ಸಿನಿಮಾ ಸುದ್ದಿ

ನಾನು ಯಾವ ಪಾತ್ರದಲ್ಲಿ ಕಾಣಿಸಿಕೊಳ್ಳಲೂ ಹಿಂಜರಿಯಲಾರೆ: ಶಾನ್ವಿ ಶ್ರೀವಾಸ್ತವ

Raghavendra Adiga
ಬೆಂಗಳೂರು: ಶಾನ್ವಿ ಶ್ರೀವಾಸ್ತವ ಕನ್ನಡದ ಪ್ರಮುಖ ನಾಯಕಿಯರಲ್ಲಿ ಒಬ್ಬರಾಗಿ ಗುರುತಿಸಿಕೊಂಡಿದ್ದು ಬಹುತಾರಾಂಗಣದ ಚಿತ್ರಗಳಲ್ಲಿ ಸಹ ಕಾಣಿಸಿಕೊಂಡಿದ್ದಾರೆ. ಪ್ರಸ್ತುತ ಅವರ ಅಭುಇನಯದ ಎರಡು ಚಿತ್ರಗಳು ತೆರೆಗೆ ಬರಲು ಸಿದ್ದವಾಗಿದ್ದು ಅದರಲ್ಲಿ ಒಂದು ರಕ್ಷಿತ್ ಶೆಟ್ಟಿ ನಾಯಕನಾಗಿರುವ "ಆವನೇ ಶ್ರೀಮನ್ನಾರಾಯಣ" ಆದರೆ ಇನ್ನೊಂದು ರವಿಚಂದ್ರನ್ ಹಾಗೂ ಉಪೇಂದ್ರ ಅಭಿನಯದ "ರವಿ ಚಂದ್ರ" ಇದೇ ಅಲ್ಲದೆ ಶಾನ್ವಿ "ಗೀತಾ" ಚಿತ್ರದಲ್ಲಿ ಸಹ ಕಾಣಿಸಿಕೊಳ್ಳುತ್ತಿದ್ದು ಇದಕ್ಕಾಗಿ ಕೋಲ್ಕತ್ತಾದಲ್ಲಿ ಶೂಟಿಂಗ್ ನಡೆಯಲಿದೆ.
ಈ ಸಂಬಂಧ ಟ್ವೀಟ್ ಮಾಡಿರುವ ನಟಿ "ಹೊಸ ನೋಟದೊಂದಿಗೆ ಹೊಸ ಆರಂಭ" ಎಂದು ಬರೆದುಕೊಂಡಿದ್ದಾರೆ.
SCROLL FOR NEXT