ಆಂಧ್ರ ಮಾಜಿ ಮುಖ್ಯಮಂತ್ರಿ ವೈಎಸ್ ರಾಜಶೇಖರ ರೆಡ್ಡಿ ಅವರ ಜೀವನ ಚರಿತ್ರೆ ಸಿನಿಮಾ ಆಗುತ್ತಿದ್ದು, ಮಹಿ ವಿ ರಾಘವ್ ನಿರ್ದೇಶನದ ಯಾತ್ರಾ ಚಿತ್ರದಲ್ಲಿ ದಕ್ಷಿಣ ಭಾರತದ ಖ್ಯಾತ ನಟ ಮಮ್ಮುಟಿ ನಟಿಸುವ ಸಾಧ್ಯತೆ ಇದೆ.
ಯಾತ್ರಾ ಸಿನಿಮಾಗೆ ಸಂಬಂಧಿಸಿದಂತೆ ನಿರ್ದೇಶಕ ಮಹಾ ವಿ ರಾಘವ್ ಅವರೊಂದಿಗೆ ಮಮ್ಮುಟಿ ಮಾತುಕತೆ ನಡೆಸಿದ್ದು, ಎಲ್ಲವೂ ಅಂದುಕೊಂಡಂತೆಯೇ ಆದರೆ ರಾಜಶೇಖರ ರೆಡ್ಡಿ ಪಾತ್ರದಲ್ಲಿ ಮಮ್ಮುಟಿ ನಟಿಸಲಿದ್ದಾರೆ.
ಸಿನಿಮಾಗೆ ಸಂಬಂಧಿಸಿದಂತೆ ಮಾತುಕತೆ ಇನ್ನೂ ನಡೆಯುತ್ತಿದೆ. ಯಾತ್ರಾ ಸಿನಿಮಾದ ಕಥೆಯನ್ನು ಮಮ್ಮೂಟಿ ಇಷ್ಟಪಟ್ಟಿದ್ದರೂ ಅಭಿನಯಿಸುವುದರ ಬಗ್ಗೆ ಒಪ್ಪಿಗೆ ಸೂಚಿಸಿಲ್ಲ. ವೈಎಸ್ ಆರ್ ಪಾತ್ರದ ಜೊತೆಗೆ ಇನ್ನೂ ಹಲವು ಪಾತ್ರಗಳನ್ನು ಅಂತಿಮಗೊಳಿಸಲಾಗುತ್ತಿದ್ದು, ಯಾರು ನಟಿಸಲಿದ್ದಾರೆ ಎಂಬುದರ ಬಗ್ಗೆ ಇನ್ನಷ್ಟೇ ಅಧಿಕೃತ ಮಾಹಿತಿ ಲಭ್ಯವಾಗಬೇಕಿದೆ.
ಎಲ್ಲವೂ ಅಂದುಕೊಂಡಂತೆಯೇ ಆದರೆ ಮಮ್ಮುಟಿ 25 ವರ್ಷಗಳ ನಂತರ ತೆಲುಗು ಸಿನಿಮಾದಲ್ಲಿ ನಟಿಸಲಿದ್ದಾರೆ.