ಭರ್ಜರಿ ಚಿತ್ರದ 50 ದಿನಗಳ ಸಂಭ್ರಮವನ್ನು ಆಚರಿಸುತ್ತಿರುವ ನಟ ಧ್ರುವ ಸರ್ಜಾ ಮತ್ತು ನಟಿ ರಚಿತಾ ರಾಮ್ 
ಸಿನಿಮಾ ಸುದ್ದಿ

ನನ್ನ ಬಗೆಗಿನ ಪ್ರತಿಯೊಂದು ಗಾಸಿಪ್ ನನ್ನ ಇನ್ನಷ್ಟು ಸಾಧನೆಗೆ ಶಕ್ತಿ ಕೊಡುತ್ತದೆ: ಧ್ರುವ ಸರ್ಜಾ

ಇಂದು ಸಿನಿಮಾ ಮಾಡುವುದು ಒಂದು ಉದ್ಯಮವಾಗಿ ಮಾರ್ಪಾಡಾಗಿರುವಾಗ ನಿರ್ದಿಷ್ಟ ಸಿನಿಮಾ ಥಿಯೇಟರ್ ನಲ್ಲಿ ಬಹಳ ದಿನದವರೆಗೆ ...

ಬೆಂಗಳೂರು: ಇಂದು ಸಿನಿಮಾ ಮಾಡುವುದು ಒಂದು ಉದ್ಯಮವಾಗಿ ಮಾರ್ಪಾಡಾಗಿರುವಾಗ ನಿರ್ದಿಷ್ಟ ಸಿನಿಮಾ ಥಿಯೇಟರ್ ನಲ್ಲಿ ಬಹಳ ದಿನದವರೆಗೆ ಪ್ರದರ್ಶನಗೊಂಡರೆ ಅದಕ್ಕೆ ಸಂಭ್ರಮಾಚರಣೆ ಮಾಡಲಾಗುತ್ತದೆ. ಇತ್ತೀಚೆಗೆ ತೆರೆ ಕಂಡು ಯಶಸ್ವಿಯಾದ ಚಿತ್ರಗಳಲ್ಲೊಂದು ಧ್ರುವ ಸರ್ಜಾ ಅಭಿನಯದ ಚೇತನ್ ಕುಮಾರ್ ನಿರ್ದೇಶನದ ಚಿತ್ರ ಭರ್ಜರಿ. ರಾಜ್ಯದ 71 ಕೇಂದ್ರಗಳಲ್ಲಿ 50 ದಿನಗಳ ಪ್ರದರ್ಶನ ಕಂಡು ಮಲ್ಟಿಪ್ಲೆಕ್ಸ್ ಗಳಲ್ಲಿ 3,000 ಕ್ಕೂ ಅಧಿಕ ಶೋಗಳನ್ನು ಪೂರೈಸಿದೆ.
ಧ್ರುವ ಸರ್ಜಾ ಸೇರಿದಂತೆ ಚಿತ್ರತಂಡ ನಿನ್ನೆ ಥಿಯೇಟರ್ ಗಳಿಗೆ ಭೇಟಿ ನೀಡಿ ಸಂಭ್ರಮಾಚರಣೆ ಸಂದರ್ಭದಲ್ಲಿ ರಕ್ತದಾನ ಶಿಬಿರ ಏರ್ಪಡಿಸಿತ್ತು. ಈ ಸಂದರ್ಭದಲ್ಲಿ ಸಿಟಿ ಎಕ್ಸ್ ಪ್ರೆಸ್ ಜೊತೆ ಮಾತನಾಡಿದ ನಟ ಧ್ರುವ ಸರ್ಜಾ, ಭರ್ಜರಿ ಸಿನಿಮಾ ಇನ್ನೂ 50 ದಿನಗಳ ಪ್ರದರ್ಶನ ಕಂಡು ಶತದಿನೋತ್ಸವ ಆಚರಿಸುತ್ತದೆ ಎಂದು ನಾನು ಭಾವಿಸುತ್ತೇನೆ ಎಂದು ಹೇಳಿದ್ದಾರೆ.
ಈ ಮಧ್ಯೆ ಧ್ರುವ ಸರ್ಜಾ ಅವರು ನಾಯಕನಾಗಬೇಕಿದ್ದ ಪೊಗರು ಚಿತ್ರ ಶೂಟಿಂಗ್ ಆರಂಭಕ್ಕೆ ವಿಳಂಬವಾಗುತ್ತಿದೆ ಮತ್ತು ಅದರ ಕಥೆಯನ್ನು ಧ್ರುವ ಅವರು ಇಷ್ಟಪಟ್ಟಿಲ್ಲ ಎಂಬ ಸುದ್ದಿ ಕೇಳಿಬರುತ್ತಿದೆ. ಇದಕ್ಕೆ ಉತ್ತರಿಸಿದ ನಟ ಧ್ರುವ ಸರ್ಜಾ, ನನ್ನ ಬಗೆಗಿನ ಪ್ರತಿಯೊಂದು ಗಾಸಿಪ್ ನನ್ನ ಇನ್ನಷ್ಟು ಸಾಧನೆಗೆ ಶಕ್ತಿ ಕೊಡುತ್ತದೆ. ನಿಮ್ಮ ಮುಂದಿನ ಪ್ರಾಜೆಕ್ಟ್ ಯಾವುದು ಎಂದು ನನ್ನಲ್ಲಿ ನೀವು ಕೇಳಿದರೆ ಪೊಗರು ಎಂದು ಹೇಳುತ್ತೇನೆ. ಪ್ರಾಜೆಕ್ಟ್ ವಿಳಂಬವಾಗುತ್ತಿರುವುದು ನಿಜ. ಅದಕ್ಕೆ ಕಾರಣಗಳು ಬೇರೆ ಇದೆ ಎಂದು ಹೇಳಿದರು.
ಚಿತ್ರದ ನಿರ್ಮಾಣ ತಂಡದ ಜೊತೆ ನಾನು ನಿರಂತರ ಸಂಪರ್ಕದಲ್ಲಿದ್ದೇನೆ. ಪ್ರೇಕ್ಷಕರು ಯಾವುದೇ ಪ್ರಶ್ನೆ ಕೇಳಲಿ ಅದನ್ನು ನಾನು ಚಿತ್ರ ನಿರ್ಮಾಪಕರ ಮುಂದಿಡುತ್ತೇನೆ. ಯಾವ ಕೆಲಸ ಮಾಡುವುದಾದರೂ ನಾವು ಶೇಕಡಾ 100ರಷ್ಟು ಶ್ರಮ ಹಾಕಿದರೆ ಮುಂದೆ ಅಸಮಂಜಸ ಪ್ರಶ್ನೆಗಳನ್ನು ಎದುರಿಸಬೇಕಾಗುವುದಿಲ್ಲ. ಚಿತ್ರ ವಿಳಂಬವಾಗುತ್ತಿರುವುದಕ್ಕೆ ಕೇಳಿಬರುತ್ತಿರುವ ಗಾಳಿಸುದ್ದಿಗಳು ನಿಜವಲ್ಲ. ಚಿತ್ರದ ಪಾತ್ರಕ್ಕಾಗಿ ನಾನು ತಯಾರಿ ನಡೆಸುತ್ತಿದ್ದು ಚಿತ್ರದ ಬಗ್ಗೆ ಹೆಚ್ಚು ಮಾತನಾಡಲು ಇಷ್ಟಪಡುವುದಿಲ್ಲ ಎಂದರು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಭಾರತದ ಮೇಲೆ ಶೇ.50 ರಷ್ಟು ಸುಂಕಾಸ್ತ್ರ ಜಾರಿ: ಕೊನೆಗೆ ಒಟ್ಟಿಗೆ ಸೇರ್ತಿವಿ! US ಖಜಾನೆ ಮುಖ್ಯಸ್ಥ ಹಿಂಗ್ಯಾಕಂದ್ರು?

