ಕಾಳಿಂಗ ರಾವ್ ಎಡಚಿತ್ರದಲ್ಲಿ, ಬಲ ಚಿತ್ರದಲ್ಲಿ ರಾಕ್ ಲೈನ್ ವೆಂಕಟೇಶ್ ಮತ್ತು ರಾಜೇಂದ್ರ ಸಿಂಗ್ ಬಾಬು 
ಸಿನಿಮಾ ಸುದ್ದಿ

ಕಾಳಿಂಗ ರಾವ್ ಪಾತ್ರಕ್ಕೆ ನಟನ ಹುಡುಕಾಟದಲ್ಲಿ ರಾಜೇಂದ್ರ ಸಿಂಗ್ ಬಾಬು

ರಾಕ್ ಲೈನ್ ಪ್ರೊಡಕ್ಷನ್ ನಡಿ ತಯಾರಾದ ಹಲವು ಚಿತ್ರಗಳಲ್ಲಿ ಸಂಗೀತ ನಿರ್ದೇಶಕ ...

ರಾಕ್ ಲೈನ್ ಪ್ರೊಡಕ್ಷನ್ ನಡಿ ತಯಾರಾಗುವ ಹಲವು ಚಿತ್ರಗಳಲ್ಲಿ ಸಂಗೀತ ನಿರ್ದೇಶಕ ಪಿ.ಕಾಳಿಂಗ ರಾವ್ ಅವರ ಜೀವನ ಚರಿತ್ರೆ ಕುರಿತು ಮಾಡುವ ಚಿತ್ರ ಒಂದು ಮಹಾತ್ವಾಕಾಂಕ್ಷಿ ಸಿನಿಮಾಗಳಲ್ಲಿ ಒಂದು.
ರಾಜೇಂದ್ರ ಸಿಂಗ್ ಬಾಬು ಅವರ ನಿರ್ದೇಶನದಲ್ಲಿ ಮೂಡಿಬರಲಿರುವ ಸಿನಿಮಾಕ್ಕೆ ಕನ್ನಡಾಭರಣ ಕಾಳಿಂಗ ರಾವ್ ಎಂದು ಹೆಸರಿಡಲಾಗಿದೆ. ನಿರ್ದೇಶಕರು ಮತ್ತು ನಿರ್ಮಾಪಕರು ಚಿತ್ರದ ಕುರಿತು ಚರ್ಚೆ ನಡೆಸಿದ್ದು ಅದೀಗ ನಿರ್ಮಾಣಪೂರ್ವ ಹಂತದಲ್ಲಿದೆ.
ಚಿತ್ರದ ನಾಯಕನನ್ನು ಆಯ್ಕೆ ಮಾಡುವಲ್ಲಿ ಚಿತ್ರತಂಡದ ಆಸಕ್ತಿಕರ ವಿಷಯ ಅಡಗಿದೆ. ಚಿತ್ರನಿರ್ಮಾಪಕರು ನಾಯಕನ ಆಯ್ಕೆಗೆ ರಾಜ್ಯ ಮತ್ತು ದೇಶೀಯ ಮಟ್ಟದಲ್ಲಿ ವ್ಯಕ್ತಿಚಿತ್ರದ ಆಡಿಷನ್ ನಡೆಸಲು ಮುಂದಾಗಿದ್ದಾರೆ. ಕನ್ನಡದ ನಾಯಕನನ್ನೇ ಸಿನಿಮಾಕ್ಕೆ ಹಾಕಿಕೊಳ್ಳಲು ಚಿತ್ರತಂಡ ಒಲವು ತೋರುತ್ತಿದ್ದರೂ ಕೂಡ ಕಾಳಿಂಗ ರಾವ್ ಪಾತ್ರವನ್ನು ನಿಭಾಯಿಸಲು ಸೂಕ್ತ ನಾಯಕನ ಆಯ್ಕೆಗೆ ರಾಷ್ಟ್ರೀಯ ನಾಟಕ ಶಾಲೆಯನ್ನು ಕೂಡ ಸಂಪರ್ಕಿಸಲಿದ್ದಾರೆ.
ನಾಯಕನನ್ನು ಅಂತಿಮಗೊಳಿಸುವ ಮುನ್ನ ಹಲವು ಪ್ರತಿಭೆಗಳ ಹುಡುಕಾಟ ನಡೆಸಲಿದ್ದೇವೆ ಎನ್ನುತ್ತಾರೆ ರಾಜೇಂದ್ರ ಸಿಂಗ್ ಬಾಬು.
ಕಾಳಿಂಗ ರಾವ್ ಜೀವನ ಚರಿತ್ರೆಯನ್ನು ಸಿನಿಮಾದಲ್ಲಿ ಹೇಗೆ ತೋರಿಸಬೇಕು ಎಂಬುದರ ಕುರಿತು ಮತ್ತು ಚಿತ್ರದ ಮುಹೂರ್ತಕ್ಕಾಗಿ ಇದಿರು ನೋಡುತ್ತಿದ್ದಾರೆ ನಿರ್ದೇಶಕರು.
ಕಾಳಿಂಗ ರಾವ್ ಕುರಿತ ಪುಸ್ತಕವನ್ನು ಓದಿ ಸಿನಿಮಾ ತಯಾರಿಸಲು ರಾಜೇಂದ್ರ ಸಿಂಗ್ ಬಾಬುರವರು ಸ್ಪೂರ್ತಿಗೊಂಡರಂತೆ. ಕಾಳಿಂಗ ರಾವ್ ರಚನೆಯ ಎಂದೆಂದಿಗೂ ನೆನಪಿನಲ್ಲುಳಿಯುವ ಹಾಡುಗಳೊಂದಿಗೆ ಅವರ ಜೀವನ ಕುರಿತ ಕೆಲವು ಆಸಕ್ತಿಕರ ವಿಷಯಗಳಿವೆಯಂತೆ. 
ರಾಜೇಂದ್ರ ಸಿಂಗ್ ಬಾಬು ಅವರ ತಂದೆಯ ಜೊತೆಗೆ ಕಾಳಿಂಗ ರಾವ್ 1948 ಮತ್ತು 1949ರ ಇಸವಿಯಲ್ಲಿ ಕೆಲಸ ಮಾಡಿದ್ದರಂತೆ. ಅಂದಿನ ಸಂಗೀತ ನಿರ್ದೇಶಕರಲ್ಲಿ ಇಂದು ಚಾಲ್ತಿಯಲ್ಲಿರುವವರಲ್ಲಿ ಹಂಸಲೇಖ ಪ್ರಮುಖರು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ನನ್ನ-ಕಾಂಗ್ರೆಸ್ ಮಧ್ಯೆ ಭಕ್ತ- ಭಗವಂತನ ಸಂಬಂಧ ಇದೆ, RSS ಗೀತೆ ಹಾಡಿದ್ದಕ್ಕೆ ನೋವಾಗಿದ್ದರೆ ಕ್ಷಮೆ ಕೇಳುತ್ತೇನೆ: ಡಿಕೆ ಶಿವಕುಮಾರ್

