ಸಿನಿಮಾ ಸುದ್ದಿ

'ನಟಸಾರ್ವಭೌಮ' ಚಿತ್ರದಲ್ಲಿ ಅನುಪಮ ಪರಮೇಶ್ವರನ್ ವಕೀಲೆ ಪಾತ್ರ

Nagaraja AB

 ಪವನ್  ಒಡೆಯರ್ ನಿರ್ದೇಶನದ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅಭಿನಯದ ನಟ ಸೌರ್ವಭೌಮ ಚಿತ್ರದಲ್ಲಿ ಅನುಪಮ ಪರಮೇಶ್ವರನ್  ಅಭಿನಯಿಸುತ್ತಿದ್ದು,  ಭಾನುವಾರದಿಂದ ಚಿತ್ರೀಕರಣದಲ್ಲಿ ಪಾಲ್ಗೊಂಡಿದ್ದಾರೆ ಎಂದು ತಿಳಿದುಬಂದಿದೆ.

ಈ  ಚಿತ್ರದಲ್ಲಿ ಪರಮೇಶ್ವರನ್  ಕಿರಿಯ ವಕೀಲೆ ಪಾತ್ರದಲ್ಲಿ ಕಾಣಿಸಿಕೊಂಡಿದ್ದು,  ಬೆಂಗಳೂರಿನಲ್ಲಿ ಆಕೆ ಅಭಿನಯದ ಹಲವು ದೃಶ್ಯಗಳನ್ನು ಚಿತ್ರೀಕರಿಸಿಕೊಳ್ಳಲಾಗಿದೆ.  ನಟ ಸಾರ್ವಭೌಮ ಚಿತ್ರದಲ್ಲಿ ಅಭಿನಯಿಸುತ್ತಿರುವುದು ಕುತೂಹಲ ಮೂಡಿಸಿದೆ ಎಂದು ಅವರು ಹೇಳಿದ್ದಾರೆ   ಚಿತ್ರದ ಪ್ರಮುಖ ಭಾಗವನ್ನು ಕೊಲ್ಕತ್ತಾದಲ್ಲಿ ಚಿತ್ರೀಕರಿಸಲು ನಿರ್ದೇಶಕರು ಯೋಜನೆ ಹಾಕಿಕೊಂಡಿದ್ದಾರೆ.

ಧೀರ ರಾಕ್ ಲೈನ್ ವೆಂಕಟೇಶ್ ಈ ಚಿತ್ರ ನಿರ್ಮಾಣ ಮಾಡುತ್ತಿದ್ದು, ಚಿತ್ರೀಕರಣ  ಭರದಿಂದ ಸಾಗುತ್ತಿದೆ.  ರಚಿತಾರಾಮ್  ಪತ್ರಕರ್ತೆಯಾಗಿ ನಟಿಸುತ್ತಿದ್ದಾರೆ. ಉಳಿದಂತೆ ರವಿಶಂಕರ್ , ಚಿಕ್ಕಣ್ಣ ಮೊದಲಾದವರು ಪ್ರಮುಖ ಪಾತ್ರದಲ್ಲಿ ಅಭಿನಯಿಸುತ್ತಿದ್ದಾರೆ. ಡಿ. ಇಮ್ರಾನ್ ಸಂಗೀತ ಸಂಯೋಜಿಸಿದ್ದು, ವೈದೀ ಛಾಯಾಗ್ರಹಣ ಒದಗಿಸಿದ್ದಾರೆ.ದಸರಾ ವೇಳೆಯಲ್ಲಿ  ಚಿತ್ರ ಬಿಡುಗಡೆ ಮಾಡುವ ಸಾಧ್ಯತೆ ಇದೆ.

SCROLL FOR NEXT