ಹರಿಪ್ರಿಯಾ 
ಸಿನಿಮಾ ಸುದ್ದಿ

ಲೈಫ್ ಜೊತೆ... ನನ್ನ ನಿಜ ಬಣ್ಣ ಬಯಲು: ಹರಿಪ್ರಿಯಾ

ಸ್ಯಾಂಡಲ್ವುಡ್ ನಟಿ ಹರಿಪ್ರಿಯಾ ತಮ್ಮ ಅಭಿನಯದ ಲೈಫ್ ಜೊತೆ ಒಂದು ಸೆಲ್ಫಿ ಚಿತ್ರದ ಬಿಡುಗಡೆ ನಿರೀಕ್ಷಿಯಲ್ಲಿದ್ದು ಚಿತ್ರದ ಕುರಿತಂತೆ ಕೆಲ ವಿಷಯಗಳನ್ನು ಹಂಚಿಕೊಂಡಿದ್ದಾರೆ...

ಸ್ಯಾಂಡಲ್ವುಡ್ ನಟಿ ಹರಿಪ್ರಿಯಾ ತಮ್ಮ ಅಭಿನಯದ ಲೈಫ್ ಜೊತೆ ಒಂದು ಸೆಲ್ಫಿ ಚಿತ್ರದ ಬಿಡುಗಡೆ ನಿರೀಕ್ಷಿಯಲ್ಲಿದ್ದು ಚಿತ್ರದ ಕುರಿತಂತೆ ಕೆಲ ವಿಷಯಗಳನ್ನು ಹಂಚಿಕೊಂಡಿದ್ದಾರೆ. 
ಸಾರಥಿ ಚಿತ್ರ ನಿರ್ದೇಶಿಸಿದ್ದ ದಿನಕರ್ ತೂಗುದೀಪ ಈ ಚಿತ್ರವನ್ನು ನಿರ್ದೇಶಿಸುತ್ತಿದ್ದಾರೆ. ಚಿತ್ರದ ಪ್ರತಿ ಪಾತ್ರವೂ ನಮ್ಮ ನಿಜಜೀವನವನ್ನು ಪ್ರತಿಬಿಂಬಿಸುವುದಿಲ್ಲ. ಆದರೆ ಕೆಲವೊಂದು ಪಾತ್ರವೂ ನಿಜಜೀವನಕ್ಕೆ ಹತ್ತಿರವಾಗಿರುತ್ತದೆ ಎಂದು ಹರಿಪ್ರಿಯಾ ಹೇಳಿದ್ದಾರೆ. 
ಚಿತ್ರದ ಚಿತ್ರೀಕರಣದ ವೇಳೆ ಪ್ರತಿಯೊಂದು ಕ್ಷಣವೂ ನಾವು ನಗೆಗಡಲಲ್ಲಿ ತೆಲುತ್ತಿದ್ದೇವು. ನಾನು ಅಂತರ್ಮುಖಿಯಾಗಿದ್ದೇನೆ ಎಂದು ಜನರು ಭಾವಿಸುತ್ತಾರೆ. ಆದರೆ ನಾನು ಎಷ್ಟು ಸಂತೋಷದಿಂದ ಪ್ರೀತಿಸುತ್ತೇನೆಂಬುದು ನನ್ನ ಹತ್ತಿರದವರಿಗೆ ಮಾತ್ರ ತಿಳಿದಿದೆ. ಆದ್ದರಿಂದ ನಾನು ಈ ಚಿತ್ರದಲ್ಲಿ ಆರಾಮವಾಗಿ ಅಭಿನಯಿಸಿದ್ದೇನೆ ಎಂದರು. 
ಚಿತ್ರದಲ್ಲಿ ನನ್ನ ಪಾತ್ರ ರಶ್ಮಿ ಅಲಿಯಾಸ್ ರಾಶ್, ಮುಗ್ಧ, ಸೂಕ್ಷ್ಮ ಮತ್ತು ಪ್ರಬುದ್ಧ ಹುಡುಗಿಯ ಪಾತ್ರ. ಹೆಚ್ಚು ಬಡಬಡಾಯಿಸುವ ಪಾತ್ರ. ನಾನು ಚಿತ್ರೀಕರಣದ ವೇಳೆ ಜಾಸ್ತಿ ಮಾತನಾಡಿದ್ದೆ ಎಂಬುದು ಚಿತ್ರದ ಡಬ್ಬಿಂಗ್ ಮಾಡುವ ಸಮಯದಲ್ಲಿ ತಿಳಿಯಿತು. ಈ ಪಾತ್ರವನ್ನು ಈ ಹಿಂದೆ ಯಾವು ನಿರ್ದೇಶಕರು ನನಗೆ ಕೊಟ್ಟಿರಲಿಲ್ಲ ಎಂದು ಹರಿಪ್ರಿಯಾ ಹೇಳಿದ್ದಾರೆ. 
ವೈಯಕ್ತಿಕವಾಗಿ ಹರಿಪ್ರಿಯಾ ದೇಶ ಸುತ್ತುವುದನ್ನು ಹೆಚ್ಚು ಪ್ರೀತಿಸುತ್ತಾಳೆ. ಲೈಫ್ ಜೊತೆ ಒಂದು ಸೆಲ್ಫಿ ಚಿತ್ರ ನನಗೆ ಈ ಅವಕಾಶವನ್ನು ನೀಡಿತು. ಚಿತ್ರೀಕರಣದ ವೇಳೆ ನಾವು ಗೋವಾ, ಉಡುಪಿ ಮತ್ತು ಮುಳ್ಳಯನಗಿರಿ ಸೇರಿದಂತೆ ಹಲವು ಹೊಸ ಸ್ಥಳಗಳನ್ನು ಅನ್ವೇಷಿಸಲು ನಮಗೆ ಅವಕಾಶ ನೀಡಿತು. ಇನ್ನು ರಿಷಿಕೇಷದಲ್ಲಿ ಮೊದಲ ಬಾರಿಗೆ ರಿವರ್ ರ್ಯಾಫ್ಟಿಂಗ್ ಮಾಡಿದ್ದು ನನಗೆ ನೀರು ಕಂಡರೆ ತುಂಬಾಾ ಭಯಾ ಇತ್ತು. ಆ ಭಯ ಈ ಚಿತ್ರದ ಮೂಲಕ ಕಳೆದು ಹೋಗಿದೆ ಎಂದರು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಪ್ಯಾಕ್ಸ್ ಸಿಲಿಕಾ ಅಲೈಯನ್ಸ್‌ನ ಸದಸ್ಯ ದೇಶವಾಗಲಿದೆ; ಅಮೆರಿಕಕ್ಕೆ ಭಾರತಕ್ಕಿಂತ ಮುಖ್ಯ ದೇಶ ಮತ್ತೊಂದಿಲ್ಲ: ಸೆರ್ಗಿಯೊ ಗೋರ್

