ಸ್ವರಾ ಭಾಸ್ಕರ್ 
ಸಿನಿಮಾ ಸುದ್ದಿ

ಇಂದ್ರಜಿತ್ ಲಂಕೇಶ್ ಹಿಂದಿ ಚಿತ್ರಕ್ಕೆ ಸ್ವರಾ ಅಥವಾ ರಿಚಾ ನಾಯಕಿ?

ಇಂದ್ರಜಿತ್ ಲಂಕೇಶ್ ಯಾರೆಂದು ನಾವೇನೂ ಪರಿಚಯಿಸಬೇಕಾದ ಅಗತ್ಯವಿಲ್ಲ. ಇಂದ್ರಜಿತ್ ಕನ್ನಡದ ಒಬ್ಬ ಪ್ರತಿಭಾವಂತ ನಿರ್ದೇಶಕರಾಗಿದ್ದು ಸಾಕಷ್ತು ಉತ್ತಮ ಚಿತ್ರಗಳನ್ನು ಬೆಳ್ಳಿತೆರೆಗೆ ನೀಡಿದ್ದಾರೆ.

ಬೆಂಗಳೂರು: ಇಂದ್ರಜಿತ್ ಲಂಕೇಶ್ ಯಾರೆಂದು ನಾವೇನೂ ಪರಿಚಯಿಸಬೇಕಾದ ಅಗತ್ಯವಿಲ್ಲ. ಇಂದ್ರಜಿತ್ ಕನ್ನಡದ ಒಬ್ಬ ಪ್ರತಿಭಾವಂತ ನಿರ್ದೇಶಕರಾಗಿದ್ದು ಸಾಕಷ್ತು ಉತ್ತಮ ಚಿತ್ರಗಳನ್ನು ಬೆಳ್ಳಿತೆರೆಗೆ ನೀಡಿದ್ದಾರೆ. ಬಾಲಿವುಡ್ ನ ಪ್ರಖ್ಯಾತ ನಟಿಯಾಗಿರುವ ದೀಪಿಕಾ ಪಡುಕೋನೆ ಅವರನ್ನು ಚಿತ್ರ ಜಗತ್ತಿಗೆ ಪರಿಚಯಿಸಿದ್ದು ಸಹ ಇದೇ ಇಂದ್ರಜಿತ್ ಲಂಕೇಶ್. ತಮ್ಮ 'ಐಶ್ವರ್ಯಾ' ಚಿತ್ರದಲ್ಲಿ ಉಪೇಂದ್ರಗೆ ನಾಯಕಿಯಾಗಿ ಅಭಿನಯಿಸುವ ಅವಕಾಶವನ್ನು ನೀಡಿದ್ದ ಇಂದ್ರಜಿತ್ 'ಮೊನಾಲಿಸಾ', 'ತುಂಟಾಟ', 'ಲವ್ ಯು ಆಲಿಯಾ' ಇದೇ ಮೊದಲಾದ ಚಿತ್ರಗಳನ್ನು ನಿರ್ದೇಶನ ಮಾಡಿದ್ದಾರೆ.
ಹೊಸ ಸುದ್ದಿ ಏನೆಂದರೆ ಇಂದ್ರಜಿತ್ ಇದೀಗ ಹಿಂದಿ ಚಿತ್ರವೊಂದರ ನಿರ್ದೇಶನಕ್ಕೆ ಮುಂದಾಗಿದ್ದಾರೆ. ಕನ್ನಡದ ಪುಟ್ಟಣ್ಣ ಕಣಗಾಲ್, ಕಾಶಿನಾಥ್, ರಾಜೇಂದ್ರ ಸಿಂಗ್ ಬಾಬು ಸಹ ಬಾಲುವುಡ್ ಚಿತ್ರಗಳನ್ನು ನಿರ್ದೇಶನ ಮಾಡಿದ್ದು ಇದೀಗ ಸುಮಾರು ಇಪ್ಪತ್ತು ವರ್ಷಗಳ ನಂತರ ಮತ್ತೆ ಕನ್ನಡದ ನಿರ್ದೇಶಕರೊಬ್ಬರು ಹಿಂದಿ ಚಿತ್ರ ನಿರ್ದೇಶನಕ್ಕೆ ತೊಡಗಲಿದ್ದಾರೆ. ಚಿತ್ರದ ಕಥೆ ಹೇಗಿರಲಿದೆ ಎನ್ನುವುದು ಇನ್ನೂ ಮಾಹಿತಿ ಇಲ್ಲವಾಗಿದ್ದು ಒಟ್ಟಾರೆ ಚಿತ್ರ ಮಹಿಲಾ ಕೇಂದ್ರಿತ ಕಥೆಯನ್ನು ಆಧರಿಸಿರಲಿದೆ ಎಂದು ಮೂಲಗಳು ತಿಳಿಸಿದೆ.
ಇನ್ನೊಂದು ಕುತೂಹಲಕಾರಿ ಸಂಗತಿ ಎಂದರೆ ಇಂದ್ರಜಿತ್ ತಮ್ಮ ಚೊಚ್ಚಲ ಹಿಂದಿ ಚಿತ್ರದದಲ್ಲಿ ರಿಚಾ ಚಾಧಾ ಅಥವಾ ಸ್ವರಾ ಭಾಸ್ಕರ್ ಅವರನ್ನು ನಾಯಕಿಯನ್ನಾಗಿ ಆಯ್ಕೆ ಮಾಡಿಕೊಳ್ಳಲಿದ್ದಾರೆ. ಇವರಲ್ಲಿ ಯಾರು ನಾಯಕಿಯಾಗಿ ಪಾತ್ರವಹಿಸಲಿದ್ದಾರೆ ಎನ್ನುವುದು ಮುಂದಿನ ಕೆಲ ವಾರಗಳಲ್ಲಿ ತಿಳಿಯಲಿದೆ.
ನಟಿಯೊಬ್ಬರು ಚಿತ್ರದ ನಾಯಕಿ ಪಾತ್ರಕ್ಕೆ ಆಯ್ಕೆಗೊಂಡ ಬಳಿಕ ಪೋಷಕ ಪಾತ್ರಗಳು, ತಂತ್ರಜ್ಞರು ಮತ್ತು ನಿರ್ಮಾಪಕರ ವಿವರವನ್ನು ಬಹಿರಂಗಪಡಿಸುವುದಾಗಿ ನಿರ್ದೇಶಕ ಇಂದ್ರಜಿತ್ ಹೇಳಿದ್ದಾರೆ. ಸದ್ಯ ಸಾಮಾಜಿಕ ಕೆಲಸ ಕಾರ್ಯಗಳಲ್ಲಿ ತೊಡಗಿಸಿಕೊಂಡಿರುವ ನಿರ್ದೇಶಕ ಲಂಕೇಶ್, ಫೆಬ್ರವರಿ 8ರಿಂದ ಪ್ರಾರಂಭವಾಗುವ ಸೃಜನ್ ಲೋಕೇಶ್ ಸಾರಥ್ಯದಲ್ಲಿ ಮೂಡಿ ಬರುವ ರಿಯಾಲಿಟಿ ಶೋ 'ಮಜಾ ಟಾಕೀಸ್' ಎರಡನೆಯ ಆವೃತ್ತಿಯಲ್ಲಿ ಭಾಗವಹಿಸುವವರಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

