ರಕ್ಷಿತ್ ಶೆಟ್ಟಿ 
ಸಿನಿಮಾ ಸುದ್ದಿ

ಕಿರಿಕ್ ಪಾರ್ಟಿ ಯಶಸ್ಸಿನ ನಂತರ, ಖುಷಿಯ ಅಚ್ಚರಿಗಳನ್ನು ನೀಡಲಿರುವ ರಕ್ಷಿತ್ ಶೆಟ್ಟಿ

ರಕ್ಷಿತ್ ಶೆಟ್ಟಿ ಅವರ ಮುಂದಿನ ಚಿತ್ರ ಅವನೇ ಶ್ರೀಮನ್ನಾರಾಯಣ ತಯಾರಾಗಿ ಬಿಡುಗಡೆಯಾಗಲು ...

ರಕ್ಷಿತ್ ಶೆಟ್ಟಿ ಅವರ ಮುಂದಿನ ಚಿತ್ರ ಅವನೇ ಶ್ರೀಮನ್ನಾರಾಯಣ ತಯಾರಾಗಿ ಬಿಡುಗಡೆಯಾಗಲು ಸ್ವಲ್ಪ ಸಮಯ ಹಿಡಿಯುತ್ತಿದ್ದರೂ ಕೂಡ ಚಿತ್ರದ ಬಗ್ಗೆ ಸಾಕಷ್ಟು ನಿರೀಕ್ಷೆಗಳು, ಮಾತುಗಳು ಕೇಳಿಬರುತ್ತಿವೆ. ಈ ಬಗ್ಗೆ ಇದೀಗ ಸ್ವತಃ ರಕ್ಷಿತ್ ಶೆಟ್ಟಿಯವರೇ ಮಾತನಾಡಿದ್ದು, ಕೊನೆಗೂ ಚಿತ್ರದ ಶೂಟಿಂಗ್ ಪ್ರಾರಂಭಿಸಲು ಸಿದ್ದರಾಗಿದ್ದೇವೆ ಎನ್ನುತ್ತಾರೆ.
ಫೆಬ್ರವರಿ 10ರಂದು ಚಿತ್ರದ ಶೂಟಿಂಗ್ ಆರಂಭಿಸಲಿದ್ದೇವೆ. ಚಿತ್ರದ ಮುಹೂರ್ತ ಕೆಲ ದಿನಗಳ ಮೊದಲೇ ನಡೆಯಲಿದೆ. ಚಿತ್ರದ ಕಥೆ ಸಿದ್ಧವಾಗಿದ್ದು ಜೂನ್ ವರೆಗೆ ಶೂಟಿಂಗ್ ಸಾಗಲಿದೆ ಎಂದು ಮಾಹಿತಿ ನೀಡುತ್ತಾರೆ.
ಬೆಂಗಳೂರಿನಲ್ಲಿ ಚಿತ್ರದ ಶೂಟಿಂಗ್ ಆರಂಭಿಸಲಿರುವ ಚಿತ್ರತಂಡ ಮೊದಲ ಹಂತದ ಚಿತ್ರೀಕರಣ ಮುಗಿದ ನಂತರ ಚಿತ್ರಕ್ಕೆ ಸಂಬಂಧಪಟ್ಟಂತೆ ಫೋಟೋಶೂಟ್ ನಡೆಯಲಿದೆ. ಕಳೆದ ವರ್ಷದಿಂದ ತೆರೆಯ ಮೇಲೆ ಕಡಿಮೆ ಕಾಣಿಸಿಕೊಂಡು ಅಭಿಮಾನಿಗಳಿಗೆ ನಿರಾಶೆ ಮಾಡಿರುವ ರಕ್ಷಿತ್ ಶೆಟ್ಟಿ ಈ ವರ್ಷ ಮೂರು ಸಿನಿಮಾಗಳನ್ನು ತಯಾರಿಸಲಿದ್ದಾರಂತೆ. ಅವನೇ ಶ್ರೀಮನ್ನಾರಾಯಣ ಮುಗಿದ ನಂತರ ಜುಲೈಯಲ್ಲಿ ಮತ್ತೊಂದು ಚಿತ್ರ ಹಾಗೂ ಮತ್ತೊಂದು ಪ್ರಾಜೆಕ್ಟ್ ವರ್ಷದ ಕೊನೆಗೆ ಇರಲಿದೆಯಂತೆ. ಈ ವರ್ಷವೇ ಮೂರೂ ಸಿನಿಮಾಗಳನ್ನು ತಯಾರಿಸುವ ಯೋಜನೆಯಿದೆ ಎನ್ನುತ್ತಾರೆ ರಕ್ಷಿತ್ ಶೆಟ್ಟಿ.
