ಗೋವಾ: ಟಾಲಿವುಡ್ನ ಸೂಪರ್ ಸ್ಟಾರ್ ನಾಗರ್ಜುನ್ ಅವರ ಪುತ್ರ ನಾಗ ಚೈತನ್ಯ ಹಾಗೂ ಸಮಂತಾ ರುಥ್ ಪ್ರಭು ಹಿಂದೂ ಸಂಪ್ರದಾಯದಂತೆ ಸಪ್ತಪದಿ ತುಳಿದು ಸತಿಪತಿಗಳಾಗಿದ್ದಾರೆ.
ಕಳೆದ ಎರಡು ವರ್ಷಗಳಿಂದ ಪರಸ್ಪರ ಪ್ರೀತಿಸುತ್ತಿದ್ದ ಈ ಜೋಡಿ
ಕೆಲವೇ ಗಣ್ಯರ ಸಮ್ಮುಖದಲ್ಲಿ ಇಂದು ಹಿಂದೂ ಸಂಪ್ರದಾಯದಂತೆ ಸರಳವಾಗಿ ಈ ಜೋಡಿ ಹೊಸ ಜೀವನಕ್ಕೆ ಕಾಲಿಟ್ಟಿದ್ದಾರೆ.
ನಾಳೆ ಗೋವಾದಲ್ಲಿ ಕ್ರಿಶ್ಚಿಯನ್ ಸಂಪ್ರದಾಯದಂತೆ ಇಬ್ಬರು ಮತ್ತೆ ಮದುವೆಯಾಗಲಿದ್ದಾರೆ. ನಂತರ ಅ ೯ರಂದು ಚೆನ್ನೈನಲ್ಲಿ ಅದ್ಧೂರಿ ಆರತಕ್ಷತೆ ಏರ್ಪಡಿಸಲಾಗಿದೆ.
ಮದುವೆಗೆ ಆಗಮಿಸುವ ಸಂಬಂಧಿಕರ ಪಟ್ಟಿಯಲ್ಲಿ ಕೇವಲ ೧೦೦ ಜನರ ಹೆಸರು ಮಾತ್ರವಿದೆ. ಕುಟುಂಬಸ್ಥರು, ಹತ್ತಿರದ ಸಂಬಂಧಿಕರು ಹಾಗೂ ಕೆಲವೇ ಕೆಲವು ಸ್ನೇಹಿತರು ಮದುವೆಗೆ ಬರಲಿದ್ದಾರೆ.
ಶನಿವಾರ ಕ್ರಿಶ್ಚಿಯನ್ ಸಂಪ್ರದಾಯದ ಮದುವೆಗಾಗಿ ವಿಶೇಷ ಡಿಸೈನ್ ಡ್ರೆಸ್ ಸಿದ್ಧಪಡಿಸಲಾಗಿದೆ. ವಿವಾಹದ ಫೋಟೋಗಳನ್ನು ನಾಗರ್ಜುನ ತಮ್ಮ ಟ್ವಿಟ್ಟರ್ ನಲ್ಲಿ ಶೇರ್ ಮಾಡಿದ್ದಾರೆ.