ದರ್ಶನ್ 
ಸಿನಿಮಾ ಸುದ್ದಿ

'ಕುರುಕ್ಷೇತ್ರ'ದಲ್ಲಿ ಶ್ರೀನಾಥ್ ಧೃತರಾಷ್ಟ್ರ, ಶ್ರೀನಿವಾಸ ಮೂರ್ತಿ ದ್ರೋಣಾಚಾರ್ಯ

ದರ್ಶನ್ ಅಭಿನಯದ ಮಹಾಭಾರತ - 'ಕುರುಕ್ಷೇತ್ರ'ಕ್ಕೆ ಇತ್ತೀಚಿನ ಸೇರ್ಪಡೆ ನಟ ಶ್ರೀನಾಥ್ ಮತ್ತು ಶ್ರೀನಿವಾಸ ಮೂರ್ತಿ. ನಾಗಣ್ಣ ನಿರ್ದೇಶನದ ಈ ಸಿನೆಮಾದಲ್ಲಿ ಶ್ರೀನಾಥ್ ಧೃತರಾಷ್ಟ್ರ ಮತ್ತು...

ಬೆಂಗಳೂರು: ದರ್ಶನ್ ಅಭಿನಯದ ಮಹಾಭಾರತ - 'ಕುರುಕ್ಷೇತ್ರ'ಕ್ಕೆ ಇತ್ತೀಚಿನ ಸೇರ್ಪಡೆ ನಟ ಶ್ರೀನಾಥ್ ಮತ್ತು ಶ್ರೀನಿವಾಸ ಮೂರ್ತಿ. ನಾಗಣ್ಣ ನಿರ್ದೇಶನದ ಈ ಸಿನೆಮಾದಲ್ಲಿ ಶ್ರೀನಾಥ್ ಧೃತರಾಷ್ಟ್ರ ಮತ್ತು ಶ್ರೀನಿವಾಸ ಮೂರ್ತಿ ದ್ರೋಣಾಚಾರ್ಯ ಪಾತ್ರಗಳನ್ನು ನಿರ್ವಹಿಸಲಿದ್ದಾರೆ. ಅಂದರೆ ದುರ್ಯೋಧನನಾಗಿ ನಟಿಸುತ್ತಿರುವ ದರ್ಶನ್ ಅವರ ತಂದೆಯ ಪಾತ್ರದಲ್ಲಿ ಶ್ರೀನಾಥ್ ನಟಿಸುತ್ತಿದ್ದು, ರವಿಚಂದ್ರನ್ ಕೃಷ್ಣನ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. 
ಕಲಾ ನಿರ್ದೇಶಕ ಕಿರಣ್ ಸಾರಥ್ಯದಲ್ಲಿ ಈಗ ರಾಮೋಜಿ ಸ್ಟುಡಿಯೋಸ್ ನಲ್ಲಿ ಅದ್ದೂರಿ ಸೆಟ್ ಹಾಕಲಾಗುತ್ತಿದೆ. ಹಾಗೆಯೇ ಅಂತಿಮ ತಾರಾಗಣದ ಆಯ್ಕೆಯನ್ನು ಸಂಪೂರ್ಣಗೊಳಿಸುವತ್ತ ನಿರ್ಮಾಪಕ-ನಿರ್ದೇಶಕ ಜೋಡಿ ಮುಂದುವರೆದಿದೆ. ರಾಣಾ ದಗ್ಗುಬಟ್ಟಿ ಅವರ ಹೆಸರು ಸ್ವಲ್ಪ ದಿನಗಳಿಂದ ಕೇಳಿ ಬರುತ್ತಿದ್ದರರೂ, ಈಗ ಬಾಲಿವುಡ್ ನಟ ವಿವೇಕ್ ಓಬಿರಾಯ್ ಅವರ ಹೆಸರು ಕೂಡ ಕೇಳಿ ಬರುತ್ತಿರುವುದು ವಿಶೇಷ. ಆದರೆ ಈ ನಟರಿಗೆ ಈ ಪುರಾಣ ಕಥೆಯ ಯಾವ ಪಾತ್ರ ಒಪ್ಪುತ್ತದೆ ಎಂಬುದು ನಿಶ್ಚಯವಾಗಿಲ್ಲ. 
ಈ ದೊಡ್ಡ ಬಜೆಟ್ ಚಿತ್ರವನ್ನು ಮುನಿರತ್ನ ನಿರ್ಮಿಸುತ್ತಿದ್ದು, ಜುಲೈ ೨೩ ಕ್ಕೆ ಚಾಲನೆ ಸಿಗಲಿದೆ. ಇದು ನಟ ದರ್ಶನ್ ಅವರ ೫೦ನೆಯ ಚಿತ್ರ. ಹಂಸಲೇಖ 'ಕುರುಕ್ಷೇತ್ರ'ಕ್ಕೆ ಸಂಗೀತ ನೀಡಲಿದ್ದಾರೆ. 

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಅಮೆರಿಕದ ಸುಂಕ: ಜವಳಿ ವಲಯದ ಒತ್ತಡ ಕಡಿಮೆ ಮಾಡಲು 40 ಪ್ರಮುಖ ಆಮದು ದೇಶ ಗುರುತು

ಭೀಕರ ಮಳೆಗೆ ಜಮ್ಮು-ಕಾಶ್ಮೀರ ತತ್ತರ: ಸಾವಿನ ಸಂಖ್ಯೆ 41ಕ್ಕೆ ಏರಿಕೆ; ಕೇಂದ್ರದಿಂದ ನೆರವಿನ ಭರವಸೆ; ಮುಂದುವರೆದ ರಕ್ಷಣಾ ಕಾರ್ಯಾಚರಣೆ

ಭಾರತದ ಮೇಲೆ ಅಮೆರಿಕಾ ಸುಂಕಾಸ್ತ್ರ: ದೇಶ ರಕ್ಷಿಸುವಲ್ಲಿ ಪ್ರಧಾನಿ ಮೋದಿ ವಿಫಲ; AICC ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ವಾಗ್ದಾಳಿ

ಜಮ್ಮು-ಕಾಶ್ಮೀರದ ಬಂಡಿಪೋರಾದಲ್ಲಿ ಗುಂಡಿನ ಚಕಮಕಿ: ಇಬ್ಬರು ಉಗ್ರರ ಹತ್ಯೆ

RSS Song Controversy: ಡಿಕೆಶಿ ಆರ್‌ಎಸ್‌ಎಸ್‌ ಗೀತೆ ಹಾಡಿದ್ದು ತಪ್ಪು, ಕ್ಷಮೆ ಕೇಳಿದ್ದರಿಂದ ಎಲ್ಲವೂ ಮುಗಿದಿದೆ; ಮಲ್ಲಿಕಾರ್ಜುನ ಖರ್ಗೆ

SCROLL FOR NEXT