ಸನ್ನಿ ಡಿಯೋಲ್ 
ಸಿನಿಮಾ ಸುದ್ದಿ

ನನಗೆ ಸ್ಟಾರ್ ಡಂ ಬೇಡ, ಉತ್ತಮ ನಟನಾಗಿರಲು ಬಯಸುತ್ತೇನೆ: ಸನ್ನಿ ಡಿಯೋಲ್

ಬಾಲಿವುಡ್ ನ ನಂಬರ್ 1 ಸ್ಟಾರ್ ಆಗಿ ಮೆರೆಯಬೇಕೆಂಬ ಆಸೆ ನನಗಿಲ್ಲ, ಹೀಗಾಗಿ ಈ ರೇಸ್ ನಲ್ಲಿ ನಾನು ಇಲ್ಲ ಎಂದು ನಟ ಸನ್ನಿ ಡಿಯೋಲ್...

ನವದೆಹಲಿ: ಬಾಲಿವುಡ್ ನ ನಂಬರ್ 1 ಸ್ಟಾರ್ ಆಗಿ ಮೆರೆಯಬೇಕೆಂಬ ಆಸೆ ನನಗಿಲ್ಲ, ಹೀಗಾಗಿ ಈ ರೇಸ್ ನಲ್ಲಿ ನಾನು ಇಲ್ಲ ಎಂದು ನಟ ಸನ್ನಿ ಡಿಯೋಲ್ ಸ್ಪಷ್ಟ ಪಡಿಸಿದ್ದಾರೆ. 
ಕಲೆ ಎಂಬುದು ರಕ್ತಗತವಾಗಿ ಬಂದಿರುವ ಸನ್ನಿಡಿಯೋಲ್ 1983 ರಲ್ಲಿ ಬೇತಾಬ್ ಸಿನಿಮಾ ಮೂಲಕ ಬಾಲಿವುಡ್ ಗೆ ಎಂಟ್ರಿ ನೀಡಿದರು. ಹಿರಿಯ ನಟ ಧರ್ಮೇಂದ್ರ ಅವರ ಪುತ್ರನಾಗಿರುವ ಸನ್ನಿ, ನನಗೆ ಸ್ಟಾರ್ ಡಂ ನಲ್ಲಿ ನಂಬಿಕೆಯಿಲ್ಲ, ಉತ್ತಮ ಕಲಾವಿದನಾಗಲು ಬಯಸುತ್ತೇನೆ ಎಂದು ಹೇಳಿದ್ದಾರೆ.
ಬಾಲಿವುಡ್ ನಲ್ಲಿ ಕಾಂಪಿಟೇಷನ್ ಎಂಬುದಿಲ್ಲ, ಅದನ್ನು ನಾವಾಗಿಯೇ ಸೃಷ್ಟಿಸಿಕೊಂಡಿದ್ದೇವೆ, ಯಾರು ಮೊದಲು ಬಂದು ಲೈನ್ ಕ್ರಾಸ್ ಮಾಡುತ್ತಾರೆ, ನಂತರ ಯಾರು  ಬರುತ್ತಾರೆ ಎಂಬುದು ಮುಖ್ಯವಲ್ಲ, ನಾನು ಸ್ಪರ್ಧೆಯಲ್ಲಿಲ್ಲ, ನಾನು ಒಬ್ಬ ಕಲಾವಿದನಾಗಿ ಸಿನಿಮಾಗೆ ಬಂದೆ, ಆದರೆ ನಿಮ್ಮ ಸಿನಿಮಾ ಯಶಸ್ವಿಯಾಗಿಬಿಟ್ಟರೇ ನೀವು ಸ್ಟಾರ್ ಆಗಿಬಿಡುತ್ತೀರಾ. ಆದರೆ ನಾನು ಕೇವಲ ನಟನಾಗಿರಲು ಮಾತ್ರ ಇಷ್ಟ ಪಡುತ್ತೇನೆ ಎಂದು ಸನ್ನಿ ಡಿಯೋಲ್ ಹೇಳಿದ್ದಾರೆ.
ನೀವು ಒಬ್ಬ ನಟನಾಗಿದ್ದಾಗ ಮಾತ್ರ ನೀವು ಯಾವುದರ ಬಗ್ಗೆಯೂ ತಲೆ ಕೆಡಿಸಿಕೊಳ್ಳದೇ ನಿಮ್ಮ ಕೆಲಸವನ್ನು ಎಂಜಾಯ್ ಮಾಡಲು ಸಾಧ್ಯ, ದಶಕಗಳ ಕಾಲ ಬಾಲಿವುಡ್ ನಲ್ಲಿದ್ದರೂ ತಾವು ಸಾಧಿಸುವುದು ಬಹಳಷ್ಟಿದೆ ಎಂಬುದು ಸನ್ನಿ ಡಿಯೋಲ್ ಅಭಿಪ್ರಾಯ.
ನಾನು ಪ್ರತಿಯೊಂದು ದಿನವನ್ನು ಹೊಸ ದಿನವನ್ನಾಗಿ ನೋಡುತ್ತೇನೆ,  ನಾನು ಹಲವು ಸಿನಿಮಾದಲ್ಲಿ ನಟಿಸಿದ್ದೇನೆ.ನಾನು ಯಾವೆಲ್ಲಾ ಸಿನಿಮಾ ಮಾಡಿದ್ದೇನೋ ಅವುಗಳನ್ನೆಲ್ಲಾ ಎಂಜಾಯ್ ಮಾಡಿದ್ದೇನೆ. ಈ ವೃತ್ತಿ ನಿಮಗೆ ಯಾವತ್ತೂ ಬೋರ್ ಎನಿಸುವುದಿಲ್ಲ,  ಇದು ಬೆಳಗ್ಗೆ 9-5 ಗಂಟೆಯ ಕೆಲಸವಲ್ಲ, ಹೀಗಾಗಿ ನೀವು ನಿಮಗಾಗಿ ಎಂಜಾಯ್ ಮಾಡಬಹುದು. ಈ ವೃತ್ತಿಯಲ್ಲಿ ನಿಮಗೆ ಯಾವುದೇ ವೀಕೆಂಡ್, ವಾರದ ರಜೆ, ಸಾರ್ವಜನಿಕ ರಜೆ ಇರುವುದಿಲ್ಲ, ಅಂಥಹ ಹುಚ್ಚುತನ ಈ ಇಂಡಸ್ಟ್ರಿಯಲ್ಲಿದೆ, ಅದನ್ನು ಪ್ರೀತಿಯಿಂದ ಎಂಜಾಯ್ ಮಾಡಬೇಕು ಎಂದು ಹೇಳಿದ್ದಾರೆ.ಸದ್ಯ ಸನ್ನಿ ಡಿಯೋಲ್ ತಮ್ಮ ಪುತ್ರನ ಸಿನಿಮಾದಲ್ಲಿ ಬ್ಯುಸಿಯಾಗಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

