ವಿನಯ್ ರಾಜ್ ಕುಮಾರ್ 
ಸಿನಿಮಾ ಸುದ್ದಿ

ಅಕ್ಕಿಪೇಟೆ ದರ್ಗಾದಲ್ಲಿ ಅನಂತು/ನುಸ್ರತ್ ಹಾಡಿನ ಚಿತ್ರೀಕರಣ

ಸುಧೀರ್ ಶಾನುಭೋಗ್ ಅವರ ಚೊಚ್ಚಲ ನಿರ್ದೇಶನದ ಚಿತ್ರ ಅನಂತು/ನುಸ್ರತ್ ಚಿತ್ರೀಕರಣ....

ಸುಧೀರ್ ಶಾನುಭೋಗ್ ಅವರ ಚೊಚ್ಚಲ ನಿರ್ದೇಶನದ  ಚಿತ್ರ ಅನಂತು/ನುಸ್ರತ್ ಚಿತ್ರೀಕರಣ ನಡೆಯುತ್ತಿದ್ದು, ಅಕ್ಕಿಪೇಟೆಯ ಹಸ್ರತ್ ತವಕಲ್ ಮಸ್ತಾನ್ ಶಾ ಮಾಜಿದ್ ದರ್ಗಾದಲ್ಲಿ ಶೂಟಿಂಗ್ ನಡೆಯಿತು.
ಕವಾಲಿ ಹಾಡಿಗೆ ಕೈಲಾಶ್ ಖೇರ್ ಧ್ವನಿ ನೀಡಿದ್ದು, ವಿನಯ್ ರಾಜ್ ಕುಮಾರ್ ಮತ್ತು ಲತಾ ಹೆಗ್ಡೆ ಅವರ ಭಾಗದ ಹಾಡಿನ ಚಿತ್ರೀಕರಣ ಮಧ್ಯರಾತ್ರಿ ದರ್ಗಾದಲ್ಲಿ ಇತ್ತೀಚೆಗೆ ನಡೆಯಿತು. ಹಗಲು ಹೊತ್ತಿನಲ್ಲಿ ಚಿತ್ರೀಕರಣ ಮಾಡಲು ಸಾಧ್ಯವಾಗದಿರುವುದರಿಂದ 4 ದಿನಗಳ ಕಾಲ ಸಾಯಂಕಾಲ 6 ಗಂಟೆಯಿಂದ ಬೆಳಗ್ಗೆ 6 ಗಂಟೆಯವರೆಗೆ ನಡೆಯಿತು ಎನ್ನುತ್ತಾರೆ ಸುಧೀರ್.
ಚಿತ್ರದಲ್ಲಿ ಈ ದರ್ಗಾ ಪ್ರಮುಖ ಪಾತ್ರ ವಹಿಸುತ್ತದೆ. ಪ್ರೀತಿ, ಬ್ರೇಕಪ್  ಇತ್ಯಾದಿಗಳೆಲ್ಲವೂ ಇಲ್ಲೇ ನಡೆಯುತ್ತವೆ. ಇಲ್ಲಿ ಸುಮಾರು 200 ಜೂನಿಯರ್ ಕಲಾವಿದರು ಹಾಡಿನಲ್ಲಿ ಭಾಗವಹಿಸಿದ್ದಾರೆ.
ಹಾಡಿಗೆ ಅರಸು ಅಂತಾರೆ ಮತ್ತು ಧೀರಜ್ ಶೆಟ್ಟಿ  ಸಾಹಿತ್ಯ ಬರೆದಿದ್ದು ಕನ್ನಡ ಮತ್ತು ಹಿಂದಿ ಮಿಶ್ರಣವಾಗಿದೆ. ಪ್ರಜ್ವಲ್ ದೇವರಾಜ್ ಅತಿಥಿ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ.
ಹಾಡಿನ ಒಂದು ದೃಶ್ಯ 

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ನನ್ನ-ಕಾಂಗ್ರೆಸ್ ಮಧ್ಯೆ ಭಕ್ತ- ಭಗವಂತನ ಸಂಬಂಧ ಇದೆ, RSS ಗೀತೆ ಹಾಡಿದ್ದಕ್ಕೆ ನೋವಾಗಿದ್ದರೆ ಕ್ಷಮೆ ಕೇಳುತ್ತೇನೆ: ಡಿಕೆ ಶಿವಕುಮಾರ್

ಭಾರತದ ಮೇಲೆ ಶೇ.50 ರಷ್ಟು ಸುಂಕ ನಾಳೆ ಜಾರಿ: ಕರಡು ಸೂಚನೆ ಹೊರಡಿಸಿದ ಅಮೆರಿಕ

ಪದಕ ಹಾಕಿಸಿಕೊಳ್ಳಲು ನಿರಾಕರಿಸಿದ DMK ಸಚಿವನ ಪುತ್ರ, BJP ನಾಯಕ Annamalai ಹೇಳಿದ್ದೇನು? Video

ಧರ್ಮಸ್ಥಳ ಬುರುಡೆ ಕೇಸು: ಮಹೇಶ್ ತಿಮರೋಡಿ ನಿವಾಸದಲ್ಲಿ ಆರೋಪಿ ಚಿನ್ನಯ್ಯನ ಮೊಬೈಲ್ ಪತ್ತೆ

Gaza Hospital Strike: ಹಮಾಸ್ ಸೋಲಿಸುವುದಷ್ಟೇ ನಮ್ಮ ಗುರಿ, ನಾಗರೀಕರನ್ನು ಗೌರವಿಸುತ್ತೇವೆ; ದಾಳಿ ಕುರಿತು ಮೊದಲ ಬಾರಿಗೆ ಇಸ್ರೇಲ್ ವಿಷಾದ

SCROLL FOR NEXT