ಡಿ. ಸತ್ಯ ಪ್ರಕಾಶ್ 
ಸಿನಿಮಾ ಸುದ್ದಿ

ಮೋಡಿ ಮಾಡುತ್ತೆ 'ಒಂದಲ್ಲಾ ಎರಡಲ್ಲಾ' ವಿಶಿಷ್ಟ ಶೀರ್ಷೀಕೆ ಹಾಡು

ರಾಮಾ ರಾಮ ರೇ ಚಿತ್ರದ ನಿರ್ದೇಶಕ ಡಿ. ಸತ್ಯ ಪ್ರಕಾಶ್ ತಮ್ಮ ಮೊದಲ ಚಿತ್ರದಲ್ಲಿ ಮಾಡಿದಂತೆಯೇ ಒಂದಲ್ಲಾ ಎರಡಲ್ಲಾ, ಚಿತ್ರದಲ್ಲೂ ಕುತೂಹಲ ಸೃಷ್ಟಿಸುತ್ತಿದ್ದಾರೆ. ಚಿತ್ರದ ಪ್ರತಿಯು ಸದ್ಯ ಸೆನ್ಸಾರ್ ಮಂಡಳಿಯಲ್ಲಿದ್ದು, ಇಂದು ಆಡಿಯೋವನ್ನು ಬಿಡುಗಡೆ ಮಾಡುತ್ತಿದ್ದಾರೆ.

ರಾಮಾ ರಾಮ ರೇ ಚಿತ್ರ  ನಿರ್ದೇಶಕ ಡಿ. ಸತ್ಯ ಪ್ರಕಾಶ್  ತಮ್ಮ ಮೊದಲ ಚಿತ್ರದಲ್ಲಿ ಮಾಡಿದಂತೆಯೇ ಒಂದಲ್ಲಾ  ಎರಡಲ್ಲಾ, ಚಿತ್ರದಲ್ಲೂ ಕುತೂಹಲ ಸೃಷ್ಟಿಸುತ್ತಿದ್ದಾರೆ. ಚಿತ್ರದ ಪ್ರತಿಯು ಸದ್ಯ  ಸೆನ್ಸಾರ್ ಮಂಡಳಿಯಲ್ಲಿದ್ದು, ಇಂದು ಆಡಿಯೋವನ್ನು ಬಿಡುಗಡೆ ಮಾಡುತ್ತಿದ್ದಾರೆ.

ವಿಶಿಷ್ಠ ರೀತಿಯ ಶಿರ್ಷೀಕೆ ಹಾಡು ಸೇರಿದಂತೆ ಈ ಚಿತ್ರದಲ್ಲಿ ನಾಲ್ಕು ಗೀತೆಗಳಿವೆ. ಈ ಗೀತೆಗಳಿಗೆ ವಾಸುಕಿ ವೈಭವ್ ಮತ್ತು ನೊಬಿನ್ ಪೌಲ್  ಸಂಗೀತ ಸಂಯೋಜನೆ ಮಾಡಿದ್ದಾರೆ.  ಅದಿತಿ ಮತ್ತು ಸುನಿದಿ ಎಂಬ ಇಬ್ಬರು ಮಕ್ಕಳು ಹಾಡಿರುವ ಹಾಡಿನೊಂದು ಚಿತ್ರವನ್ನು ಆರಂಭಿಸಲಾಗಿದೆ. ಇದು ಚಿತ್ರದ ಬಗ್ಗೆ ಸಂಕ್ಷಿಪ್ತ ವಿವರಣೆ ನೀಡುತ್ತದೆ. ಇದು ಸಿನಿಮಾದ ಶಿರ್ಷೀಕೆ ಕೂಡಾ ಆಗಿದೆ.
ಅದರ ಜೊತೆಗೆ ಪರಿಸ್ಥಿತಿ ಆಧಾರದ ಮೇಲೆ ಮೂರು ಗೀತೆಗಳಿವೆ. ಮೂರು ಗೀತೆಗಳನ್ನು ವಾಸುಕಿ ಧ್ವನಿ ನೀಡಿದ್ದಾರೆ. ಸಿನಿಮಾದಲ್ಲಿನ ಗೀತೆಗಳ ಮೂಲಕ ಪಾತ್ರ ಹೊರ ತರುವ ಪ್ರಯತ್ನ ನಡೆಸಲಾಗಿದೆ ಎಂದು ಅವರು ಹೇಳಿದ್ದಾರೆ.ಆಗಸ್ಟ್ ಮೊದಲ ಅಥವಾ ಎರಡನೇ ವಾರದಲ್ಲಿ ಚಿತ್ರ ಬಿಡುಗಡೆ ಮಾಡಲು ಸತ್ಯಪ್ರಕಾಶ್ ಭರವಸೆ ಇಟ್ಟುಕೊಂಡಿದ್ದಾರೆ. ಆದಾಗ್ಯೂ, ಸೆನ್ಸಾರ್ ಬೋರ್ಡ್ ನಿಂದ ದೊರೆಯುವ ಅಧಿಕೃತ ಪ್ರಮಾಣ ಪತ್ರವನ್ನು ಎಲ್ಲವೂ ಅವಲಂಬಿಸಿದೆ ಎಂದು ಅವರು ಹೇಳುತ್ತಾರೆ.


