರಡು ವರ್ಷಗಳ ಸಮಯ ಮೀಸಲಿಟ್ಟಿದ್ದೆ ಎನ್ನವ ನಟಿ ಈಗ ಅದರ ಬಿಡುಗಡೆಗೆ ಎದುರುನೋಡುತ್ತಿದ್ದಾರೆ. "ಇದು ಸುದೀರ್ಘ ಸಮಯ ತೆಗೆದುಕೊಂಡಿತು ಆದರೆ ಸಿನೆಮಾ ಸುತ್ತ ಧನಾತ್ಮಕ ಬಜ್ ಸೃಷ್ಟಿಯಾಗುತ್ತಿರುವುದು ಖುಷಿ ತಂದಿದೆ. ಮಂಜು ಸ್ವರಾಜ್ ನಿರ್ದೇಶನದ ಮತ್ತು ಗಣೇಶ್ ನಟನೆಯ ಈ ಸಿನೆಮಾದಲ್ಲಿ ಸಂಪೂರ್ಣ ಮನರಂಜನೆ ಸಿಗಲಿದೆ. ಈ ಲಘು ಹಾಸ್ಯ ಸಿನೆಮಾದಲ್ಲಿ ನಟಿಸಲು ಅವಕಾಶ ಸಿಕ್ಕಿದ್ದು ನನ್ನ ಭಾಗ್ಯ. ಇಲ್ಲಿ ನನಗೆ ನೃತ್ಯ ಮಾಡುವ ಅವಕಾಶವೂ ಇತ್ತು" ಎನ್ನುತ್ತಾರೆ. 
ಸದ್ಯಕ್ಕೆ ಮುಂಬೈನಲ್ಲಿ ನೆಲೆಸಿರುವ ನಟಿ "ನನ್ನ ಮುಂದಿನ ಸಿನೆಮಾ ಕನ್ನಡದ್ದು ಅಥವಾ ಮಲಯಾಳಂ ಭಾಷೆಯದ್ದಾಗಿರಬಹುದು. ಅಥವಾ ನಾನು ಬಾಲಿವುಡ್ ಗೆ ಕೂಡ ಪ್ರವೇಶ ಪಡೆಯಬಹುದು. ಯಾರಿಗೆ ಗೊತ್ತು! ಈಗ ಸದ್ಯಕ್ಕೆ ಏನು ಹೇಳುವಂತಿಲ್ಲ. ನಾನಿನ್ನು ಕಲಿಯುವ ಹಂತದಲ್ಲಿದ್ದೇನೆ" ಎನ್ನುತ್ತಾರೆ ರನ್ಯ. 

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಅಮೆರಿಕ ನಿಯೋಜಿತ ರಾಯಭಾರಿ ಸೆರ್ಗಿಯೊ ಗೋರ್- ಮೋದಿ, ಜೈಶಂಕರ್ ಭೇಟಿ; Tariff ಒತ್ತಡದ ನಡುವೆ ಭಾರತ-ಅಮೆರಿಕ ಸಂಬಂಧ ಸುಧಾರಣೆಯ ಸೂಚನೆ?

ಅಫ್ಘಾನಿಸ್ತಾನ ನಮ್ಮೊಂದಿಗೆ ಗಡಿ ಹಂಚಿಕೊಂಡಿರುವ ನೆರೆ ರಾಷ್ಟ್ರ- S Jaishankar; ಭಾರತದೊಂದಿಗೆ POK ವಿಲೀನದ ಸುಳಿವು; ಚೀನಾಗೂ ಶಾಕ್!

ಅಬ್ಬಬ್ಬಾ ರೋಮಾಂಚನ: ಅದ್ಭುತ ಸೃಷ್ಟಿಸಿದ ರಿಷಬ್ ಶೆಟ್ಟಿಗೆ ರಾಷ್ಟ್ರಪ್ರಶಸ್ತಿ ಕೊಡಲೇಬೇಕು - ತಮಿಳು ನಿರ್ದೇಶಕ ಅಟ್ಲೀ

Pakistan: ಇಸ್ರೇಲ್ ವಿರೋಧಿ ಪ್ರತಿಭಟನಾ ಜಾಥಾ, ಪೋಲೀಸರ ಗುಂಡೇಟಿಗೆ 11 ಮಂದಿ ಬಲಿ! Video

ಉತ್ತರ ಪ್ರದೇಶಕ್ಕೆ ಭೇಟಿ ನೀಡಿದ ತಾಲಿಬಾನ್ ಸಚಿವನಿಗೆ ಅದ್ಧೂರಿ ಸ್ವಾಗತ, ಸರ್ಕಾರದ ಭದ್ರತೆ; ಯೋಗಿಗೆ ನಾಚಿಕೆಯಾಗಬೇಕು- SP ಸಂಸದ ಶಫೀಕರ್

SCROLL FOR NEXT