ದರ್ಶನ್ 
ಸಿನಿಮಾ ಸುದ್ದಿ

ಪವನ್ ಒಡೆಯರ್- ದರ್ಶನ್ ಕಾಂಬಿನೇಷನ್ ಸಿನಿಮಾ ರದ್ದು!

ಚಾಲೆಂಜಿಂಗ್ ಸ್ಟಾರ್ ದರ್ಶನ್ ತಮ್ಮ 50 ನೇ ಸಿನಿಮಾವಾದ ಕುರುಕ್ಷೇತ್ರದ ಶೂಟಿಂಗ್ ನಲ್ಲಿ ಬ್ಯುಸಿಯಾಗಿದ್ದಾರೆ. ಇದೇ ವೇಳೆ ದರ್ಶನ್ ಅವರ 51ನೇ ಹಾಗೂ 52ನೇ ...

ಬೆಂಗಳೂರು: ಚಾಲೆಂಜಿಂಗ್ ಸ್ಟಾರ್ ದರ್ಶನ್ ತಮ್ಮ 50 ನೇ ಸಿನಿಮಾವಾದ ಕುರುಕ್ಷೇತ್ರದ ಶೂಟಿಂಗ್ ನಲ್ಲಿ ಬ್ಯುಸಿಯಾಗಿದ್ದಾರೆ. ಇದೇ ವೇಳೆ ದರ್ಶನ್ ಅವರ 51ನೇ ಹಾಗೂ 52ನೇ ಸಿನಿಮಾ ಯಾವುವು ಎಂಬ ಬಗ್ಗೆ ಹಲವು ಮಾತುಗಳು ಕೇಳಿ ಬರುತ್ತಿವೆ.
ಶೈಲಜಾ ನಾಗ್ ಮತ್ತು ಸುರೇಶ್ ನಿರ್ಮಾಣದ ಪೊನ್ ಕುಮಾರ್ ನಿರ್ದೇಶನದ ಸಿನಿಮಾದಲ್ಲಿ ನಟಿಸುವುದು ಬಹುತೇಕ ಖಚಿತವಾಗಿದೆ.  ಇದರ ಜೊತೆಗೆ  ಪವನ್ ಒಡೆಯರ್ ನಿರ್ದೇಶನದ ಸಂದೇಶ್ ಎನ್ ನಿರ್ಮಾಣದ ಒಡೆಯರ್ ಎಂಬ ಸಿನಿಮಾದಲ್ಲಿ  ಬಾಕ್ಸರ್ ಪಾತ್ರದಲ್ಲಿ ದರ್ಶನ್ ನಟಿಸಲಿದ್ದಾರೆ ಎಂಬ ಮಾತುಗಳು ಕೇಳಿ ಬಂದಿದ್ದವು, ಸದ್ಯಕ್ಕೆ ತಿಳಿದು ಬಂದಿರುವ ಮಾಹಿತಿಗಳ ಪ್ರಕಾರ ದರ್ಶನ್ ಪೊನ್ ಕುಮಾರ್ ಜತೆಗಿನ ಸಿನಿಮಾ ಮುಂದುವರಿಯಲಿದೆ, ಆದರೆ, ಪವನ್ ಒಡೆಯರ್ ಸಿನಿಮಾ ರದ್ದಾಗಿದೆ ಎಂದು ಕೇಳಿಬರುತ್ತಿದೆ.
ಇದರ ಬದಲಾಗಿ ತಮಿಳು ಹಿಟ್ ಸಿನಿಮಾವೊಂದರ ರಿಮೇಕ್  ನಲ್ಲಿ ದರ್ಶನ ನಟಿಸಲಿದ್ದಾರೆ,. ವೀರಂ ಸಿನಿಮಾದ ಅಜಿತ್ ಪಾತ್ರವನ್ನು ದರ್ಶನ್ ನಿರ್ವಹಿಸಲಿದ್ದಾರೆ, ಎಂ,ಡಿ ಶ್ರೀಧರ್ ನಿರ್ದೇಶನ ಮಾಡಲಿದ್ದಾರೆ, ಪೊಕಿರಿ ಮತ್ತು ಬುಲ್ ಬುಲ್ ನಂತರ ದರ್ಶನ್ ಜೊತೆ ಕೆಲಸ ಮಾಡಲು ಯೋಜಿಸಲಾಗಿತ್ತು, ಸದ್ಯ ರಿಮೇಕ್ ಸಿನಿಮಾವೊಂದನ್ನು ಮಾಡಲು ಹೊರಟಿದ್ದಾರೆ, ಕೆಲವು ದಿನಗಳ ನಂತರ ಈ ಸಿನಿಮಾ ಯೋಜನೆ ಬಗ್ಗೆ ಫೈನಲ್ ಮಾಡಲಾಗುವುದು ಎಂದು ಹೇಳಿದ್ದಾರೆ.
ಇದಕ್ಕಾಗಿ ನಾನು ಸಿದ್ಧತೆ ನಡೆಸಿದ್ದು, ದರ್ಶನ್ ಅವರ ಕುರುಕ್ಷೇತ್ರದ ನಂತರ ಮುಂದಿನ ಪ್ಲಾನ್ ಮಾಡಲಾಗುವುದು ಎಂದು ಹೇಳಿದ್ದಾರೆ. ಮತ್ತೊಂದು ಆಸಕ್ತಿದಾಯಕ ವಿಚಾರವೆಂದರೇ ದರ್ಶನ್ ಒಂದೇ ಸಮಯದಲ್ಲಿ ಎರಡು ಪ್ರಾಜೆಕ್ಟ್ ನಲ್ಲಿ ಕೆಲಸ ಮಾಡಲು ದರ್ಶನ್ ನಿರ್ಧರಿಸಿದ್ದಾರೆ, ಪ್ರತಿ ಸಿನಿಮಾಗೆ 30 ದಿನಗಳ ಸಮಯವನ್ನು ಮೀಸಲಿರಿಸಲಿದ್ದಾರೆ. ಹೈದರಾಬಾದ್ ಗೆ ತೆರಳು ಮುನ್ನವೇ ನಿರ್ಮಾಪಕರ ಜೊತೆ ಚರ್ಚೆ ನಡೆದಿದೆ. ಕುರುಕ್ಷೇತ್ರ ಶೂಟಿಂಗ್  ನಂತರ ಮುಂದಿನ ಸಿನಿಮಾ ತಯಾರಿ ನಡೆಯಲಿದೆ. 