ಸಶಸ್ತ್ರ ಪಡೆಗಳು ಮುಂದಿನ ಭದ್ರತಾ ಸವಾಲುಗಳಿಗೆ ಸಿದ್ಧರಾಗಿರಬೇಕು: ರಾಜನಾಥ್ ಸಿಂಗ್

ಹಿಂದೂ ನಂಬಿಕೆ ಒಡೆಯುತ್ತಿರುವ ಬಾನು ಮುಷ್ತಾಕ್: ಶಿವನ ಬೆಟ್ಟವನ್ನೇ 'ಯೇಸು ಬೆಟ್ಟ' ಮಾಡಲು ಹೊರಟವರಿಂದ ಧರ್ಮದ ಪಾಠ ಬೇಡ- ಪ್ರತಾಪ್ ಸಿಂಹ

2030 Commonwealth Games: ಭಾರತದ ಬಿಡ್‌ಗೆ ಕೇಂದ್ರ ಸಂಪುಟ ಅನುಮೋದನೆ! ಅಹಮದಾಬಾದ್ ನಲ್ಲಿ ಆಯೋಜಿಸುವ ಪ್ರಸ್ತಾಪ!

'ಡೆವಿಲ್‌' ಸಿನಿಮಾದ '‘ಇದ್ರೆ ನೆಮ್ಮದಿಯಾಗ್ ಇರ್ಬೇಕ್' ಹಾಡಿಗೆ ಭರ್ಜರಿ ಸ್ಟೆಪ್ ಹಾಕಿದ ವಿನೋದ್ ರಾಜ್! Video

SCROLL FOR NEXT