ನಿರ್ದೇಶಕ ವಿಜಯ್ ನಾಗೇಂದ್ರ, ಸಂತೋಷ್ ಆನಂದ್ ರಾಮ್ ಜೊತೆಗೆ ನಟ ಗಣೇಶ್, ನಿರ್ಮಾಪಕ ಸೈಯದ್ ಸಲಾಮ್ 
ಸಿನಿಮಾ ಸುದ್ದಿ

'ಗೀತಾ' ನನ್ನ ವೃತ್ತಿ ಜೀವನದ ವಿಶೇಷ ಚಿತ್ರ: ಗಣೇಶ್

2006ರಲ್ಲಿ 'ಮುಂಗಾರು ಮಳೆ' ಚಿತ್ರದ ಮೂಲಕ ಯಶಸ್ಸು ಕಂಡ ಗಣೇಶ್ ನಂತರ ಅಭಿಮಾನಿಗಳ ಪಾಲಿಗೆ ಗೋಲ್ಡನ್ ...

2006ರಲ್ಲಿ 'ಮುಂಗಾರು ಮಳೆ' ಚಿತ್ರದ ಮೂಲಕ ಯಶಸ್ಸು ಕಂಡ ಗಣೇಶ್ ನಂತರ ಅಭಿಮಾನಿಗಳ ಪಾಲಿಗೆ ಗೋಲ್ಡನ್ ಸ್ಟಾರ್ ಅನಿಸಿಕೊಂಡದ್ದು ಇತಿಹಾಸ.

ಕಳೆದ ವರ್ಷ ಚಮಕ್ ಎಂಬ ಮತ್ತೊಂದು ಯಶಸ್ವಿ ಚಿತ್ರ ಕೊಟ್ಟ ನಟ ಗಣೇಶ್ ಅವರ ಕೈಯಲ್ಲಿ ಈ ವರ್ಷ ಕೆಲವು ಉತ್ತಮ ಆಸಕ್ತಿಕರ ಸಿನಿಮಾಗಳಿವೆ. ಪ್ರಶಾಂತ್ ರಾಜ್ ನಿರ್ದೇಶನದ ಆರೆಂಜ್, ನಿರ್ದೇಶಕ ನಾಗಣ್ಣ ಜೊತೆ ಹಾರರ್-ಕಾಮಿಡಿ ಚಿತ್ರ ಮಾಡಲು ಕೂಡ ಸಜ್ಜಾಗಿದ್ದಾರೆ. ಅವರು ಈ ಸಿನಿಮಾ ಮಾಡುತ್ತಿರುವುದು ತಮ್ಮ ಮಗಳು ಚಾರಿತ್ರ್ಯ ಆಸೆಯನ್ನು ಈಡೇರಿಸುವುದಕ್ಕೋಸ್ಕರವಂತೆ.

ಆ ನಂತರದ್ದು ಇದೀಗ ಹೆಚ್ಚು ಸದ್ದು ಮಾಡುತ್ತಿರುವ ಚಿತ್ರವೇ ಗೀತಾ. ಚೊಚ್ಚಲ ನಿರ್ದೇಶಕ ವಿಜಯ್ ನಾಗೇಂದ್ರ ನಿರ್ದೇಶನದ ಚಿತ್ರವಿದು. ಗೋಲ್ಡನ್ ಮೂವೀಸ್ ನಡಿ ತಯಾರಾಗಲಿರುವ ಈ ಚಿತ್ರಕ್ಕೆ ಸೈಯದ್ ಸಲಾಮ್ ಕೂಡ ಬಂಡವಾಳ ಹೂಡಲಿದ್ದಾರೆ.

ಗೋಲ್ಡನ್ ಸ್ಟಾರ್ ಹುಟ್ಟುಹಬ್ಬದ ದಿನವಾದ ಇಂದು ಅಧಿಕೃತವಾಗಿ ಚಿತ್ರ ಸೆಟ್ಟೇರಲಿದೆ. ಈ ಮಧ್ಯೆ ಆರೆಂಜ್ ಚಿತ್ರದ ಟೀಸರ್ ನ್ನು ಬಿಡುಗಡೆ ಮಾಡುವ ಯೋಜನೆಯಲ್ಲಿ ಪ್ರಶಾಂತ್ ರಾಜ್ ಇದ್ದಾರೆ. ಇನ್ನು ನಾಗಣ್ಣ ಕೂಡ ತಮ್ಮ ಚಿತ್ರದ ಹೆಸರನ್ನು ಘೋಷಿಸಲಿದ್ದಾರೆ.

ಗೀತಾ ಚಿತ್ರದ ಮೊದಲ ನೋಟ ಈಗಾಗಲೇ ಬಿಡುಗಡೆಯಾಗಿ ಹೆಚ್ಚು ಸದ್ದು ಮಾಡಿದೆ. ಅದರಲ್ಲಿ ಗಣೇಶ್ ತಮ್ಮ ಪಾಕೆಟ್ ಗೆ ಕರ್ನಾಟಕ ಧ್ವಜವನ್ನು ಅಂಟಿಸಿಕೊಂಡಿದ್ದಾರೆ. ಪಾತ್ರದ ರೆಟ್ರೊ ಲುಕ್ ನಲ್ಲಿ ಕಾಣಿಸಿಕೊಳ್ಳಲು ಕಳೆದೊಂದು ತಿಂಗಳಿನಿಂದ ಶ್ರಮ ಪಡುತ್ತಿದ್ದು ಜೂನ್ 22ರಂದು ಫೋಟೋಶೂಟ್ ಮಾಡಿಸಿದ್ದೇವೆ. ಪ್ರತಿವರ್ಷ ನನ್ನ ಗೋಲ್ಡನ್ ಮೂವಿಸ್ ನಡಿ ಒಂದು ಚಿತ್ರವಾದರೂ ತಯಾರಿಸಲಿದ್ದೇವೆ, ಈ ವರ್ಷ ಗೀತಾವನ್ನು ಆಯ್ಕೆ ಮಾಡಿಕೊಂಡಿದ್ದೇವೆ. ಗೀತಾ ಚಿತ್ರ 1980ರ ದಶಕದ ಶಂಕರ್ ನಾಗ್ ಅವರ ಗೀತಾ ಚಿತ್ರದ ಶೀರ್ಷಿಕೆಯನ್ನು ಹೊಂದಿರುವುದರಿಂದ ನನ್ನ ವೃತ್ತಿ ಜೀವನದಲ್ಲಿ ಇದು ವಿಶೇಷ ಸಿನೆಮಾ ಎನ್ನುತ್ತಾರೆ ಗಣೇಶ್.