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ರಾಜ್ಯದ ಮುಂದಿನ ಮುಖ್ಯಮಂತ್ರಿಯಾಗಿ ಡಿಕೆ ಶಿವಕುಮಾರ್ ಹೆಸರು ಬಹುತೇಕ ಫೈನಲ್? ಕಾಂಗ್ರೆಸ್‌ನಲ್ಲಿ ಗರಿಗೆದರಿದ ರಾಜಕೀಯ ಚಟುವಟಿಕೆ..!

ದೆಹಲಿ ಸಭೆ ಬಳಿಕ ಬೆಂಗಳೂರಿನಲ್ಲಿ ಶಕ್ತಿ ಪ್ರದರ್ಶನಕ್ಕೆ ಸಿದ್ದರಾಮಯ್ಯ ಸಜ್ಜು: ಬೆಂಬಲಿಗರ ಜೊತೆ ಮಹತ್ವದ ಸಭೆ, ಹೆಚ್ಚಿದ ಕುತೂಹಲ

ಹೈಕಮಾಂಡ್ ಸೂಚನೆಗೆ ಮಣಿದ ಸಿದ್ದರಾಮಯ್ಯ: ಮುಖ್ಯಮಂತ್ರಿ ಸ್ಥಾನ ತ್ಯಜಿಸಲು ಸಮ್ಮತಿ; ಕಾಂಗ್ರೆಸ್ ಪವರ್ ಶಿಫ್ಟ್‌ಗೆ ಕೌಂಟ್‌ಡೌನ್ ಶುರು, ಡಿಕೆಶಿಗೆ ಸಿಎಂ ಪಟ್ಟ..?

ಬೆಂಗಳೂರಿಗೂ ಎಂಟ್ರಿ ಕೊಟ್ಟಿತೇ ಮಹಾಮಾರಿ ಎಬೋಲಾ? ಆಫ್ರಿಕಾದಿಂದ ಬಂದ ಮಹಿಳೆಯಲ್ಲಿ ಸೋಂಕಿನ ಲಕ್ಷಣ ಪತ್ತೆ, ಆರೋಗ್ಯ ಇಲಾಖೆ ಹೈ ಅಲರ್ಟ್

CMRL ಹಣ ಅಕ್ರಮ ವರ್ಗಾವಣೆ ಪ್ರಕರಣ: ಕೇರಳ ಮಾಜಿ ಸಿಎಂ ಪಿಣರಾಯಿ ವಿಜಯನ್ ನಿವಾಸದ ಮೇಲೆ ED ದಾಳಿ..!

SCROLL FOR NEXT