ಚೂರಿಕಟ್ಟೆ 
ಸಿನಿಮಾ ಸುದ್ದಿ

ಚೂರಿಕಟ್ಟೆ ಚಿತ್ರದಲ್ಲಿ ನಾಯಕನಿಗಿಂತ ಪಿಸ್ತೂಲ್ ಪಾತ್ರ ದೊಡ್ಡದು!

ಚೌಕಬಾರ ಎಂಬ ಕಿರು ಚಿತ್ರದ ಯಶಸ್ಸ ಚೂರಿಕಟ್ಟೆ ಚಿತ್ರವನ್ನು ನಿರ್ದೇಶಿಸಲು ಸಾಧ್ಯವಾಯಿತು. ಕಿರು ಚಿತ್ರಗಳು ತಂತ್ರಜ್ಞನರನ್ನು ಜನರಿಗೆ ಪರಿಚಯಿಸುತ್ತದೆ ಮತ್ತು...

ಚೌಕಬಾರ ಎಂಬ ಕಿರು ಚಿತ್ರದ ಯಶಸ್ಸ ಚೂರಿಕಟ್ಟೆ ಚಿತ್ರವನ್ನು ನಿರ್ದೇಶಿಸಲು ಸಾಧ್ಯವಾಯಿತು. ಕಿರು ಚಿತ್ರಗಳು ತಂತ್ರಜ್ಞನರನ್ನು ಜನರಿಗೆ ಪರಿಚಯಿಸುತ್ತದೆ ಮತ್ತು ಅವರಲ್ಲಿನ ಸಾಮರ್ಥ್ಯ ಮತ್ತು ವಿಶ್ವಾಸವನ್ನು ಬೆಳೆಸುತ್ತದೆ ಎಂದು ಚೂರಿಕಟ್ಟೆ ನಿರ್ದೇಶಕ ರಘು ಹೇಳಿದ್ದಾರೆ. 
ಕಿರು ಚಿತ್ರಗಳು ತನ್ನದೇ ಆದ ಮಿತಿಗಳನ್ನು ಹೊಂದಿದ್ದರೂ ಅದು ವಿಭಿನ್ನ ಪ್ರೇಕ್ಷಕರನ್ನು ತಲುಪಿತು. ಅದೃಷ್ಟವಶಾತ್ ಇದು ವಿಮರ್ಶಾತ್ಮಕ ಮೆಚ್ಚುಗೆ ಮತ್ತು ಪ್ರಶಸ್ತಿಗಳನ್ನು ಗೆದ್ದಿದೆ. ಈ ಗುರುತು ಚೂರಿಕಟ್ಟೆ ಚಿತ್ರವನ್ನು ನಿರ್ದೇಶಿಸಲು ಪ್ರೇರಣೆಯಾಯಿತು ಎಂದು ರಘು ಹೇಳಿದ್ದಾರೆ. 
ಚೂರಿಕಟ್ಟೆ ಚಿತ್ರಕಥೆ ಆಸಕ್ತಿದಾಯಕ ಹಿನ್ನಲೆ ಹೊಂದಿದೆ. ಪಿಸ್ತೂಲ್ ಈ ಚಿತ್ರಕ್ಕೆ ಸ್ಕ್ರಿಫ್ಟ್ ಗೆ ಸ್ಫೂರ್ತಿ ನೀಡಿತು. ಚಿತ್ರದಲ್ಲಿ ಪ್ರವೀಣ್ ಮುಖ್ಯ ಪಾತ್ರದಲ್ಲಿ ನಟಿಸುತ್ತಿದ್ದಾರೆ. ಆದರೆ ಪಿಸ್ತೂಲ್ ನಮ್ಮ ನಾಯಕನಿಗಿಂತ ದೊಡ್ಡ ಪಾತ್ರವಹಿಸಲಿದ್ದು ಚಿತ್ರದಲ್ಲಿನ ಪ್ರತಿ ಪಾತ್ರದ ಜೀವನದ ಮೇಲೆ ಪ್ರಭಾವ ಬೀರುತ್ತದೆ ಎಂದರು. 
ಚೂರಿಕಟ್ಟೆ ಟಿಂಬರ್ ಮಾಫಿಯಾ ಜಗತ್ತಿನ ಕುರಿತಾದ ಚಿತ್ರಕಥೆ ಹೊಂದಿದೆ ಮತ್ತು ಒಂದು ನಿಮಿಷದಲ್ಲಿ ಕೋಪದಿಂದ ಹೊರಬರುವ ನಿರ್ಧಾರಗಳಿಂದ ಜನರ ಜೀವನವು ಹೇಗೆ ಬದಲಾಗುತ್ತದೆ. ಇದು ಅವರ ಸುತ್ತಲಿರುವ ಜನರ ಜೀವನದ ಮೇಲೆ ಪರಿಣಾಮ ಬೀರುತ್ತದೆ ಮತ್ತು ಸ್ಥಳೀಯ ರಾಜಕೀಯ ವ್ಯವಸ್ಥೆಯನ್ನು ರೂಪಿಸುತ್ತದೆ. ಚಿತ್ರವು ಚೂರಿಕಟ್ಟೆ ಎಂಬ ಸಣ್ಣ ಹಳ್ಳಿಯಲ್ಲಿದೆ. ಆದರೆ ಇದು ಭಯವನ್ನುಂಟು ಮಾಡುತ್ತದೆ ಎಂದು ಎಂಬುದನ್ನು ಚಿತ್ರದಲ್ಲಿ ತೋರಿಸಲಾಗಿದೆ ಎಂದು ರಘು ಹೇಳಿದ್ದಾರೆ. 
ಚೂರಿಕಟ್ಟೆ ಚಿತ್ರವನ್ನು ಎಸ್ ನಯಾಝುದ್ದೀನ್ ಮತ್ತು ಎಂ ತುಳಸಿರಾಮುಡು ಎಂಬುದು ನಿರ್ಮಿಸಿದ್ದಾರೆ. ಚಿತ್ರದಲ್ಲಿ ಅಚ್ಯುತ್ ಕುಮಾರ್, ಶರತ್ ಲೋಹಿತಾಶ್ವ, ಪ್ರೇರಣ ಕಂಬಂ, ಬಾಲಾಜಿ ಮನೋಹರ್, ಮಂಜುನಾಥ್ ಹೆಗಡೆ ಸೇರಿದಂತೆ ಹಲವು ಕಲಾವಿದರು ಅಭಿನಯಿಸಿದ್ದಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಬಾಂಗ್ಲಾದೇಶ ಚುನಾವಣೆಯಲ್ಲಿ BNP ಭರ್ಜರಿ ಗೆಲುವು: ತಾರಿಕ್ ರೆಹಮಾನ್ ಗೆ ಅಭಿನಂದನೆ ಸಲ್ಲಿಸಿ ಪ್ರಧಾನಿ ಮೋದಿ ಹೇಳಿದ್ದೇನು?

