ಶಾನ್ವಿ ಶ್ರೀವಾಸ್ತವ 
ಸಿನಿಮಾ ಸುದ್ದಿ

ಮೀರಾ ಛಾಯೆಯಿಂದ ಇನ್ನೂ ಹೊರಬರದ ಶಾನ್ವಿ; 'ಮುಫ್ತಿ' ಮೇಲೆ ಅಪಾರ ನಿರೀಕ್ಷೆ

ದರ್ಶನ್ ಅಭಿನಯದ 'ತಾರಕ್' ಚಿತ್ರ ಯಶಸ್ವಿಯಾಗಿದೆ. ಆದರೂ ಅದರ ನಾಯಕಿ ಶಾನ್ವಿ ಶ್ರೀವಾಸ್ತವ ಅವರು ಮಾತ್ರ ಇನ್ನೂ ಮೀರಾ ಪಾತ್ರಝ್ಯಾಂಗೋವರ್ ನಿಂದ ಹೊರಬಂದಿಲ್ಲ.

ಬೆಂಗಳೂರು: ದರ್ಶನ್ ಅಭಿನಯದ 'ತಾರಕ್' ಚಿತ್ರ ಯಶಸ್ವಿಯಾಗಿದೆ. ಆದರೂ ಅದರ ನಾಯಕಿ ಶಾನ್ವಿ ಶ್ರೀವಾಸ್ತವ ಅವರು ಮಾತ್ರ ಇನ್ನೂ ಮೀರಾ  ಪಾತ್ರಝ್ಯಾಂಗೋವರ್ ನಿಂದ ಹೊರಬಂದಿಲ್ಲ.
'ತಾರಕ್ ಚಿತ್ರದಲ್ಲಿ ಓರ್ವ ಅನಿವಾಸಿ ಭಾರತೀಯ ಪಾತ್ರ ನಿರ್ವಹಿಸಿದ್ದ ಶಾನ್ವಿ  "ಪ್ರಾಮಾಣಿಕವಾಗಿ ಹೇಳಬೇಕೆಂದರೆ ನನ್ನ ಉಡುಪು, ನನ್ನ ಚಿಂತನೆಗಳಲ್ಲಿ ನಾನಿಂದಿಗೂ ಮೀರಾ ಪಾತ್ರವನ್ನೇ ಅನುಸರಿಸುತ್ತಿದ್ದೇನೆ. ಆ ಪಾತ್ರ ನನ್ನ ಮೇಲೆ ಗಾಢವಾಗಿ ಪ್ರಭಾವ ಬೀರಿದೆ.ಆ ಚಿತ್ರ ಗಲ್ಲ್ಪೆಟ್ಟಿಗೆಯಲ್ಲಿ ಎಷ್ಟು ಯಶಸ್ವಿಯಾಗಿದೆ ನನಗೆ ತಿಳಿದಿಲ್ಲ. ಆದರೆ ನನಗೆ ಆಪಾತ್ರದ ಛಾಯೆಯಿಂದ ಹೊರಬರಲು ಆಗುತ್ತಿಲ್ಲ. ನನಗೆ ಅಂತಹಾ ಇನ್ನೊಂದು ಗಟ್ಟಿ ಪಾತ್ರ ಸಿಗುವವರೆಗೂ ಈ ಸ್ಥಿತಿ ಮುಂದುವರಿಯಲಿದೆ.ಇದೀಗ ನನ್ನ ಕುಟುಂಬದವರೂ ಈ ಕುರಿತಂತೆ ನನ್ನನ್ನು ಪ್ರಶ್ನಿಸತೊಡಗಿದ್ದಾರೆ"
ಅವರ ಮುಂದಿನ ಚಿತ್ರ 'ಮುಫ್ತಿ' ಬಗೆಗೆ ಮಾತನಾಡಿದ ಶಾನ್ವಿ "ನಾನು ಈ ಚಿತ್ರಕ್ಕೆ ಒಪ್ಪಿಗೆ ಸೂಚಿಸಿದ ಮೊದಲ ಕಾರಣ, ಜಯಣ್ಣ ಇದರ ನಿರ್ಮಾಪಕರಾಗಿರುವುದು. ಇವರ ಬಗೆಗೆ ನನಗೆ ಅಪಾರ ಗೌರವವಿದೆ. ನಾನು ಕಥೆಯನ್ನೂ ಕೇಳದೆ ಪಾತ್ರಕ್ಕೆ ಒಪ್ಪಿಗೆ ಸೂಚಿಸಿದ್ದೆ. ಈ ಚಿತ್ರದಲ್ಲಿ ಶ್ರೀಮುರಳಿ ಪ್ರಮುಖ ಪಾತ್ರಧಾರಿಯಾಗಿದ್ದು ೈನ್ನೂ ಹಲವಾರು ಪ್ರಮುಖ ನಟರು ಅಭಿನಯಿಸುತ್ತಿದ್ದಾರೆ."
ಚಿತ್ರದಲ್ಲಿ ನಾಯಕನಿಗೆ ಪ್ರೀತಿಯ ಕುರಿತು ಆಸಕ್ತಿ ಮೂಡುವಂತೆ ಮಾಡುವ ನಟಿ, ಚಿತ್ರದ ಕಥೆ ಲಘುವಾಗಿ ಕಂದರೂ . ಶಾನ್ವಿ ಅವರ ಪಾತ್ರ ಚಿತ್ರಣ ಅದ್ಭುತವಾಗಿದೆ. ಆದರೆ ಈ ಚಿತ್ರದಲ್ಲಿ ಅವರು ಯಾವ ಹಾಡಿನಲ್ಲಿಯೂ ಕಾಣಿಸಿಕೊಳ್ಳುವುದಿಲ್ಲ ಎನ್ನುವುದು ಅಚ್ಚರಿಯ ಸತ್ಯ."ಚಿತ್ರವು ಬೇಡದೇ ಹೋದಾಗ ಹಾಡೊಂದನ್ನು ಒತ್ತಾಯ ಪೂರ್ವಕ ತುರುಕಿಸುವುಉದು ತಪ್ಪಾಗುತ್ತದೆ ಎಂದು ನಾನು ಅವರಿಗೆ ತಿಳಿಸಿದೆ. ವಾಸ್ತವವಾಗಿ, ಒಂದು ಮಾಸ್ ಚಿತ್ರಕ್ಕೆ ಹೆಚ್ಚಿನ ಹಾಡುಗಳು ಬೇಕಾಗಿದೆಯೆ ಎನ್ನುವ ವಿಚಾರದಲ್ಲಿ ನಿರ್ಮಾಪಕರು ಸಾರ್ವಜನಿಕ ಅಭಿಪ್ರಾಯ ಸಂಗ್ರಹಿಸಿದರು. ಅದರ ಕೊನೆಯಲ್ಲಿ,ಯಾವುದೇ ಡ್ಯುಯಟ್ ಸಾಂಗ್ ಗಳ ಅವಶ್ಯಕತೆ ಇಲ್ಲ ಎನ್ನುವ ನಿರ್ಧಾರಕ್ಕೆ ಅವರು ಬಂದರು" ಶಾನ್ವಿ ವಿವರಿಸಿದರು.
"'ಮುಫ್ತಿ' ಚಿತ್ರದಲ್ಲಿನ ವಿಚಾರಗಳಿಗಾಗಿಯೇ ಪ್ರೇಕ್ಷಕರು ಆ ಚಿತ್ರವನ್ನು ನೋಡಬೇಕು. ಶ್ರೀಮುರಳಿ ಹಾಗೂ ಶಿವರಾಜ್ ಕುಮಾರ್ ಅಭಿನಯ ಜತೆಗೆ ನನ್ನ ಪಾತ್ರದ ಬಗ್ಗೆ ಬಂದರೆ ನನ್ನ ಕೆಲ  ಅಭಿವ್ಯಕ್ತಿಗಳು, ತುಸು ಹಾಸ್ಯವನ್ನೂ ಸಹ ಸವಿಯಬಹುದು. ಇಂತಹ ಕಥೆಯಲ್ಲಿ ನಾನೂ ಪಾತ್ರವಾಗಿರುವುದು ನನಗೆ ಸಂತಸ ತಂದಿದೆ. ನಾಯಕನ ಹಿಂದೆ ಮರ ಸುತ್ತುವ ಕೆಲಸಕ್ಕೆ ಮಾತ್ರ ಸೀಮಿತವಾಗಲು ನಾನು ಬಯಸಲಾರೆ" ಶಾನ್ವಿ ಹೇಳಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಅಮೆರಿಕ ನಿಯೋಜಿತ ರಾಯಭಾರಿ ಸೆರ್ಗಿಯೊ ಗೋರ್- ಮೋದಿ, ಜೈಶಂಕರ್ ಭೇಟಿ; Tariff ಒತ್ತಡದ ನಡುವೆ ಭಾರತ-ಅಮೆರಿಕ ಸಂಬಂಧ ಸುಧಾರಣೆಯ ಸೂಚನೆ?

ಅಫ್ಘಾನಿಸ್ತಾನ ನಮ್ಮೊಂದಿಗೆ ಗಡಿ ಹಂಚಿಕೊಂಡಿರುವ ನೆರೆ ರಾಷ್ಟ್ರ- S Jaishankar; ಭಾರತದೊಂದಿಗೆ POK ವಿಲೀನದ ಸುಳಿವು; ಚೀನಾಗೂ ಶಾಕ್!

ಅಬ್ಬಬ್ಬಾ ರೋಮಾಂಚನ: ಅದ್ಭುತ ಸೃಷ್ಟಿಸಿದ ರಿಷಬ್ ಶೆಟ್ಟಿಗೆ ರಾಷ್ಟ್ರಪ್ರಶಸ್ತಿ ಕೊಡಲೇಬೇಕು - ತಮಿಳು ನಿರ್ದೇಶಕ ಅಟ್ಲೀ

Pakistan: ಇಸ್ರೇಲ್ ವಿರೋಧಿ ಪ್ರತಿಭಟನಾ ಜಾಥಾ, ಪೋಲೀಸರ ಗುಂಡೇಟಿಗೆ 11 ಮಂದಿ ಬಲಿ! Video

ಉತ್ತರ ಪ್ರದೇಶಕ್ಕೆ ಭೇಟಿ ನೀಡಿದ ತಾಲಿಬಾನ್ ಸಚಿವನಿಗೆ ಅದ್ಧೂರಿ ಸ್ವಾಗತ, ಸರ್ಕಾರದ ಭದ್ರತೆ; ಯೋಗಿಗೆ ನಾಚಿಕೆಯಾಗಬೇಕು- SP ಸಂಸದ ಶಫೀಕರ್

SCROLL FOR NEXT