ಕಳೆದೊಂದು ವರ್ಷದಲ್ಲಿ ಹಲವು ಬದಲಾವಣೆಗಳಾಗಿವೆ. ಕಿರಿಕ್ ಪಾರ್ಟಿಯ ಯಶಸ್ಸಿನ ಗುಂಗಿನಲ್ಲಿದ್ದೆವು. ನಂತರ ನನ್ನ ಮದುವೆ ನಿಶ್ಚಿತಾರ್ಥ ನಡೆಯಿತು. ಕಿರಿಕ್ ಪಾರ್ಟಿಯ ಯಶಸ್ಸಿನಲ್ಲಿ ಎಷ್ಟು ಭಾಗಿಯಾಗಿದ್ದೆವೆಂದರೆ ಮುಂದೆ ಯಾವ ಸಿನಿಮಾ ಮಾಡುವುದು ಎಂಬ ಯೋಚನೆ ಕೂಡ ಸ್ವಲ್ಪ ಸಮಯ ಮಾಡಿರಲಿಲ್ಲ. ಸುಮಾರು ಒಂದು ವರ್ಷ ಕಳೆದ ನಂತರವೇ ಮುಂದಿನ ಪ್ರಾಜೆಕ್ಟ್ ನ್ನು ನಾನು ಆರಂಭಿಸಿದ್ದು. ಇನ್ನು ಅದೇ ತಪ್ಪನ್ನು ನಾನು ಮಾಡುವುದಿಲ್ಲ. ಈ ವರ್ಷ ನಾನು ಬರವಣಿಗೆಗಿಂತ ಸಿನಿಮಾಗಳ ಅಭಿನಯದಲ್ಲಿ ಹೆಚ್ಚು ತೊಡಗುತ್ತೇನೆ ಎಂದರು.
ಜೂನ್ ವೇಳೆಗೆ ಅವನೇ ಶ್ರೀಮನ್ನಾರಾಯಣ ಶೂಟಿಂಗ್ ಮುಗಿಸುವ ವಿಶ್ವಾಸ ಹೊಂದಿದ್ದಾರೆ ಅವರು. ಎಲ್ಲವೂ ಸಿದ್ಧವಾಗಿದ್ದು ಚಿತ್ರದ ಕಥೆ ಕೂಡ ಸುಂದರವಾಗಿದೆ. ಒಂದು ಬಾರಿ ಶೂಟಿಂಗ್ ಆರಂಭಗೊಂಡರೆ ಸರಾಗವಾಗಿ ಮುಗಿಯಬಹುದು ಎಂಬ ವಿಶ್ವಾಸವಿದೆ. ಈ ಹಿಂದಿನ ಚಿತ್ರಗಳಿಗೆ ನಾಲ್ಕು ತಿಂಗಳು ತೆಗೆದುಕೊಂಡಿದ್ದರೆ ಈ ಸಿನಿಮಾಕ್ಕೆ ಮತ್ತೆ ಒಂದು ತಿಂಗಳು ಹೆಚ್ಚು ಸಮಯ ತೆಗೆದುಕೊಳ್ಳಲಿದ್ದೇವೆ ಎಂದರು.
ಅವನೇ ಶ್ರೀಮನ್ನಾರಾಯಣದ ನಂತರ ಮುಂದಿನ ಚಿತ್ರ ಪ್ರೀತಿ, ಪ್ರಣಯದ ಕುರಿತ ಸಿನಿಮಾವಾಗಿದ್ದು ಮತ್ತೊಂದು ಸಿನಿಮಾ ಅತ್ಯಂತ ವಿಭಿನ್ನವಾಗಿರುತ್ತದೆ. ಅನೇಕ ವಿಷಯಗಳು ನನ್ನ ಮನಸ್ಸಿನಲ್ಲಿವೆ. ಅವೆಲ್ಲವೂ ಒಟ್ಟಾಗಿ ಸಿನಿಮಾ ರೂಪ ಪಡೆದುಕೊಳ್ಳಲಿದೆ ಎನ್ನುತ್ತಾರೆ.
ಈ ಮೂರು ಚಿತ್ರಗಳಲ್ಲಿ ಯಾವುದಾದರೊಂದಕ್ಕೆ ನಿರ್ದೇಶಕರಾಗುತ್ತೀರಾ ಎಂದು ಕೇಳಿದಾಗ, ಖಂಡಿತಾ ಮತ್ತೆ ನಿರ್ದೇಶನ ಮಾಡುವುದು ನನಗಿಷ್ಟ. ಆದರೆ ಈ ವರ್ಷ ಕ್ಯಾಮರಾ ಮುಂದೆ ಕಾಣಿಸಿಕೊಳ್ಳಲು ಹೆಚ್ಚು ಇಷ್ಟಪಡುತ್ತೇನೆ ಎಂದರು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಅಮೆರಿಕ ನಿಯೋಜಿತ ರಾಯಭಾರಿ ಸೆರ್ಗಿಯೊ ಗೋರ್- ಮೋದಿ, ಜೈಶಂಕರ್ ಭೇಟಿ; Tariff ಒತ್ತಡದ ನಡುವೆ ಭಾರತ-ಅಮೆರಿಕ ಸಂಬಂಧ ಸುಧಾರಣೆಯ ಸೂಚನೆ?