ಭಾರತದ ಮೇಲೆ ಶೇ. 50 ರಷ್ಟು ಸುಂಕ ನಾಳೆ ಜಾರಿ, ಅಮೆರಿಕ ಕರಡು ಸೂಚನೆ; ಔಷಧ, ಎಲೆಕ್ಟ್ರಾನಿಕ್ಸ್‌ ವಸ್ತುಗಳಿಗೆ ವಿನಾಯಿತಿ

ಪದಕ ಹಾಕಿಸಿಕೊಳ್ಳಲು ನಿರಾಕರಿಸಿದ DMK ಸಚಿವನ ಪುತ್ರ, BJP ನಾಯಕ Annamalai ಹೇಳಿದ್ದೇನು? Video

'ಶಾಂತಿ ಬೇಕಾದರೆ ಯುದ್ಧಕ್ಕೆ ಸಿದ್ಧರಾಗಿ.. Sudarshan Chakra ವಾಯುರಕ್ಷಣಾ ವ್ಯವಸ್ಥೆಗೆ ಮೂರೂ ಸೇನೆಗಳ ಬೃಹತ್ ಪ್ರಯತ್ನ ಬೇಕು': CDS Chauhan

ಧರ್ಮಸ್ಥಳ ಬುರುಡೆ ಕೇಸು: ಮಹೇಶ್ ತಿಮರೋಡಿ ನಿವಾಸದಲ್ಲಿ ಆರೋಪಿ ಚಿನ್ನಯ್ಯನ ಮೊಬೈಲ್ ಪತ್ತೆ

SCROLL FOR NEXT