ಬಾಂಗ್ಲಾದೇಶ ಚುನಾವಣೆ: ಸ್ಪಷ್ಟ ಬಹುಮತ ಪಡೆದ BNP, ಇವರೇನಾ ಮುಂದಿನ ಪ್ರಧಾನ ಮಂತ್ರಿ ?

ಎಪ್ಸ್ಟೀನ್ ಜೊತೆಗಿನ 'ಸಂಬಂಧ': ಹರ್ದೀಪ್ ಪುರಿ ರಾಜೀನಾಮೆಗೆ ಸಂಸದರ ಒತ್ತಾಯ

Karnataka Budget 2026- ರಾಜ್ಯ ಬಜೆಟ್ ಮಂಡನೆಗೆ ದಿನಾಂಕ ನಿಗದಿ, ಸಂಪುಟ ಸಭೆಯಲ್ಲಿ ಕೈಗೊಂಡ ನಿರ್ಧಾರಗಳಿವು...

ತಿಹಾರ್ ಜೈಲಿನಲ್ಲಿದ್ದಾಗ 'ಹಿತ' ಕಾಯುವ ಭರವಸೆ ನೀಡಿದ್ದೀರಿ- ಸೋನಿಯಾ ಮುಂದೆ ಡಿಕೆಶಿ ಅಳಲು: ರಾಹುಲ್ ಭೇಟಿ ಬಳಿಕ ಹಸನ್ಮುಖರಾಗಿ ಹೊರಬಂದ DCM!

SCROLL FOR NEXT