ಚೇತನ್ ಮತ್ತು ಲತಾ ಹೆಗಡೆ 
ಸಿನಿಮಾ ಸುದ್ದಿ

ಮಹೇಶ್ ಬಾಬು ಮುಂದಿನ ಚಿತ್ರದ ಹೆಸರು 'ಅತಿರಥ'

ಶೀರ್ಷಿಕೆಗೆ ಸಿನೆಮಾ ನೋಡಲು ಮಾಡುವಂತೆ ಜನರನ್ನು ಸೆಳೆಯುವ ಶಕ್ತಿಯಿದೆ ಎಂದು ನಂಬುವ ನಿರ್ದೇಶಕರಿದ್ದಾರೆ. ಅದಕ್ಕಾಗಿ ಒಳ್ಳೆಯ ಶೀರ್ಷಿಕೆ ಸಿಗುವವರೆಗೂ ಶಾಂತಚಿತ್ತರಾಗಿ ಕಾಯುತ್ತಾರೆ ಕೂಡ.

ಬೆಂಗಳೂರು: ಶೀರ್ಷಿಕೆಗೆ ಸಿನೆಮಾ ನೋಡಲು ಮಾಡುವಂತೆ ಜನರನ್ನು ಸೆಳೆಯುವ ಶಕ್ತಿಯಿದೆ ಎಂದು ನಂಬುವ ನಿರ್ದೇಶಕರಿದ್ದಾರೆ. ಅದಕ್ಕಾಗಿ ಒಳ್ಳೆಯ ಶೀರ್ಷಿಕೆ ಸಿಗುವವರೆಗೂ ಶಾಂತಚಿತ್ತರಾಗಿ ಕಾಯುತ್ತಾರೆ ಕೂಡ. ಈಗಾಗಲೇ ಸಂಕಲನ ಕಾರ್ಯ ನಡೆಸುತ್ತಿರುವ ಸಿನೆಮಾಗೆ ನಿರ್ದೇಶಕ ಮಹೇಶ್ ಬಾಬು ಹೆಸರಿಟ್ಟಿದ್ದು "ನನ್ನ ಸಿನೆಮಾ ಹೆಸರು ಅತಿರಥ" ಎಂದು ಘೋಷಿಸಿದ್ದಾರೆ. 
ಆ ಹೆಸರಿಟ್ಟಿದ್ದಕ್ಕೆ ಕಾರಣವನ್ನು ಹೇಳುವ ಮಹೇಶ್ "ನನ್ನ ಸಿನೆಮಾ ಹೆಸರನ್ನು 'ಅ' ಇಂದಲೇ ಪ್ರಾರಂಭಿಸುವುದು ಭಾವನಾತ್ಮಕ ವಿಷಯ. ಪುನೀತ್ ಅವರ ಸಿನೆಮಾಗಳು ಕೂಡ 'ಅರಸು', 'ಆಕಾಶ್' ಆಗಿದ್ದವು. ಆದುದರಿಂದ ಒಳ್ಳೆಯ ಹೆಸರನ್ನು ಹುಡುಕುವಾಗ ಇದು ಹೊಳೆಯಿತು. ಅದನ್ನು ಮತ್ತೊಬ್ಬರು ಕಾಯ್ದಿರಿಸಿದ್ದರು, ಆದರೂ ಅದನ್ನು ಬಳಸಿಕೊಳ್ಳಲು ಒಪ್ಪಿಗೆ ನೀಡಿದರು" ಎನ್ನುತ್ತಾರೆ ಮಹೇಶ್.
'ಅತಿರಥ' ಸಿನೆಮಾದಲ್ಲಿ ಚೇತನ್ ಮತ್ತು ಲತಾ ಹೆಗಡೆ ಮುಖ್ಯ ಪಾತ್ರಗಳಲ್ಲಿ ಕಾಣಿಸಿಕೊಳ್ಳಲಿದ್ದಾರೆ. 
ಈ ಸಿನೆಮಾ ಶೀಘ್ರದಲ್ಲೇ ಸೆನ್ಸಾರ್ ಮಂಡಳಿಯ ಮುಂದೆ ಹೋಗಲಿದೆ. ಪ್ರೇಮ್, ಡಾ. ವೇಣುಗೋಪಾಲ್ ಮತ್ತು ಗಂಡಸಿ ಮಂಜುನಾಥ್ ನಿರ್ಮಿಸಿರುವ ಈ ಚಿತ್ರಕ್ಕೆ ಸುರಾಗ್ ಸಂಗೀತ ನಿರ್ದೇಶಕನಾಗಿ ಪಾದಾರ್ಪಣೆ ಮಾಡುತ್ತಿದ್ದಾರೆ. ಜೈ ಆನಂದ್ ಅವರ ಸಿನೆಮ್ಯಾಟೋಗ್ರಫಿ ಚಿತ್ರಕ್ಕಿದೆ. 

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಇಬ್ಬರು ಕೇಂದ್ರ ಸಚಿವರು ಸೇರಿದಂತೆ 75 ಸದಸ್ಯರ GBA ಸೆ. 2 ರಿಂದ ಅಸ್ತಿತ್ವಕ್ಕೆ: ಯತೀಂದ್ರ ಸಿದ್ದರಾಮಯ್ಯಗೂ ಸ್ಥಾನ!

ಜಮ್ಮುವಿನಾದ್ಯಂತ ಭಾರಿ ಮಳೆ: ಅಪಾರ ಪ್ರಮಾಣದ ಹಾನಿ, 10 ಮಂದಿ ಸಾವು: ಕೊಚ್ಚಿ ಹೋದ ರಸ್ತೆ, ಸೇತುವೆಗಳು!

ಫೈಟರ್ ಜೆಟ್‌ ಇಂಜಿನ್ ಖರೀದಿ: ಅಮೆರಿಕಾದ GE ಸಂಸ್ಥೆಯೊಂದಿಗೆ $1 ಬಿಲಿಯನ್ ಮೊತ್ತದ ಒಪ್ಪಂದಕ್ಕೆ ಭಾರತ ಸಿದ್ಧತೆ!

ಡಿಕೆಶಿ ಕ್ಷಮೆ ಕೇಳಬಾರದಿತ್ತು; ಮುಲಾಜಿಲ್ಲದೆ ಕಾಂಗ್ರೆಸ್ ಪಕ್ಷದ ಸದಸ್ಯತ್ವಕ್ಕೆ ರಾಜೀನಾಮೆ ಬಿಸಾಕಬೇಕಿತ್ತು- ಆರ್. ಅಶೋಕ್

ಸುಂಕ ಸಮರ: Trump 4 ಬಾರಿ ಕರೆ ಮಾಡಿದರೂ ಉತ್ತರಿಸದ PM Modi; ಅಮೆರಿಕ ನಿಯೋಗಕ್ಕೂ No Entry!

SCROLL FOR NEXT