ಮನೋರಂಜನ್ 
ಸಿನಿಮಾ ಸುದ್ದಿ

ಬೃಹಸ್ಪತಿಯಾಗಿ ಬದಲಾದ ಸನ್ ಆಫ್ ರವಿಚಂದ್ರನ್: ರಿಡಬ್ಬಿಂಗ್ ನಲ್ಲಿ ಮನೋರಂಜನ್

ಮನೋರಂಜನ್ ಅಭಿನಯದ ಎರಡನೇ ಸಿನಿಮಾ ವಿಐಪಿ ಸಿನಿಮಾ ಟೈಟಲ್ ಬದಲಾಯಿಸಿ ಸನ್ ಆಫ್ ರವಿಚಂದ್ರನ್ ಎಂದು ಹೆಸರಿಸಲಾಗಿತ್ತು, ಈಗ ಅಂತಿಮವಾಗಿ ಬೃಹಸ್ಪತಿ ...

ಬೆಂಗಳೂರು: ಕೆಲ ನಿರ್ದೇಶಕರು ಮತ್ತು ನಟರು ಸಿನಿಮಾ ಉತ್ತಮವಾಗಿ ಮೂಡಿಬರಲೆಂದು ಚಿತ್ರದ ಕೆಲವೊಂದು ಭಾಗಗಳನ್ನು  ರಿಶೂಟಿಂಗ್ ಮಾಡುವುದನ್ನು ನಾವು ಕೇಳಿದ್ದೇವೆ, ಆದರೆ ನಾಯಕ ನಟನೊಬ್ಬನ ಒತ್ತಾಯದ ಮೇರೆಗೆ ರಿ ಡಬ್ಬಿಂಗ್ ಮಾಡಲಾಗಿದೆ.
ಮನೋರಂಜನ್ ಅಭಿನಯದ ಎರಡನೇ ಸಿನಿಮಾ ವಿಐಪಿ ಸಿನಿಮಾ ಟೈಟಲ್ ಬದಲಾಯಿಸಿ ಸನ್ ಆಫ್ ರವಿಚಂದ್ರನ್ ಎಂದು ಹೆಸರಿಸಲಾಗಿತ್ತು, ಈಗ ಅಂತಿಮವಾಗಿ ಬೃಹಸ್ಪತಿ ಎಂದು ಟೈಟಲ್ ಫೈನಲ್ ಮಾಡಲಾಗಿದೆ. 
ಮನೋರಂಜನ್ ಜೊತೆ ಇಡಿ ಸಿನಿಮಾ ತಂಡವೇ ರಿ ಡಬ್ಬಿಂಗ್ ನಲ್ಲಿ ಭಾಗಿಯಾಗಿದೆ. ನಾನು ಮತ್ತು ನನ್ನ ಸಹೋದರ ವಿಕ್ರಮ್ ಸಿನಿಮಾದ ಕೆಲ ಭಾಗಗಳನ್ನು ನೋಡಿದಾಗ ಅದರಲ್ಲಿ ನಾನು ಪೂರ್ಣವಾಗಿ ಧನುಶ್ ಸ್ಟೈಲ್ ಅನ್ನು ಪುನಾರಾವರ್ತಿಸಿರುವಂತೆ ತಿಳಿಯಿತು. ನಿರ್ದೇಶಕ ನಂದ ಕಿಶೋರ್ ಅದನ್ನ ಸರಿಯಾಗಿ ತಿಳಿ ಹೇಳಿದರು. ಈ ಸ್ಟೈಲ್ ಎನಿದ್ದರೂ ತಮಿಳು ನಟನಿಗೆ ಸರಿ ಹೊಂದುತ್ತದೆ ಎಂದು ಹೇಳಿದರು. ಹೀಗಾಗಿ ನಾನು ನನ್ನದೇ ಸ್ಟೈಲ್ ನಲ್ಲಿ ಡಬ್ಬಿಂಗ್ ಮಾಡಿದ್ದೇನೆ ಇದು ಎಲ್ಲಾ ಪ್ರೇಕ್ಷಕರಿಗೆ ಮೆಚ್ಚುಗೆಯಾಗುತ್ತದೆ ಎಂದು ಮನೋರಂಜನ್ ಹೇಳಿದ್ದಾರೆ.
ಸಾಹೇಬ ನೋಡಿದ ಪ್ರೇಕ್ಷಕರಿಗೆ ಇದರಲ್ಲಿ ನಾನು ಮತ್ತಷ್ಟು ಸುಧಾರಿಸಿದ್ದೇನೆ ಎಂಬುದು ತಿಳಿಯಬೇಕು ಎಂದು ನನ್ನ ಮನಸ್ಸಿನಲ್ಲಿತ್ತು. ಇದೆಲ್ಲಾವನ್ನು ಗಮನದಲ್ಲಿಟ್ಟುಕೊಂಡು ನಾನು ಸಿನಿಮಾದ ಕೆಲವೊಂದ ಭಾಗಗಳನ್ನು ರಿ ಡಬ್ಬಿಂಗ್ ಮಾಡಲು ನಿರ್ಧರಿಸಿ ವಾಪಸ್ ಸ್ಟುಡಿಯೋಗೆ ತೆರಳಿದೆ ಎಂದು ತಿಳಿಸಿದ್ದಾರೆ.
ಶೀಘ್ರದಲ್ಲೇ ಸಿನಿಮಾ ತಂಡ ಮೋಷನ್ ಪೋಸ್ಟರ್ ರಿಲೀಸ್ ಮಾಡಲಿದೆ. ಅದಾದ ನಂತರ ಆಡಿಯೋ ಬಿಡುಗಡೆ ಮಾಡಲಿದೆ, ಡಿಸೆಂಬರ್ ತಿಂಗಳ ಅಂತ್ಯದಲ್ಲಿ ಥಿಯೇಟರ್ ಗೆ ಬೃಹಸ್ಪತಿ ಬರಲಿದ್ದಾನೆ. 
ನಂದಕಿಶೋರ್ ನಿರ್ದೇಶನ ಮಾಡುತ್ತಿರುವ ಈ ಚಿತ್ರಕ್ಕೆ ರಾಕ್​ಲೈನ್ ವೆಂಕಟೇಶ್ ಬಂಡವಾಳ ಹೂಡುತ್ತಿದ್ದಾರೆ. ಮನುಗೆ ನಾಯಕಿಯಾಗಿ ಬಾಲಿವುಡ್ ನಟಿ ಮಿಷ್ಟಿ ಚಕ್ರವರ್ತಿ ಕಾಣಿಸಿಕೊಂಡಿದ್ದಾರೆ. 

