ಬೆಂಗಳೂರು: ವಸಂತ್ ವಿಷ್ಣು ಮತ್ತು ವಿಜಯ್ ಸೇಥುಪತಿ ನಟನೆಯ ದ್ವಿಭಾಷಾ ಚಿತ್ರ ಅಖಾಡ ಸಿನಿಮಾವನ್ನು ಜಿಗರ್ ಥಂಡ ಖ್ಯಾತಿಯ ಶಿವ ಗಣೇಶ್ ನಿರ್ದೇಶಿಸುತ್ದಿದ್ದು, ತಮಿಳು ಮತ್ತು ಕನ್ನಡದಲ್ಲಿ ಚಿತ್ರ ತಯಾರಾಗಿದೆ.
ಕಳೆದ ಮೂರವರೆ ವರ್ಷಗಳಿಂದ ಸಿನಿಮಾ ಕೆಲಸ ನಡೆಯುತ್ತಿದ್ದು ಮೊದಲ ಬಾರಿಗೆ ವಿಜಯ್ ಸೇತುಪತಿ ಕನ್ನಡದಲ್ಲಿ ನಟಿಸುತ್ತಿದ್ದಾರೆ. ಸೆನ್ಸಾರ್ ಮಂಡಳಿ ಅನುಮತಿ ಪಡೆದ ಕೂಡಲೇ ಮೊದಲ ಪ್ರಮೋಷನ್ ಆರಂಭವಾಗಲಿದೆ, ಸಿನಮಾ ಚಿತ್ರೀಕರಣ ಕೆಲಕಾಲ ಸ್ಥಗಿತಗೊಂಡಿತ್ತು.
ಸಿನಿಮಾದ ಕೆಲ ಭಾಗಗಳನ್ನು ಮತ್ತೆ ಶೂಟಿಂಗ್ ಮಾಡಿದ್ದೇವೆ, ಮೊದಲು ಬುಕ್ ಮಾಡಿದ್ದ ಕಲಾವಿದರ ಡೇಟ್ಸ್ ಹೊಂದಾಣಿಕೆ ಸಾಧ್ಯವಾಗದ ಕಾರಣ ಹೊಸ ಕಲಾವಿದರೊಂದಿಗೆ ಸಿನಿಮಾ ಶೂಟಿಂಗ್ ಮುಗಿಸಿದ್ದೇವೆ, ವಿಜಯ್ ಮೊದಲಿು ಬೋರ್ಡ್ ಗೆ ಬಂದರು. ಸೇತುಪತಿ ನಂತರ ಅವರು ಈ ಸಿನಿಮಾಗೆ ಬಂದರು ಎಂದು ವಸಂತ್ ವಿಷ್ಣು ತಿಳಿಸಿದ್ದಾರೆ.,
ಕನ್ನಡದಲ್ಲಿ ಅಖಾಡ ತಮಿಳಿನಲ್ಲಿ ಎಡಕು ಎಂದು ಟೈಟಲ್ ಇಡಲಾಗಿದೆ, ಸೋಷಿಯಲ್ ಮೀಡಿಯಾ ಇರದ ಸಮಯದಲ್ಲಿನ ಚಿತ್ರೀಕರಣ ಮಾಡಲಾಗಿದೆ ಎಂದು ಹೇಳಿದ್ದಾರೆ,
ಆಗಸ್ಟ್ ನಲ್ಲಿ ಕನ್ನಡ ವರ್ಸನ್ ರಿಲೀಸ್ ಆಗುವ ಸಾಧ್ಯತೆಯಿದೆ, ನಂತರ ತಮಿಳಿನಲ್ಲಿ ಬಿಡುಗಡೆ ಮಾಡಲಾಗುವುದು, ನಯನ, ಅವಿನಾಶ್ ಮುಂತಾದವರು ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ.