ಉಪೇಂದ್ರ 
ಸಿನಿಮಾ ಸುದ್ದಿ

ರಾಜಕೀಯ ಎಂಟ್ರಿಗೂ ಮುನ್ನ ಇದು ಉಪೇಂದ್ರ ಅವರ ಕೊನೆಯ ಸಿನಿಮಾ!

ರಾಜಕೀಯ ಜೀವನ ಆರಂಭಿಸಲು ತಯಾರಾಗಿರುವ ನಟ ಉಪೇಂದ್ರ ಎಲ್ಲಾ ಸಿದ್ಧತೆಗಳಲ್ಲೂ ತೊಡಗಿದ್ದಾರೆ. ಇದರ ನಡುವೆ ಅಭಿಮಾನಿಗಳು ತೆರೆಯ ಮೇಲೆ...

ಬೆಂಗಳೂರು: ರಾಜಕೀಯ ಜೀವನ ಆರಂಭಿಸಲು ತಯಾರಾಗಿರುವ ನಟ ಉಪೇಂದ್ರ ಎಲ್ಲಾ ಸಿದ್ಧತೆಗಳಲ್ಲೂ ತೊಡಗಿದ್ದಾರೆ. ಇದರ ನಡುವೆ ಅಭಿಮಾನಿಗಳು ತೆರೆಯ ಮೇಲೆ ಉಪೇಂದ್ರ ಅವರನ್ನು ಕಣ್ತುಂಬಿಕೊಳ್ಳಲು ಕಾಯುತ್ತಿದ್ದಾರೆ. ಅಭಿಮಾನಿಗಳಿಗಾಗಿ  ಉಪೇಂದ್ರ ರಾಜಕೀಯ ಎಂಟ್ರಿಗೂ ಮುನ್ನ ಉಪ್ಪಿ-ರುಪ್ಪಿ ಸಿನಿಮಾದಲ್ಲಿ ನಟಿಸಲಿದ್ದಾರೆ.
ಸದ್ಯ ಶ್ರೀ ಹರಿ ನಿರ್ದೇಶನದ ಹೋಂ ಮಿನಿಸ್ಟರ್ ಸಿನಿಮಾ ಶೂಟಿಂಗ್ ನಲ್ಲಿ ಉಪೇಂದ್ರ ಬ್ಯುಸಿಯಾಗಿದ್ದಾರೆ, ಇದರ ಜೊತೆಗೆ  ಕೆ. ಮಾದೇಶ ನಿರ್ದೇಶನದ ಉಪ್ಪಿ-ರುಪ್ಪಿ ಸಿನಿಮಾಗಾಗಿ ಅಕ್ಟೋಬರ್ 8 ರಿಂದ ಡೇಟ್ಸ್ ನೀಡಿದ್ದು, 7 ದಿನಗಳು ಥಾಯ್ಲೆಂಡ್ ನಲ್ಲಿ ಶೂಟಿಂಗ್ ನಡೆಸಲಿದ್ದಾರೆ.
ಈಗಾಗಲೇ 15 ದಿನಗಳ ಕಾಲ ಶೂಟಿಂಗ್ ನಡೆಸಿದ್ದು, ಉಳಿದ ಕೆಲ ಭಾಗದ ಶೂಟಿಂಗ್ ಥಾಯ್ಲೆಂಡ್ ನಲ್ಲಿ ಮಾಡಲಾಗುವುದು ಎಂದು ನಿರ್ದೇಶಕ ಕೆ.ಮಾದೇಶ್ ಹೇಳಿದ್ದಾರೆ.
ನಮಗೆ ಸಮಯಾವಕಾಶ ಕಡಿಮೆಯಿದ್ದು, ನವೆಂಬರ್ ಒಳಗೆ ಸಿನಿಮಾ ಶೂಟಿಂಗ್ ಮುಗಿಸಬೇಕಿದೆ. ರಾಜಕೀಯ ಎಂಟ್ರಿಗೂ ಮುನ್ನ ಉಪ್ಪಿ-ರುಪ್ಪಿ ಸಿನಿಮಾದಲ್ಲಿ ಉಪೇಂದ್ರ ಅಭಿನಯಿಸುತ್ತಿದ್ದು, ಮೋದಿ ಅವರ ನೋಟು ಅಮಾನ್ಯೀಕರಣದಿಂದಾಗಿ ದೇಶದ ಮೇಲೆ ಉಂಟಾದ ಪರಿಣಾಮಗಳ ಕುರಿತಾದ ಸಿನಿಮಾವಾಗಿದೆ. ಈ ಚಿತ್ರದಲ್ಲಿ ಉಪೇಂದ್ರ ಅವರ ಪಾತ್ರ ಆಸಕ್ತಿದಾಯಕವಾಗಿದೆ. ಸಾಮಾನ್ಯ ವ್ಯಕ್ತಿಯೊಬ್ಬ ನಾಯಕನಾಗುವ ಚಿತ್ರಕತೆಯಾಗಿದೆ. ಅವರ ಪಾತ್ರ ಭ್ರಷ್ಟ ರಾಜಕಾರಣಿಗಳ ಮುಖಕ್ಕೆ ಹಿಡಿದ ಕನ್ನಡಿಯಾಗಿದೆ. ಕೇವಲ ಉಪೇಂದ್ರ ಅವರೊಬ್ಬರಿಂದ ಮಾತ್ರ ಈ ರಾಜಕೀಯ ಡ್ರಾಮಾ ಮಾಡಲು ಸಾಧ್ಯ ಎಂದು ಅಭಿಪ್ರಾ ಪಟ್ಟಿದ್ದಾರೆ.
ಎಂ,ಎಸ್ ರಮೇಶ್ ಜೊತೆ ಉಪೇಂದ್ರ ಕೂಡ ಕೆಲ ಸನ್ನಿವೇಶಗಳ ಚಿತ್ರಕಥೆ ಬರೆದಿದ್ದಾರೆ ಎಂದು ಅವರು ಹೇಳಿದ್ದಾರೆ. ಉಪ್ಪಿ-ರುಪ್ಪಿ ಸಿನಿಮಾವನ್ನು ವಿಜಯಲಕ್ಷ್ಮಿ ಅರಸ್ ನಿರ್ಮಿಸುತ್ತಿದ್ದಾರೆ, ರಚಿತಾ ರಾಮ್ ನಾಯಕಿಯಾಗಿ ನಟಿಸುತ್ತಿದ್ದಾರೆ, ಸಿನಿಮಾಗೆ ಸಾಧು ಕೋಕಿಲಾ ಸಂಗೀತ ನೀಡಿದ್ದಾರೆ. 