ಬಿಗ್ ಬಾಸ್ 12 ಫಿನಾಲೆ ಹೊತ್ತಲ್ಲಿ ಕಿಚ್ಚ ಸುದೀಪ್‌ಗೆ ಸಂಕಷ್ಟ ತಂದ 'ರಣಹದ್ದು'!

CM ಕುರ್ಚಿ ಗುದ್ದಾಟ: ಅಗತ್ಯವಿದ್ದಾಗ ಸಿದ್ದರಾಮಯ್ಯ, ಶಿವಕುಮಾರ್‌ರನ್ನು ಮಾತುಕತೆಗೆ ಕರೆಯಲಾಗುವುದು; ಮಲ್ಲಿಕಾರ್ಜುನ ಖರ್ಗೆ

ಉತ್ತರ ಪ್ರದೇಶ: "ಆಕ್ಷೇಪಾರ್ಹ" ಸ್ಥಿತಿಯಲ್ಲಿದ್ದ ಪ್ರೇಮಿಗಳನ್ನು ಹೊಡೆದು ಕೊಂದ ಕುಟುಂಬಸ್ಥರು!

ಮಹಾತ್ಮ ಗಾಂಧಿ ಸಂದೇಶಗಳು ಹಿಂದೆಂದಿಗಿಂತಲೂ ಈಗ ಹೆಚ್ಚು ಪ್ರಸ್ತುತ: ಸಬರಮತಿ ಆಶ್ರಮದಲ್ಲಿ ಜರ್ಮನ್ ಚಾನ್ಸೆಲರ್!

SCROLL FOR NEXT