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ನಾವು ಏಕೆ ತಡೆಯಲಿ... ತಾಂತ್ರಿಕ ಸಮಸ್ಯೆ ಹೊರತು ಉದ್ದೇಶಪೂರ್ವಕವಲ್ಲ: ಮಹಿಳಾ ಪತ್ರಕರ್ತರನ್ನು ದೂರವಿಟ್ಟ ಬಗ್ಗೆ ಮುತ್ತಕಿ ಸ್ಪಷ್ಟನೆ

Afghan-Pak War: 'ಅಲ್ಲಾ ಕಾಪಾಡು' ಅಫ್ಘಾನ್ ಪ್ರತೀಕಾರದ ದಾಳಿ; ಆಗಸದೆತ್ತರಕ್ಕೆ ಚಿಮ್ಮಿದ ಪಾಕ್ ಸೈನಿಕರ ಶವಗಳು, ಗಡಿಯಿಂದ ಕಾಲ್ಕಿತ್ತ ಸೇನೆ, Video

ಯಾವುದೇ ಸಿದ್ಧಾಂತ ಅಥವಾ ಅಜೆಂಡಾವನ್ನು ಪ್ರಚಾರ ಮಾಡುತ್ತಿಲ್ಲ; 'ಕಾಂತಾರ: ಚಾಪ್ಟರ್ 1' ಕುರಿತು ರಿಷಬ್ ಶೆಟ್ಟಿ

'ಆಕೆ ಮಧ್ಯರಾತ್ರಿ 12.30ಕ್ಕೆ ಹೇಗೆ ಹೊರಬಂದಳು?': ಗ್ಯಾಂಗ್ ರೇಪ್ ಕುರಿತು ಮಮತಾ ಬ್ಯಾನರ್ಜಿ ಹೇಳಿಕೆ

ಹಾಸನಾಂಬ ದರ್ಶನಕ್ಕೆ ಭಕ್ತರ ಸಂಖ್ಯೆ ಹೆಚ್ಚಳ: ಎರಡೇ ದಿನಗಳಲ್ಲಿ ರೂ. 2.24 ಕೋಟಿ ಆದಾಯ, ಆರು ಸಿಬ್ಬಂದಿ ಅಮಾನತು!

SCROLL FOR NEXT