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

'ಪಾಕಿಸ್ತಾನದೊಂದಿಗೆ ಯುದ್ಧ ನಿಲ್ಲಿಸಲು ಟ್ರಂಪ್ 24 ಗಂಟೆ ಕಾಲಾವಕಾಶ ನೀಡಿದ್ದರು, ಮೋದಿ ಕೇವಲ 5 ಗಂಟೆಗಳಲ್ಲಿ ಪಾಲಿಸಿದರು': ರಾಹುಲ್ ಗಾಂಧಿ

'ಧಮ್ ಇದ್ರೆ.. ಸನಾತನಧರ್ಮ, ಬಿಹಾರಿಗಳ ಕುರಿತ ಹೇಳಿಕೆ ಮತ್ತೆ ಹೇಳ್ತೀರಾ?': MK Stalin ಗೆ ಬಿಜೆಪಿ-ಜೆಡಿಯು ಸವಾಲು!

Video: 80 ಸಾವಿರ ಹಣವಿದ್ದ ಬ್ಯಾಗ್ ನಾಪತ್ತೆ, ಮೇಲಿಂದ ಕೋತಿಯಿಂದ ಹಣದ ಸುರಿಮಳೆ! ಸಿಕ್ಕಿದೆಷ್ಟು ಗೊತ್ತಾ?

Dharmasthala: Mahesh Shetty Thimarodi ಮನೆ ಮಹಜರು, ಪತ್ನಿ-ಮಕ್ಕಳ ಮೊಬೈಲ್ ವಶಕ್ಕೆ, 3 ತಲ್ವಾರ್ ಕೂಡ ಪತ್ತೆ!

ಕಟ್ಟಡ ಕುಸಿತಕ್ಕೂ ಕೆಲವೇ ಕ್ಷಣಗಳ ಮುನ್ನ 22 CRPF ಸೈನಿಕರ ರಕ್ಷಣೆ; Indian Army ಹೆಲಿಕಾಪ್ಟರ್ ರೋಚಕ ಕಾರ್ಯಾಚರಣೆ! Video

SCROLL FOR NEXT