'ಪಾಕಿಸ್ತಾನದೊಂದಿಗೆ ಯುದ್ಧ ನಿಲ್ಲಿಸಲು ಟ್ರಂಪ್ 24 ಗಂಟೆ ಕಾಲಾವಕಾಶ ನೀಡಿದ್ದರು, ಮೋದಿ ಕೇವಲ 5 ಗಂಟೆಗಳಲ್ಲಿ ಪಾಲಿಸಿದರು': ರಾಹುಲ್ ಗಾಂಧಿ

Dharmasthala: Mahesh Shetty Thimarodi ಮನೆ ಮಹಜರು, ಪತ್ನಿ-ಮಕ್ಕಳ ಮೊಬೈಲ್ ವಶಕ್ಕೆ, 3 ತಲ್ವಾರ್ ಕೂಡ ಪತ್ತೆ!

ಕಟ್ಟಡ ಕುಸಿತಕ್ಕೂ ಕೆಲವೇ ಕ್ಷಣಗಳ ಮುನ್ನ 22 CRPF ಸೈನಿಕರ ರಕ್ಷಣೆ; Indian Army ಹೆಲಿಕಾಪ್ಟರ್ ರೋಚಕ ಕಾರ್ಯಾಚರಣೆ! Video

ಡಿ ಕೆ ಶಿವಕುಮಾರ್ ಹಿಂದೂ ಜನರ ಭಾವನೆಗಳಿಗೆ ನೋವುಂಟುಮಾಡಿದ್ದು ಕ್ಷಮೆಯಾಚಿಸಬೇಕು: ಶೋಭಾ ಕರಂದ್ಲಾಜೆ

Tamil Nadu: ನಟ-ರಾಜಕಾರಣಿ ದಳಪತಿ ವಿಜಯ್ ಬೌನ್ಸರ್ ಗಳಿಂದ ವ್ಯಕ್ತಿಯ ಮೇಲೆ ಹಲ್ಲೆ ಆರೋಪ! ಕೇಸ್ ದಾಖಲು, ವಿಡಿಯೋದಲ್ಲಿ ಏನಿದೆ?

SCROLL FOR NEXT