ಕಮಲ್ ಹಾಸನ್ ಮತ್ತು ನಟ ರಜನಿಕಾಂತ್ 
ಸಿನಿಮಾ ಸುದ್ದಿ

ನಮ್ಮ ಹಾದಿ, ಶೈಲಿ ಬೇರೆಯೇ ಇರಬಹುದು ಆದರೆ, ನಮ್ಮ ಗುರಿ ಒಂದೇ: ಕಮಲ್ ಹಾಸನ್ ಕುರಿತು ರಜನಿಕಾಂತ್

ನಮ್ಮ ಹಾದಿ ಹಾಗೂ ಶೈಲಿ ಬೇರೆಯಾಗಿರಬಹುದು. ಆದರೆ, ನಮ್ಮಿಬ್ಬರ ಗುರಿ ಒಂದೇ ಆಗಿದೆ. ಆದು ಜನರಿಗೆ ಒಳ್ಳೆಯದು ಮಾಡಬೇಕೆಂಬುದು ಎಂದು ಹೊಸ ಪಕ್ಷ ಸ್ಥಾಪನೆ ಮಾಡಿರುವ ಕಮಲ್ ಹಾಸನ್ ಕುರಿತು ನಟ ರಜನಿಕಾಂತ್ ಅವರು ಶುಕ್ರವಾರ ಹೇಳಿದ್ದಾರೆ...

ಚೆನ್ನೈ: ನಮ್ಮ ಹಾದಿ ಹಾಗೂ ಶೈಲಿ ಬೇರೆಯಾಗಿರಬಹುದು. ಆದರೆ, ನಮ್ಮಿಬ್ಬರ ಗುರಿ ಒಂದೇ ಆಗಿದೆ. ಆದು ಜನರಿಗೆ ಒಳ್ಳೆಯದು ಮಾಡಬೇಕೆಂಬುದು ಎಂದು ಹೊಸ ಪಕ್ಷ ಸ್ಥಾಪನೆ ಮಾಡಿರುವ ಕಮಲ್ ಹಾಸನ್ ಕುರಿತು ನಟ ರಜನಿಕಾಂತ್ ಅವರು ಶುಕ್ರವಾರ ಹೇಳಿದ್ದಾರೆ. 
ಕಮಲ್ ಹಾಸನ್ ಅವರ ಹೊಸ ಪಕ್ಷ ಸ್ಥಾಪನೆ ಕುರಿತು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಮಲ್ ಹಾಸನ್ ಅವರು ನಡೆಸಿದ್ದ ಸಾರ್ವಜನಿಕ ಸಭೆಯನ್ನು ನೋಡಿದೆ. ಬಹಳ ಚೆನ್ನಾಗಿತ್ತು. ನಮ್ಮಿಬ್ಬರ ಹಾದಿ ಹಾಗೂ ಶೈಲಿ ಬೇರೆಯಾಗಿರಬಹುದು. ಆದರೆ, ಇಬ್ಬರ ಗುರಿ ಒಂದೇ ಆಗಿದೆ. ಅದು ಜನರಿಗೆ ಒಳಿತನ್ನು ಮಾಡಬೇಕೆಂಬುದು ಎಂದು ಹೇಳಿದ್ದಾರೆ.
ಇದೇ ವೇಳೆ ಕಮಲ್ ಹಾಸನ್ ಅವರನ್ನು ಹೊಗಳಿರುವ ಅವರು, ಕಮಲ್ ಹಾಸನ್ ಅವರು ಸಾಮರ್ಥ್ಯವಿದ್ದು, ಜನರ ವಿಶ್ವಾಸವನ್ನು ಅವರು ಗೆಲ್ಲಲಿದ್ದಾರೆಂದು ತಿಳಿಸಿದ್ದಾರೆ. 
ಬಳಿಕ ಕಾವೇರಿ ವಿವಾದ ಸಂಬಂಧ ಸುಪ್ರೀಂಕೋರ್ಟ್ ನೀಡಿದ್ದ ತೀರ್ಪು ಕುರಿತು ತಮಿಳುನಾಡು ಸರ್ಕಾರ ಕರೆದಿದ್ದ ಸರ್ವಪಕ್ಷ ಸಭೆಯನ್ನು ರಜನಿಕಾಂತ್ ಅವರು ಸ್ವಾಗತಿಸಿದ್ದಾರೆ. 
ಫೆ.1 ರಂದು ನಟ ಕಮಲ್ ಹಾಸನ್ ಅವರು ತಮ್ಮ ಹೊಸ ಪಕ್ಷವನ್ನು ಘೋಷಣೆ ಮಾಡಿದ್ದರು, ಮಕ್ಕಳ ನಿಧಿ ಮಯಂ(ಜನರ ನ್ಯಾಯ ಕೇಂದ್ರ) ಎಂಬ ಪಕ್ಷದ ಹೆಸರನ್ನು ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಅವರ ನೇತೃತ್ವದಲ್ಲಿ ಘೋಷಣೆ ಮಾಡಿದ್ದರು. 

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಜಮ್ಮು-ಕಾಶ್ಮೀರ: ಮಸೂದ್ ಅಜರ್ ಆಡಿಯೋ ಬೆನ್ನಲ್ಲೇ ಭಾರತದ ಗಡಿಗೆ ನುಗ್ಗಲು 'ಪಾಕ್ ಡ್ರೋನ್' ಗಳು ಯತ್ನ!

1st ODI: ಕೊಹ್ಲಿ ಅರ್ಧಶತಕ: ನ್ಯೂಜಿಲ್ಯಾಂಡ್ ವಿರುದ್ಧದ ಪಂದ್ಯದಲ್ಲಿ ಭಾರತಕ್ಕೆ ರೋಚಕ ಜಯ!

ಕಾಂಗ್ರೆಸ್ ಶಾಸಕಿ ನಯನಾ ಮೋಟಮ್ಮಗೆ ಅಶ್ಲೀಲ ಕಾಮೆಂಟ್! ಕಿಡಿಗೇಡಿಗಳಿಗೆ ಕೊಟ್ಟ ವಾರ್ನಿಂಗ್ ಏನು?

ಮಿಲಿಟರಿ ದಾಳಿಗೆ ಟ್ರಂಪ್, ನೆತನ್ಯಾಹು ಸಜ್ಜು: ತಿರುಗೇಟು ನೀಡಿದ ಇರಾನ್! ಹೇಳಿದ್ದೇನು ಗೊತ್ತಾ?

ಪಾಕಿಸ್ತಾನದಲ್ಲಿ 'ಗುಂಡಿಟ್ಟು' ಹಿಂದೂ ರೈತನ ಕಗ್ಗೊಲೆ! ಹೈದರಾಬಾದಿನಲ್ಲಿ ಆರೋಪಿಗಳ ಬಂಧನ

SCROLL FOR NEXT