'ಪಾಕಿಸ್ತಾನದೊಂದಿಗೆ ಯುದ್ಧ ನಿಲ್ಲಿಸಲು ಟ್ರಂಪ್ 24 ಗಂಟೆ ಕಾಲಾವಕಾಶ ನೀಡಿದ್ದರು, ಮೋದಿ ಕೇವಲ 5 ಗಂಟೆಗಳಲ್ಲಿ ಪಾಲಿಸಿದರು': ರಾಹುಲ್ ಗಾಂಧಿ

Dharmasthala: Mahesh Shetty Thimarodi ಮನೆ ಮಹಜರು, ಪತ್ನಿ-ಮಕ್ಕಳ ಮೊಬೈಲ್ ವಶಕ್ಕೆ, 3 ತಲ್ವಾರ್ ಕೂಡ ಪತ್ತೆ!

ಕಟ್ಟಡ ಕುಸಿತಕ್ಕೂ ಕೆಲವೇ ಕ್ಷಣಗಳ ಮುನ್ನ 22 CRPF ಸೈನಿಕರ ರಕ್ಷಣೆ; Indian Army ಹೆಲಿಕಾಪ್ಟರ್ ರೋಚಕ ಕಾರ್ಯಾಚರಣೆ! Video

ಡಿ ಕೆ ಶಿವಕುಮಾರ್ ಹಿಂದೂ ಜನರ ಭಾವನೆಗಳಿಗೆ ನೋವುಂಟುಮಾಡಿದ್ದು ಕ್ಷಮೆಯಾಚಿಸಬೇಕು: ಶೋಭಾ ಕರಂದ್ಲಾಜೆ

Tamil Nadu: ನಟ-ರಾಜಕಾರಣಿ ದಳಪತಿ ವಿಜಯ್ ಬೌನ್ಸರ್ ಗಳಿಂದ ವ್ಯಕ್ತಿಯ ಮೇಲೆ ಹಲ್ಲೆ ಆರೋಪ! ಕೇಸ್ ದಾಖಲು, ವಿಡಿಯೋದಲ್ಲಿ ಏನಿದೆ?

SCROLL FOR NEXT