ಸಿನಿಮಾ ಸುದ್ದಿ

ಸುರಭಿ ಜತೆ ದಾಂಪತ್ಯ ಜೀವನಕ್ಕೆ ಕಾಲಿಟ್ಟ ಸಂತೋಷ್ ಆನಂದರಾಮ್

Vishwanath S
ಬೆಂಗಳೂರು: ಮಿ ಅಂಡರ್ ಮಿಸೆಸ್ ರಾಮಾಚಾರಿ ಮತ್ತು ರಾಜಕುಮಾರ ಸೂಪರ್ ಹಿಟ್ ಚಿತ್ರಗಳ ನಿರ್ದೇಶಕ ಸಂತೋಷ್ ಆನಂದರಾಮ್ ಅವರು ಸುರಭಿ ಜತೆ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. 
ವಿವಾಹ ಮಹೋತ್ಸವ ಬೆಂಗಳೂರಿನ ಜೆಪಿ ನಗರದ ಸಿಂಧೂರಿ ಕನ್ವೆನ್ಷನ್ ಸೆಂಟರ್ ನಲ್ಲಿ ಅದ್ಧೂರಿಯಾಗಿ ನೆರವೇರಿತು. ಆನಂದರಾಮ್ 11.30ರ ವೃಷಭ ಲಗ್ನದಲ್ಲಿ ಸುರಭಿಗೆ ಮಾಂಗಲ್ಯಧಾರಣೆ ಮಾಡಿದರು. 
ವಿವಾಹ ಸಮಾರಂಭಕ್ಕೆ ಚಿತ್ರರಂಗದ ಗಣ್ಯರು, ರಾಜಕೀಯ ನಾಯಕರು ಹಾಗೂ ಸ್ನೇಹಿತರು ಆಗಮಿಸಿ ವಧು ವರರಿಗೆ ಶುಭ ಕೋರಿದ್ದಾರೆ. ನಟಿ ತಾರಾ, ನಿರ್ದೇಶಕ ಎಸ್ ನಾರಾಯಣ್, ಭಾರತಿ ವಿಷ್ಣುವರ್ದನ್, ದ್ವಾರಕೀಶ್, ಕೆ ಮಂಜು, ದತ್ತಣ್ಣ, ಉಪೇಂದ್ರ, ವಿಜಯ್ ಪ್ರಕಾಶ್ ಮತ್ತು ರಚಿತಾ ರಾಮ್ ಹಾಗೂ ಮತ್ತಿತರರು ವಿವಾಹ ಸಮಾರಂಭದಲ್ಲಿ ಹಾಜರಿದ್ದರು. 
SCROLL FOR NEXT