ಒಂದಲ್ಲಾ  ಎರಡಲ್ಲಾ ಚಿತ್ರವನ್ನು ಎನ್  ಸ್ಮಿತ್ ನಿರ್ಮಿಸುತ್ತಿದ್ದು, ನಿರ್ದೇಶಕ ಸತ್ಯ ಪ್ರಕಾಶ್  ಕಥೆ, ಹಾಗೂ ಸಾಹಿತ್ಯ ರಚಿಸಿದ್ದಾರೆ.   ಈ ಮಧ್ಯೆ ಲಾವಿತ್  ಛಾಯಾಗ್ರಾಹಣದಲ್ಲಿ ಬಿ.ಎಸ್. ಕೆಂಪರಾಜು ಸಂಕಲನ ಮಾಡಿದ್ದಾರೆ.  ಮಾಸ್ಟರ್ ಪಿವಿ ರೋಹಿತ್ ಮುಖ್ಯ ಪಾತ್ರದಲ್ಲಿ ಕಾಣಿಸಿಕೊಂಡಿದ್ದು,  ಸಾಯಿ ಕೃಷ್ಣ ಕುಡ್ಲಾ,  ಎಂ ಕೆ, ಮುತ್ತು, ಪ್ರಭುದೇವಲ್ ಹೊಸದುರ್ಗ ಮತ್ತಿತರರ ತಾರಾಗಣವಿದೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಜಮ್ಮುವಿನಲ್ಲಿ ಭೀಕರ ಮಳೆಯಿಂದ ಭಾರೀ ಅನಾಹುತ ಸೃಷ್ಟಿ: ವೈಷ್ಣೋದೇವಿ ಮಾರ್ಗದಲ್ಲಿ ಭೂಕುಸಿತ, ಕನಿಷ್ಠ 13 ಮಂದಿ ಸಾವು

ದೇಶಾದ್ಯಂತ ಗಣೇಶ ಚತುರ್ಥಿ ಸಂಭ್ರಮ: ದೇವಾಲಯಗಳಲ್ಲಿ ವಿಶೇಷ ಪೂಜೆ, ರಾಷ್ಟ್ರಪತಿ, ಪ್ರಧಾನಿ, ಮುಖ್ಯಮಂತ್ರಿಗಳಿಂದ ಶುಭಾಶಯ

ಬೂಕರ್ ಪ್ರಶಸ್ತಿ ಮಹತ್ವ ತಿಳಿದಿದ್ದರೆ ನನ್ನನ್ನು ಟೀಕಿಸುತ್ತಿರಲಿಲ್ಲ, ಸಾಹಿತ್ಯ ಸಮ್ಮೇಳನದ ವಿಡಿಯೋ ತಿರುಚಲಾಗಿದೆ: ಬಾನು ಮುಷ್ತಾಕ್

ಡಿಕೆಶಿ RSS ಗೀತೆ ಹೇಳಿದ್ದೂ ರಾಹುಲ್‌ ಗಾಂಧಿಗೆ ತಲುಪಲಿ: ಶಾಕ್ ಕೊಟ್ಟ ಸತೀಶ್‌ ಜಾರಕಿಹೊಳಿ ಹೇಳಿಕೆ

ಧರ್ಮಸ್ಥಳ ಕೇಸ್: ತನಿಖೆ ಶೀಘ್ರಗತಿ ಪೂರ್ಣಗೊಳಿಸಲು SIT ಪ್ರಯತ್ನ; ಗೃಹ ಸಚಿವ ಡಾ.ಜಿ.ಪರಮೇಶ್ವರ್

SCROLL FOR NEXT