ಅಫ್ಘಾನಿಸ್ತಾನ ನಮ್ಮೊಂದಿಗೆ ಗಡಿ ಹಂಚಿಕೊಂಡಿರುವ ನೆರೆ ರಾಷ್ಟ್ರ- S Jaishankar; ಭಾರತದೊಂದಿಗೆ POK ವಿಲೀನದ ಸುಳಿವು; ಚೀನಾಗೂ ಶಾಕ್!

ಅಬ್ಬಬ್ಬಾ ರೋಮಾಂಚನ: ಅದ್ಭುತ ಸೃಷ್ಟಿಸಿದ ರಿಷಬ್ ಶೆಟ್ಟಿಗೆ ರಾಷ್ಟ್ರಪ್ರಶಸ್ತಿ ಕೊಡಲೇಬೇಕು - ತಮಿಳು ನಿರ್ದೇಶಕ ಅಟ್ಲೀ

Pakistan: ಇಸ್ರೇಲ್ ವಿರೋಧಿ ಪ್ರತಿಭಟನಾ ಜಾಥಾ, ಪೋಲೀಸರ ಗುಂಡೇಟಿಗೆ 11 ಮಂದಿ ಬಲಿ! Video

ಉತ್ತರ ಪ್ರದೇಶಕ್ಕೆ ಭೇಟಿ ನೀಡಿದ ತಾಲಿಬಾನ್ ಸಚಿವನಿಗೆ ಅದ್ಧೂರಿ ಸ್ವಾಗತ, ಸರ್ಕಾರದ ಭದ್ರತೆ; ಯೋಗಿಗೆ ನಾಚಿಕೆಯಾಗಬೇಕು- SP ಸಂಸದ ಶಫೀಕರ್

SCROLL FOR NEXT