ಈ ಚಿತ್ರದಲ್ಲಿ ಶಂಕರ್ ನಾಗ್ ಅವರ ಪಾತ್ರದ ಛಾಯೆ ಸ್ವಲ್ಪ ಮಟ್ಟಿಗೆ ಗಣೇಶ್ ಅವರಲ್ಲಿ ಕಾಣಿಸಿಕೊಳ್ಳುವುದು ಬಿಟ್ಟರೆ ಎರಡೂ ಚಿತ್ರಗಳ ವಿಷಯಗಳು ಸಂಪೂರ್ಣ ಭಿನ್ನ. ಶೂಟಿಂಗ್ ಆರಂಭವಾದ ನಂತರ ಹೆಚ್ಚಿನ ವಿವರಣೆ ನೀಡಲಿದ್ದೇವೆ. ಆರೆಂಜ್ ಚಿತ್ರದ ಹಾಡು ಮತ್ತು ಕ್ಲೈಮಾಕ್ಸ್ ಚಿತ್ರೀಕರಣ ಬಾಕಿಯಿರುವುದರಿಂದ ಅದಕ್ಕೆ 18ರಿಂದ 20 ದಿನಗಳು ಬೇಕಾಗಬಹುದು. ನಂತರ ನಾಗಣ್ಣ ಅವರ ಜೊತೆ ಸಿನಿಮಾ ಆರಂಭಿಸಿ ಗೀತಾ ಚಿತ್ರದ ಚಿತ್ರೀರಣ ಸೆಪ್ಟೆಂಬರ್ ನಲ್ಲಿ ಆರಂಭವಾಗಲಿದೆ ಎಂದರು.

ವಿಜಯ್ ನಾಗೇಂದ್ರ ಅವರ ನಿರ್ದೇಶನದ ಬಗ್ಗೆ ಗಣೇಶ್ ಅವರಿಗೆ ನಂಬಿಕೆಯಿದೆ. ಒಂದು ವರ್ಷ ಹಿಂದೆಯೇ ಅವರು ಕಥೆ ಹಿಡಿದುಕೊಂಡು ಬಂದಿದ್ದರಂತೆ. ಅವರು ನಿರ್ದೇಶಕ ಸಂತೋಷ್ ಆನಂದ್ ರಾಮ್ ಜೊತೆಗೆ ಕೆಲಸ ಮಾಡಿದವರು. ಸಂತೋಷ್ ಆನಂದ್ ರಾಮ್ ಅವರೇ ವಿಜಯ್ ಅವರನ್ನು ಗಣೇಶ್ ಗೆ ಪರಿಚಯ ಮಾಡಿಸಿದ್ದಂತೆ.

ಗೀತಾ ಚಿತ್ರಕ್ಕೆ ವಿ ಹರಿಕೃಷ್ಣ ಸಂಗೀತ, ಶ್ರೀಶ ಕುಡುವಳ್ಳಿ ಛಾಯಾಗ್ರಹಣ ನೀಡಲಿದ್ದಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಜಮ್ಮು-ಕಾಶ್ಮೀರ: ಮಸೂದ್ ಅಜರ್ ಆಡಿಯೋ ಬೆನ್ನಲ್ಲೇ ಭಾರತದ ಗಡಿಗೆ ನುಗ್ಗಲು 'ಪಾಕ್ ಡ್ರೋನ್' ಗಳು ಯತ್ನ!

1st ODI: ಕೊಹ್ಲಿ ಅರ್ಧಶತಕ: ನ್ಯೂಜಿಲ್ಯಾಂಡ್ ವಿರುದ್ಧದ ಪಂದ್ಯದಲ್ಲಿ ಭಾರತಕ್ಕೆ ರೋಚಕ ಜಯ!

ಕಾಂಗ್ರೆಸ್ ಶಾಸಕಿ ನಯನಾ ಮೋಟಮ್ಮಗೆ ಅಶ್ಲೀಲ ಕಾಮೆಂಟ್! ಕಿಡಿಗೇಡಿಗಳಿಗೆ ಕೊಟ್ಟ ವಾರ್ನಿಂಗ್ ಏನು?

ಮಿಲಿಟರಿ ದಾಳಿಗೆ ಟ್ರಂಪ್, ನೆತನ್ಯಾಹು ಸಜ್ಜು: ತಿರುಗೇಟು ನೀಡಿದ ಇರಾನ್! ಹೇಳಿದ್ದೇನು ಗೊತ್ತಾ?

ಪಾಕಿಸ್ತಾನದಲ್ಲಿ 'ಗುಂಡಿಟ್ಟು' ಹಿಂದೂ ರೈತನ ಕಗ್ಗೊಲೆ! ಹೈದರಾಬಾದಿನಲ್ಲಿ ಆರೋಪಿಗಳ ಬಂಧನ

SCROLL FOR NEXT