ಸಿನಿಮಾ ಸುದ್ದಿ

ಕೊಡಗು ಪ್ರವಾಹ: ನಿರಾಶ್ರಿತರಿಗೆ ರಶ್ಮಿಕಾ ಮಂದಣ್ಣ ನೆರವು

Lingaraj Badiger
ಮಡಿಕೇರಿ: ನಟಿ ರಶ್ಮಿಕಾ ಮಂದಣ್ಣ ಅವರು ಪ್ರವಾಹ ಪೀಡಿತ ತವರು ಜಿಲ್ಲೆ ಕೊಡಗಿನ ಸಂಕಷ್ಟಕ್ಕೆ ಸ್ಪಂದಿಸಿದ್ದು, 31 ಸಂತ್ರಸ್ತ ಕುಟುಂಬಗಳಿಗೆ ತಲಾ 10 ಸಾವಿರ ರುಪಾಯಿ ನೆರವು ನೀಡಿದ್ದಾರೆ. ಅಲ್ಲದೆ ಮುಂದಿನ ದಿನಗಳಲ್ಲಿ  ಮನೆ ನಿರ್ಮಾಣಕ್ಕೆ ನೆರವಾಗುವುದಾಗಿ ಹೇಳಿದ್ದಾರೆ.
ಇಂದು ವಿರಾಜಪೇಟೆಯ ಸೆರಿನಿಟಿ ಹಾಲ್ ನಲ್ಲಿ ಪ್ರವಾಹ ಸಂತ್ರಸ್ತರಿಗೆ ಚೆಕ್ ವಿತರಿಸಿದ ನಟಿ, ಹಾಡು ಹೇಳಲು ವೇದಿಕೆಗೆ ಬಂದು ಗಳಗಳನೆ ಕಣ್ಣೀರಿಟ್ಟ ಸಂತ್ರಸ್ತರನ್ನು ಅಪ್ಪಿಕೊಂಡು ಸಮಾಧಾನ ಮಾಡಿದರು.
ರಶ್ಮಿಕಾ ಮಂದಣ್ಣ ಅವರು ಕೊಡಗು ಪ್ರವಾಹದ ಬಳಿಕ ಸಾಮಾಜಿಕ ತಾಣಗಳಲ್ಲಿ ಭಾವಾನಾತ್ಮಕ ಪತ್ರವೊಂದದನ್ನು ಬರೆದಿದ್ದರು. ಈ ಬಗ್ಗೆ ಹಲವರು ಟೀಕೆಯನ್ನು ವ್ಯಕ್ತ ಪಡಿಸಿ ತವರು ಜಿಲ್ಲೆಗೆ ಭೇಟಿ ನೀಡಿ ಸಂತ್ರಸ್ತರ ಪರವಾಗಿ ಕೆಲಸ ಮಾಡುವಂತೆ ಸಲಹೆ ನೀಡಿದ್ದರು.
SCROLL FOR NEXT