ಸಿನಿಮಾ ಸುದ್ದಿ

ನಟಿ ಶ್ರೀರೆಡ್ಡಿಯನ್ನು 'ವೇಶ್ಯೆ' ಎಂದ ತೆಲುಗು ನಿರ್ದೇಶಕ!

Vishwanath S
ಟಾಲಿವುಡ್ ನ ಕಾಸ್ಟಿಂಗ್ ಕೌಚ್ ಬಗ್ಗೆ ಮಾತನಾಡಿ ಚಿತ್ರರಂಗದಲ್ಲಿ ಬಿರುಗಾಳಿ ಎಬ್ಬಿಸಿದ್ದ ನಟಿ ಶ್ರೀರೆಡ್ಡಿಯನ್ನು ತೆಲುಗು ನಿರ್ದೇಶಕರೊಬ್ಬರು ವೇಶ್ಯೆ ಎಂದು ಕರೆದಿದ್ದಾರೆ. 
ನಟಿ ಶ್ರೀರೆಡ್ಡಿ ಅವಮಾನವನ್ನುಂಟು ಮಾಡುವ ರೀತಿಯಲ್ಲಿ ವರ್ತಿಸುತ್ತಿದ್ದಾರೆ. ಚಿತ್ರದಲ್ಲಿ ನಟಿಸುವ ಅವಕಾಶಕ್ಕಾಗಿ ನಿರ್ದೇಶಕರು ಹಾಗೂ ನಟರ ಜೊತೆ ಮಲಗಿರುವುದಾಗಿ ಸ್ವತಃ ಶ್ರೀರೆಡ್ಡಿ ಅವರೇ ಒಪ್ಪಿಕೊಂಡಿದ್ದಾರೆ. ಹೀಗಾಗಿ ಆಕೆ ವಿರುದ್ಧ ವೇಶ್ಯಾವಾಟಿಕೆ ಆರೋಪ ದೂರು ದಾಖಲಿಸಬೇಕು. 
ನಟ-ನಿರ್ದೇಶಕರ ವಿರುದ್ಧ ಲೈಂಗಿಕ ಕಿರುಕುಳ ಆರೋಪ ಮಾಡುವ ಮೂಲಕ ಹಣ ಪಡೆಯುವ ಪ್ರಯತ್ನ ಮಾಡುತ್ತಿದ್ದು ಇದು ಮಹಿಳೆಯರಿಗೆ ಹಾಗೂ ಸಮಾಜಕ್ಕೆ ಕಪ್ಪು ಚುಕ್ಕೆ ಇದ್ದಂತೆ. ಹೀಗಾಗಿ ಆಕೆ ವಿರುದ್ಧ ಪೊಲೀಸರು ಸೂಕ್ತ ಕ್ರಮಕೈಗೊಳ್ಳಬೇಕು ಎಂದು ಹೇಳಿದ್ದಾರೆ. 
ಇನ್ನು ತಮ್ಮ ವಿರುದ್ಧ ವೇಶ್ಯೆ ಹೇಳಿಕೆ ನೀಡಿರುವ ನಿರ್ದೇಶಕ ವರಹಿ ವಿರುದ್ಧ ಶ್ರೀರೆಡ್ಡಿ ಪೊಲೀಸರಿಗೆ ದೂರು ನೀಡಿದ್ದಾರೆ.
ತೆಲುಗು ಚಿತ್ರರಂಗದಲ್ಲಿನ ನಡೆಯುತ್ತಿರುವ ಕಾಸ್ಟಿಂಗ್ ಕೌಚ್(ಲೈಂಗಿಕ ಕಿರುಕುಳ) ನಿಲ್ಲಿಸಬೇಕು ಎಂದು ಒತ್ತಾಯಿಸಿ ಟಾಲಿವುಡ್ ನಟಿ ಶ್ರೀರೆಡ್ಡಿ ಅವರು ಈ ಹಿಂದೆ ತೆಲುಗು ಚಲನಚಿತ್ರ ವಾಣಿಜ್ಯ ಮಂಡಳಿ ಮುಂಭಾಗ ಮಾಧ್ಯಮಗಳ ಮುಂದೆಯೇ ಬಟ್ಟೆ ಕಳಚಿ ಅರೆನಗ್ನ ಪ್ರತಿಭಟನೆ ನಡೆಸಿದರು. 
SCROLL FOR NEXT