ಭರಣಿ ಚಿತ್ರದ ಫೋಟೋಶೂಟ್ 
ಸಿನಿಮಾ ಸುದ್ದಿ

ಕೇರಳದಲ್ಲಿ ಆನೆ ಜೊತೆಗೆ ಫೋಟೋ ಶೂಟ್ ಮಾಡಿದ 'ಭರಣಿ' ಚಿತ್ರತಂಡ

ಚೊಚ್ಚಲ ನಿರ್ದೇಶಕ ಚರಣ್ ರಾಜ್ ನಟರಾದ ಮಾಧವ ಮತ್ತು ಸ್ವಾತಿ ಕೊಂಡೆಯ ಜೊತೆ ದೇವರನಾಡು ...

ಚೊಚ್ಚಲ ನಿರ್ದೇಶಕ ಚರಣ್ ರಾಜ್ ನಟರಾದ ಮಾಧವ ಮತ್ತು ಸ್ವಾತಿ ಕೊಂಡೆಯ ಜೊತೆ ದೇವರನಾಡು ಕೇರಳಕ್ಕೆ ಕಾಲಿಟ್ಟಿದ್ದು ತಮ್ಮ ಚಿತ್ರದ ಫೋಟೋಶೂಟ್ ಮಾಡಿಸಿಕೊಂಡಿದ್ದರು. ಯಾಕೆಂದರೆ ಚಿತ್ರದಲ್ಲಿ ಆನೆ ಮುಖ್ಯ ಪಾತ್ರ ವಹಿಸುತ್ತದೆ. ಮತ್ತು ಚಿತ್ರದ ಒಂದು ಭಾಗದಲ್ಲಿ ಆನೆಯ ಸುತ್ತಲೇ ಕಥೆ ಸುತ್ತುತ್ತದೆ. ಹೀಗಾಗಿ ಆನೆಯ ಜೊತೆಗೆ ನಿಂತು ಫೋಟೋ ಶೂಟ್ ಮಾಡಿಸಿಕೊಂಡಿದ್ದಾರೆ.

ಆನೆಯ ಜೊತೆಗೆ ಫೋಟೋ ಶೂಟ್ ಮಾಡಿಸಿಕೊಳ್ಳಲು ಪ್ರಾಣಿ ಮಂಡಳಿಯಿಂದ ಅನುಮತಿ ಪಡೆಯಲು ನಾಲ್ಕು ತಿಂಗಳು ಹಿಡಿಯಿತು ಎನ್ನುತ್ತಾರೆ  ಚರಣ್ ರಾಜ್.

ಪ್ರಾಣಿ ಮಂಡಳಿಯಿಂದ ಅನುಮತಿ ಸಿಕ್ಕಿದ ಕೂಡಲೇ ಕಳೆದ ಭಾನುವಾರ ಚಿತ್ರತಂಡ ಕೇರಳಕ್ಕೆ ಪ್ರಯಾಣ ಬೆಳೆಸಿತು. ಕೃಷ್ಣಪುರಂನಲ್ಲಿ ಶೂಟ್ ಮಾಡಿದರು, ಆ ಸಂದರ್ಭದಲ್ಲಿ ಅಲ್ಲಿ ಯಾವುದೇ ಜೋರು ಮಳೆ, ನೆರೆ ಪ್ರವಾಹ ಬಂದಿರಲಿಲ್ಲವಂತೆ.

ಪಾರ್ವತಮ್ಮನ ಮಗ ಎಂಬ ಟ್ಯಾಗ್ ಲೈನ್ ನೊಂದಿಗೆ ಭರಣಿ ಚಿತ್ರದ ಮುಹೂರ್ತ ಸೆಪ್ಟೆಂಬರ್ ಮೊದಲ ವಾರದಲ್ಲಿ ನಡೆಯಲಿದೆ. ರಾಜ್ ಕುಮಾರ್ ಕುಟುಂಬದವರಲ್ಲಿ ಯಾರಾದರೊಬ್ಬರು ಚಿತ್ರ ಮುಹೂರ್ತಕ್ಕೆ ಚಾಲನೆ ನೀಡಬೇಕೆಂದು ಆಶಿಸುತ್ತೇವೆ. ಶಿವರಾಜ್ ಕುಮಾರ್ ಅವರ ಜೊತೆ ಮಾತುಕತೆ ನಡೆಸಿದ್ದು ಅವರು ಸಿಗುವ ದಿನಾಂಕಕ್ಕೆ ತಕ್ಕಂತೆ ಮುಹೂರ್ತ ಇಟ್ಟುಕೊಳ್ಳಲಿದ್ದೇವೆ ಎಂದರು.

ಯೋಗೇಶ್ ಅವರು ಸಾಜಿದ್ ಖುರೇಷಿ ಅವರ ಸಹಾಯದೊಂದಿಗೆ ಚಿತ್ರ ನಿರ್ಮಿಸುತ್ತಿದ್ದಾರೆ. ಸಾಜಿದ್ ನಾಗರಹಾವು ಚಿತ್ರ ತಯಾರಿಸಿದವರು. ವಿವೇಕ್ ಚಕ್ರವರ್ತಿ ಅವರ ಸಂಗೀತ ಮತ್ತು ಕೆ ಆರ್ ಶಿವಕುಮಾರ್ ಅವರ ಛಾಯಾಗ್ರಹಣವಿದೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಭಾರತದ ಮೇಲೆ ಶೇ.50 ರಷ್ಟು ಸುಂಕಾಸ್ತ್ರ ಜಾರಿ: ದಿನದ ಕೊನೆಗೆ ಒಟ್ಟಿಗೆ ಸೇರ್ತಿವಿ! US ಖಜಾನೆ ಮುಖ್ಯಸ್ಥರು ಹಿಂಗ್ಯಾಕಂದ್ರು?

ಸಶಸ್ತ್ರ ಪಡೆಗಳು ಮುಂದಿನ ಭದ್ರತಾ ಸವಾಲುಗಳಿಗೆ ಸಿದ್ಧರಾಗಿರಬೇಕು: ರಾಜನಾಥ್ ಸಿಂಗ್

ಹಿಂದೂ ನಂಬಿಕೆ ಒಡೆಯುತ್ತಿರುವ ಬಾನು ಮುಷ್ತಾಕ್: ಶಿವನ ಬೆಟ್ಟವನ್ನೇ 'ಯೇಸು ಬೆಟ್ಟ' ಮಾಡಲು ಹೊರಟವರಿಂದ ಧರ್ಮದ ಪಾಠ ಬೇಡ- ಪ್ರತಾಪ್ ಸಿಂಹ

2030 Commonwealth Games: ಭಾರತದ ಬಿಡ್‌ಗೆ ಕೇಂದ್ರ ಸಂಪುಟದ ಅನುಮೋದನೆ! ಅಹಮದಾಬಾದ್ ನಲ್ಲಿ ಆಯೋಜಿಸುವ ಪ್ರಸ್ತಾಪ!

ಡೆವಿಲ್‌' ಸಿನಿಮಾದ 'ಇದ್ರೆ ನೆಮ್ಮದಿಯಾಗಿ ಇರಬೇಕು' ಹಾಡಿಗೆ ಭರ್ಜರಿ ಸ್ಟೆಪ್ ಹಾಕಿದ ವಿನೋದ್ ರಾಜ್! Video

SCROLL FOR NEXT